ಕುಸಿದ ಆರ್ಥಿಕ ಪ್ರಗತಿ; ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಳಪೆ
ಇದೇ ಆರ್ಥಿಕ ವರ್ಷದಲ್ಲಿ ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಆದ ಪ್ರಗತಿ ಇಳಿಕೆ. ಅಪನಗದೀಕರಣ, ಜಿಎಸ್ ಟಿ ಪರಿಣಾಮಗಳಿಂದಾಗಿ ಆರ್ಥಿಕ ಬೆಳವಣಿಗೆಗೆ ಹೊಡೆತ.
ನವದೆಹಲಿ, ಸೆಪ್ಟಂಬರ್ 1: ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ ನಿಂದ ಜೂನ್ ವರೆಗಿನ ಆರ್ಥಿಕ ಬೆಳವಣಿಗೆಯು ಶೇ. 5.7ರಷ್ಟು ಕುಗ್ಗಿದ್ದು, ಇದು ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ಆರ್ಥಿಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.
ಈ ಸ್ಥಿತಿಗೆ ಎರಡು ಕಾರಣಗಳನ್ನು ಆರ್ಥಿಕ ತಜ್ಞರು ಕಂಡುಕೊಂಡಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ನಡೆದ ಅಪನಗದೀಕರಣ ಒಂದು ಕಾರಣವಾದರೆ, ಜಿಎಸ್ ಟಿ ಪರಿಣಾಮವಾಗಿ ಆ ಮೂರು ತಿಂಗಳ ಅವಧಿಯಲ್ಲಿ ಹಳೆಯ ಸರಕುಗಳನ್ನು ಬೇಗನೇ ವಿಲೇವಾರಿ ಮಾಡುವಂಥ ಒತ್ತಡಕ್ಕೆ ವ್ಯಾಪಾರಿಗಳು ಸಿಲುಕಿದ್ದು ಮತ್ತೊಂದು ಕಾರಣ ಎನ್ನಲಾಗಿದೆ.

ಏಷ್ಯಾದಲ್ಲಿ ಭಾರತದ ಆರ್ಥಿಕತೆಗೆ ಪ್ರಬಲ ಪೈಪೋಟಿಯೊಡ್ಡಿರುವ ಚೀನಾ ದೇಶದ ಆರ್ಥಿಕ ಪ್ರಗತಿಯು ಇದೇ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ ಭಾರತಕ್ಕಿಂತ ಉತ್ತಮವಾಗಿದೆ. ಅದರ ಜಿಡಿಪಿ ಬೆಳವಣಿಗೆ 6.9ರಷ್ಟು ಹೆಚ್ಚಿದೆ. ಆದರೆ, ಅದರ ಮುಂದೆ ಭಾರತ ನೀರಸ ಸಾಧನೆ ಮಾಡಿದೆ ಎಂದು ಹೇಳಲಾಗಿದೆ.
ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಉತ್ಪಾದನಾ ವಲಯವು ಶೇ. 1.2ರಷ್ಟು ಹಿನ್ನಡೆ ಅನುಭವಿಸಿದ್ದರೆ, ಗಣಿಗಾರಿಕೆಯಂಥ ಬೃಹತ್ ಉದ್ದಿಮೆಗಳು 0.7ರಷ್ಟು ಹಿನ್ನಡೆ ಅನುಭವಿಸಿವೆ.
ಆದರೆ, ಇದರ ನಡುವೆಯೂ ಕೆಲ ಕ್ಷೇತ್ರಗಳ ಆರ್ಥಿಕ ಬೆಳವಣಿಗೆ ಚೇತೋಹಾರಿಯಾಗಿದೆ. ವಿದ್ಯುತ್ ಕ್ಷೇತ್ರವು ಶೇ. 7ರಷ್ಟು, ವ್ಯಾಪಾರ, ಹೋಟೆಲ್, ಸಂಪರ್ಕ ಕ್ಷೇತ್ರಗಳು ಶೇ 11.1 ರಷ್ಟು, ನಿರ್ಮಾಣ ಕ್ಷೇತ್ರ ಶೇ. 2ರಷ್ಟು ಪ್ರಗತಿ ಸಾಧಿಸಿವೆ ಎಂದು ಹೇಳಲಾಗಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications