ಎಚ್ಎಎಲ್-ಬಿಇಎಲ್ ನಡುವೆ 2,400 ಕೋಟಿ ರು ಒಪ್ಪಂದ
ಬೆಂಗಳೂರು, ಡಿಸೆಂಬರ್ 16: ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಎರಡು ದೊಡ್ಡ ಸಂಸ್ಥೆಗಳ ನಡುವೆ ಬೃಹತ್ ಒಪ್ಪಂದಕ್ಕೆ ಗುರುವಾರದಂದು ಸಹಿ ಹಾಕಲಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆ ಸುಮಾರು 2,400 ಕೋಟಿ ರು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಲಘು ಯುದ್ಧ ವಿಮಾನ LCA ತೇಜಸ್ Mk1A ಕಾರ್ಯಕ್ರಮಕ್ಕಾಗಿ 20 ರೀತಿಯ ವ್ಯವಸ್ಥೆಗಳ ಪೂರೈಕೆ ಮಾಡಲು ಒಪ್ಪಂದವಾಗಿದೆ. 2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದವು ರೂ 2,400 ಕೋಟಿ ಮೌಲ್ಯದ್ದಾಗಿದೆ ಮತ್ತು ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್ಗಳು (ಎಲ್ಆರ್ಯುಗಳು), ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್ಗಳು ಮತ್ತು ರಾತ್ರಿ ಹಾರುವ ಎಲ್ಆರ್ಯುಗಳನ್ನು ಪೂರೈಸುವುದನ್ನು ಒಳಗೊಂಡಿರುತ್ತದೆ, ಬೆಂಗಳೂರು ಪ್ರಧಾನ ಕಛೇರಿ ಹೊಂದಿರುವ ಎಚ್ಎಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
"ಆತ್ಮನಿರ್ಭರ್ ಭಾರತ್" ಅಭಿಯಾನವನ್ನು ಉತ್ತೇಜಿಸುವ ಯಾವುದೇ ಭಾರತೀಯ ಕಂಪನಿಯ ಮೇಲೆ ಎಚ್ಎಎಲ್ ಮಾಡಿಕೊಂಡಿರುವ ಅತಿದೊಡ್ಡ ಒಪ್ಪಂದ ಹಾಗೂ ವರ್ಕ್ ಆರ್ಡರ್ ಇದಾಗಿದೆ"

"ಎಲ್ಸಿಎ ತೇಜಸ್ ಕಾರ್ಯಕ್ರಮವು ಎಚ್ಎಎಲ್, ಡಿಆರ್ಡಿಒ ಮತ್ತು ಬಿಇಎಲ್ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ ನಡುವಿನ ಸಹಭಾಗಿತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ,''
''ತೇಜಸ್ Mk1A ಗಾಗಿ 20 ವಿಧದ ನಿರ್ಣಾಯಕ ಏವಿಯಾನಿಕ್ಸ್ LRU ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಪ್ರಸ್ತುತ ಆದೇಶವು ಮೇಕ್ ಇನ್ ಇಂಡಿಯಾ ಚಟುವಟಿಕೆಗಾಗಿ ಶಾಟ್-ಇನ್-ದಿ-ಆರ್ಮ್ ಆಗಿದೆ" ಎಂದು HAL ಸಿಎಂಡಿ ಆರ್ ಮಾಧವನ್ ಹೇಳಿದ್ದಾರೆ.
"ಪ್ರತಿಷ್ಠಿತ ಎಲ್ಸಿಎ ತೇಜಸ್ ಕಾರ್ಯಕ್ರಮಕ್ಕಾಗಿ ಎಚ್ಎಎಲ್ನಿಂದ ಈ ಆದೇಶವನ್ನು ಸ್ವೀಕರಿಸಲು ನಾವು ಸಂತೋಷಪಡುತ್ತೇವೆ ಮತ್ತು ಎಚ್ಎಎಲ್ನೊಂದಿಗೆ ಬಲವಾದ ಪಾಲುದಾರಿಕೆ ಮತ್ತು ಜಂಟಿ ಯಶಸ್ಸನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ" ಎಂದು ಬಿಇಎಲ್ ಸಿಎಂಡಿ ಆನಂದಿ ರಾಮಲಿಂಗಂ ಹೇಳಿದ್ದಾರೆ.
83 ತೇಜಸ್ Mk1A ಫೈಟರ್ ಫ್ಲೀಟ್ಗೆ ಈ ವ್ಯವಸ್ಥೆಗಳ ಪೂರೈಕೆಯ ಆದೇಶವನ್ನು ಬಿಇಎಲ್, ಬೆಂಗಳೂರು ಮತ್ತು ಪಂಚಕುಲ (ಹರಿಯಾಣ) ಎರಡು ವಿಭಾಗಗಳು ಕಾರ್ಯಗತಗೊಳಿಸುತ್ತವೆ. ಒಪ್ಪಂದ ಮಾಡಿಕೊಂಡಿರುವ ಎಲ್ಲ ವಸ್ತುಗಳನ್ನು ಬಿಇಎಲ್ನಿಂದ ಎಚ್ಎಎಲ್ಗೆ ಸಿದ್ಧ ಸ್ಥಿತಿಯಲ್ಲಿರುವಂತೆ ವಿತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2023-24 ರಿಂದ IAF ಗೆ 83 ತೇಜಸ್ Mk1A ಆದೇಶದ ಅಡಿಯಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ. ಸ್ವದೇಶಿ-ನಿರ್ಮಿತ ಯುದ್ಧವಿಮಾನವು ಸ್ವದೇಶಿ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್ಗಳು, ಏರ್ ಡೇಟಾ ಕಂಪ್ಯೂಟರ್ಗಳನ್ನು ಹೊಂದಿದ್ದು, ಈ ಒಪ್ಪಂದದ ಅಡಿಯಲ್ಲಿ ಬಿಇಎಲ್ ನಿಂದ ಸರಬರಾಜು ಮಾಡಲಾಗುವುದು. ಈ ವ್ಯವಸ್ಥೆಗಳನ್ನು ಡಿಆರ್ಡಿಒ ಮತ್ತು ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್ಗಳು ವಿನ್ಯಾಸಗೊಳಿಸಿವೆ ಮತ್ತು ಅಭಿವೃದ್ಧಿಪಡಿಸಿವೆ.
Recommended Video
ಗುತ್ತಿಗೆ ದಾಖಲೆಗಳನ್ನು ಜನರಲ್ ಮ್ಯಾನೇಜರ್ LCA ತೇಜಸ್ ವಿಭಾಗ, HAL, E P ಜಯದೇವ ಅವರು ಜನರಲ್ ಮ್ಯಾನೇಜರ್ (EW&A) BEL, ಮನೋಜ್ ಜೈನ್ ಅವರಿಗೆ ಹಸ್ತಾಂತರಿಸಿದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications