2023 ರಿಂದ ಭಾರತದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ?
ನವದೆಹಲಿ, ಜೂ. 30: ಮುಂದಿನ ವರ್ಷ ಏಪ್ರಿಲ್ನಿಂದ ದೇಶದ ಕೆಲವು ಭಾಗಗಳಲ್ಲಿ ಗ್ಯಾಸೋಲಿನ್ನೊಂದಿಗೆ ಶೇ. 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪರಿಚಯಿಸಲು ಭಾರತ ಯೋಜಿಸಿದೆ.
ಆದರೆ ಕೇಂದ್ರ ಸರ್ಕಾರವು 2025- 26ರಿಂದ ರಾಷ್ಟ್ರವ್ಯಾಪಿ ಈ ಯೋಜನೆ ಜಾರಿಯನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಏರುತ್ತಿರುವ ತೈಲ ಬೆಲೆಗಳಿಂದ ತೀವ್ರವಾದ ಕಾವು ಭಾರತವು ತೈಲದ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ಆಮದು ಪಾವತಿಯನ್ನು ಕಡಿತಗೊಳಿಸಲು ಪರ್ಯಾಯ ಇಂಧನಗಳಿಗೆ ಪರಿವರ್ತನೆಯ ಪ್ರಯತ್ನಗಳನ್ನು ತ್ವರಿತಗೊಳಿಸಿದೆ.
ಕಳೆದ ಮೂರು ತಿಂಗಳುಗಳಿಂದ ಭಾರತವು ಸುಮಾರು ಶೇ. 10.5 ಎಥೆನಾಲ್ ಅನ್ನು ಗ್ಯಾಸೋಲಿನ್ನೊಂದಿಗೆ ಬೆರೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಎಥೆನಾಲ್ ಮಿಶ್ರಣದಿಂದ ಈ ಆರ್ಥಿಕ ವರ್ಷದಲ್ಲಿ 500 ಶತಕೋಟಿ ಭಾರತೀಯ ರೂಪಾಯಿಗಳನ್ನು ($6.45 ಶತಕೋಟಿ) ಉಳಿಸಲು ಸರ್ಕಾರ ಎದುರು ನೋಡುತ್ತಿದೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಭಾರತವು ಗ್ರಾಹಕರ ಬೇಡಿಕೆಯ ಸುಮಾರು ಶೇ. 85 ಪೂರೈಕೆಗಾಗಿ ವಿದೇಶಿ ಪೂರೈಕೆದಾರರನ್ನು ಅವಲಂಬಿಸಿದೆ. ಬಿಸಿಗಾಳಿಯನ್ನು ತಪ್ಪಿಸಲು ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುವುದರಿಂದ ಭಾರತದ ಗ್ಯಾಸೋಲಿನ್ ಬೇಡಿಕೆಯು ಈಗಾಗಲೇ ತೀವ್ರಗತಿಯಲ್ಲಿ ವೇಗದಲ್ಲಿ ಏರುತ್ತಿದೆ.
ಹಿಂದಿನ ತಿಂಗಳಿನ ಇದೇ ಅವಧಿಗಿಂತ ಮೇ ತಿಂಗಳ ಮೊದಲಾರ್ಧದಲ್ಲಿ ಭಾರತದ ಗ್ಯಾಸೋಲಿನ್ ಬೇಡಿಕೆಯು ಸುಮಾರು ಶೇ. 14 ರಷ್ಟು ಏರಿಕೆಯಾಗಿದೆ ಎಂದು ಈ ಮೂಲಗಳು ಹೇಳಿದ್ದು, ಆದರೆ ಪೆಟ್ರೋಲ್ ಬೇಡಿಕೆಯು ಸುಮಾರು ಶೇ. 2 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. 2030 ರಿಂದ 2025- 26ಕ್ಕೆ ಗ್ಯಾಸೋಲಿನ್ನೊಂದಿಗೆ ಶೇ. 20 ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಮುಂದಕ್ಕೆ ತರಲು ಜೈವಿಕ ಇಂಧನ ನೀತಿಯಲ್ಲಿ ಬದಲಾವಣೆಗಳನ್ನು ಭಾರತೀಯ ಕ್ಯಾಬಿನೆಟ್ ಬುಧವಾರ ಅನುಮೋದಿಸಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಜೈವಿಕ ಇಂಧನ ಉತ್ಪಾದನೆ ಮತ್ತು ಅವುಗಳ ರಫ್ತಿಗೆ 'ನಿರ್ದಿಷ್ಟ ಸಂದರ್ಭದಲ್ಲಿ' ಹೆಚ್ಚಿನ ಫೀಡ್ಸ್ಟಾಕ್ ಬಳಕೆಯನ್ನು ಸರ್ಕಾರ ಅನುಮತಿಸಿದೆ. ಇಲ್ಲಿಯವರೆಗೆ, ಭಾರತವು ಇಂಧನ ಉತ್ಪಾದನೆಗೆ ಹೆಚ್ಚುವರಿ ಅಕ್ಕಿ ಮತ್ತು ಮೆಕ್ಕೆಜೋಳ, ಕಾಕಂಬಿ, ಕಬ್ಬಿನ ರಸ, ಸಕ್ಕರೆ ಮತ್ತು ಹಾನಿಗೊಳಗಾದ ಆಹಾರ ಧಾನ್ಯಗಳಂತಹ ವಸ್ತುಗಳನ್ನು ಬಳಸಲು ಅನುಮತಿ ನೀಡಿದೆ.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications