Gold Price on Feb 8: ಇಂದಿನ ಚಿನ್ನ ಬೆಳ್ಳಿ ದರದ ಅಪ್ಡೇಟ್, ನಗರವಾರು ದರಪಟ್ಟಿ ಇಲ್ಲಿದೆ
ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಸಮಯದಲ್ಲೇ ಭಾರೀ ಬದಲಾವಣೆ ಆಗಿದೆ. ವಾರದ ಅಂತರದಲ್ಲಿ ನಿರಂತರವಾಗಿ ಹೆಚ್ಚಾಗಿದ್ದ ಈ ಲೋಹಗಳ ಬೆಲೆಗಳು ದಿನಗಳ ಅಂತರದಲ್ಲಿ ಭರ್ಜರಿ ಇಳಿಕೆ ಆಗಿ, ಸಹಜ ಸ್ಥಿತಿಯತ್ತ ಮರಳಿವೆ. ಏರಿಕೆ ಕಂಡಿದ್ದ ಚಿನ್ನವು ತನ್ನ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಆದರೆ ಬೆಳ್ಳಿ ನಿರಂತರ ಇಳಿಕೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿಲ್ಲ, ಅದು ಇನ್ನಷ್ಟು ಆಗುವ ಸಾಧ್ಯತೆ ಇದೆ. ಇದರ ವಿಶ್ಲೇಷಣೆ ಇಲ್ಲಿದೆ.
ಇಂದು ಭಾನುವಾರ (ಫೆ.8) 22 ಕ್ಯಾರಟ್ ಒಂದು ಗ್ರಾಂ ಬೆಲೆ 14,335 ರೂ.ನಷ್ಟಿತ್ತು ಮತ್ತು 24 ಕ್ಯಾರಟ್ ಒಂದು ಗ್ರಾಂ ಚಿನ್ನದ ದರ 15,660 ರೂಪಾಯಿ ಇದ್ದು, ಒಂದು ವಾರದ ಹಿಂದೆ ಫೆಬ್ರವರಿ 1ರಂದು ಭಾನುವಾರ ಇದೇ ಚಿನ್ನಕ್ಕೆ ಕ್ರಮವಾಗಿ 14, 770 ರೂಪಾಯಿ ಮತ್ತು 16,058 ರೂಪಾಯಿಗೆ ಇಳಿದಿತ್ತು. ಅಲ್ಲಿಂದ ಈವರೆಗೆ ಮೂರು ಬಾರಿ ಇಳಿಕೆ ಹಾಗೂ ಮೂರು ಬಾರಿ ಏರಿಕೆ ಆದರೂ ಸಹಿತ ಮೂಲಕ ಚಿನ್ನವು ತೀವ್ರ ಕುಸಿತ ಕಂಡಿಲ್ಲ. ಬದಲಾಗಿ ಬೆಲೆಯಲ್ಲಿ ತಕ್ಕಮಟ್ಟಿನ ಸ್ಥಿರತೆ ಕಾಯ್ದುಕೊಂಡಿದೆ ಎನ್ನಬಹುದು.

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 1,56,600 ರೂಪಾಯಿ ಇದೆ. 22 ಕ್ಯಾರಟ್ ಹತ್ತು ಗ್ರಾಂ ಚಿನ್ನದ ದರ 1,43,550 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಇದರ ದರ ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆ ಇದೆ. ಮದುವೆ, ಇನ್ನಿತರ ಸಮಾರಂಭಗಳಿಗೆ ಚಿನ್ನ ಖರೀದಿಸುವ ಗ್ರಾಹಕರು ದರ ಇಳಿಕೆಗಾಗಿ ಕಾಯುವಂತಾಗಿದೆ. ದರ ಇಳಿಕೆಯು ಹೂಡಿಕೆದಾರರಿಗೆ ನಷ್ಟ ನೀಡಲಿದೆ.
ಬೆಳ್ಳಿ ದರದಲ್ಲಿ ಆದ ವ್ಯತ್ಯಾಸವೇನು?
ಬೆಳ್ಳಿ ದರವು ಇಂದು ಒಂದು ಕೆಜಿಗೆ 2,85,000 ರೂ. ಮತ್ತು 100 ಗ್ರಾಂ ದರ 28,500 ರೂಪಾಯಿ ಇದೆ. ವಾರದ ಹಿಂದೆ ಅಂದರೆ ಫೆಬ್ರವರಿ 1ರಂದು ಭಾನುವಾರ 100 ಗ್ರಾಂ ಇದೇ ಬೆಳ್ಳಿಗೆ ಬರೋಬ್ಬರಿ 35,000 ರೂಪಾಯಿ ಇತ್ತು. ನಂತರ ನಾಲ್ಕು ಬಾರಿ ದರ ಕುಸಿತ ಹಾಗೂ ಎರಡು ಬಾರಿಯ ಏರಿಕೆ ಆಗಿದೆ. ಇದರಿಂದ ಬೆಳ್ಳಿಯು ಇಳಿಮುಖದತ್ತ ಸಾಗಿದ್ದು ಗೊತ್ತಾಗುತ್ತದೆ. 4,10,000 ರೂ. ತಲುಪಿ ಗಗನ ಮುಟ್ಟಿದ್ದ ಶ್ವೇತ ಲೋಹವು ಕಡಿಮೆ ಅವಧಿಯಲ್ಲಿ ಮಹಾ ಕುಸಿತ ಅನುಭವಿಸಿದೆ. ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದ್ದು, ಹೂಡಿಕೆದಾರರಿಗೆ ಆಘಾತ ನೀಡಿದೆ.
ಇಂದಿನ 22k ಚಿನ್ನದ ನಗರವಾರು ವಿವರ ಇಲ್ಲಿದೆ
ಬೆಂಗಳೂರು: 14,355 ರೂಪಾಯಿ
ಚೆನ್ನೈ: 14,420 ರೂಪಾಯಿ
ಕೇರಳ: 14,355 ರೂಪಾಯಿ
ಭುವನೇಶ್ವರ್: 14,355 ರೂರೂಪಾಯಿ
ಅಹ್ಮದಾಬಾದ್: 14,360 ರೂಪಾಯಿ
ಮುಂಬೈ: 14,355 ರೂಪಾಯಿ
ದೆಹಲಿ: 14,370 ರೂಪಾಯಿ
ಕೋಲ್ಕತಾ: 14,355 ರೂಪಾಯಿ
ಜೈಪುರ್: 14,370 ರೂಪಾಯಿ
ಲಕ್ನೋ: 14,370 ರೂಪಾಯಿ
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications