ಸಿದ್ಧಾರ್ಥ್ಗೆ ಕಿರುಕುಳ ಆರೋಪ: ಐಟಿ ಇಲಾಖೆಯ ಮಹತ್ವದ ಹೇಳಿಕೆ
Recommended Video
ಬೆಂಗಳೂರು, ಜುಲೈ 30: ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿ.ಜಿ. ಸಿದ್ಧಾರ್ಥ ಅವರಿಗೆ ತಮ್ಮ ಅಧಿಕಾರಿಗಳು ಕಿರುಕುಳ ನೀಡಿದ್ದರು ಎನ್ನಲಾದ ಪತ್ರವೊಂದರ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಜತೆಗೆ, ಸಿದ್ಧಾರ್ಥ ಅವರ ಆದಾಯ ತೆರಿಗೆ ವಹಿವಾಟಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ, ಪ್ರಮುಖ ದಾಖಲೆಗಳ ಕುರಿತು ಐಟಿ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ವಿವರಣೆ ನೀಡಿದೆ. 11 ಅಂಶಗಳನ್ನು ಪಟ್ಟಿ ಮಾಡಿ ನೀಡಿರುವ ಆದಾಯ ತೆರಿಗೆ ಸಿದ್ಧಾರ್ಥ ಅವರ ಬಳಿಯಿದ್ಧ ಅಘೋಷಿತ ಹಣದ ಕುರಿತು ಮಾಹಿತಿ ನೀಡಿದೆ.
ಸಿಸಿಡಿ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರವು ಎಲ್ಲ ಕಡೆ ಪ್ರಸಾರವಾಗುತ್ತಿದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆಯು ಕಾಫಿ ಡೇ ಷೇರುಗಳನ್ನು ಮುಟ್ಟುಗೋಲು ಹಾಕಿರುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಒಕ್ಕಣೆಯ ಅಧಿಕೃತತೆ ತಿಳಿದಿಲ್ಲ. ಅದರಲ್ಲಿ ಮಾಡಿರುವ ರುಜು, ವಿಜಿ ಸಿದ್ಧಾರ್ಥ ಅವರು ತಮ್ಮ ವಾರ್ಷಿಕ ವರದಿಗಳಲ್ಲಿ ಸಲ್ಲಿಸಿರುವ ರುಜುವಿಗೆ ತಾಳೆಯಾಗುತ್ತಿಲ್ಲ ಎಂದು ಇಲಾಖೆ ಹೇಳಿದೆ.
ವಿಜಿ ಸಿದ್ಧಾರ್ಥ ಮತ್ತು ಕೆಫೆ ಕಾಫಿ ಡೇ ಪ್ರಕರಣದ ತನಿಖೆಯು ಕರ್ನಾಟಕದ ಪ್ರಮುಖ ರಾಜಕೀಯ ಮುಖಂಡರೊಬ್ಬರ ಪ್ರಕರಣದಿಂದಾಗಿ ಉದ್ಭವವಾಯಿತು. ಸಿಸಿಡಿಯು ಗೋಪ್ಯವಾಗಿ ಹಣಕಾಸು ವ್ಯವಹಾರಗಳನ್ನು ನಡೆಸಿರುವುದಕ್ಕೆ ನಂಬಲರ್ಹ ಸಾಕ್ಷ್ಯಗಳ ಅಧಾರದಲ್ಲಿ ಈ ತನಿಖೆ ನಡೆಸಲಾಯಿತು.
ಸಿಂಗಪುರದ ಪೌರತ್ವ ಪಡೆದಿರುವ ವ್ಯಕ್ತಿಯೊಬ್ಬರನ್ನು ಕೂಡ ಈ ಪ್ರಕರಣದ ತನಿಖೆಯಲ್ಲಿ ಒಳಗೊಳ್ಳಲಾಗಿದೆ. ಅವರ ಬಳಿ 1.2 ಕೋಟಿ ರೂಪಾಯಿ ಮೌಲ್ಯದ ದಾಖಲಾಗದ ಹಣ ಪತ್ತೆಯಾಗಿತ್ತು. ಇದು ವಿಜಿ ಸಿದ್ಧಾರ್ಥ ಅವರಿಗೆ ಸೇರಿದ್ದು ಎಂದು ಅವರು ಒಪ್ಪಿಕೊಂಡಿದ್ದರು.

ಹಣ ತಮ್ಮದೆಂದು ಒಪ್ಪಿಕೊಂಡಿದ್ದ ಸಿದ್ಧಾರ್ಥ
ಇಲಾಖೆಯು ಪತ್ತೆ ಕಾರ್ಯಾಚರಣೆ ವೇಳೆ ಪರಿಣಾಮಕಾರಿ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ ವಿಜಿ ಸಿದ್ಧಾರ್ಥ ಅವರು, 362.11 ಕೋಟಿ ರೂಪಾಯಿ ಹಾಗೂ 118.02 ಕೋಟಿ ರೂಪಾಯಿ ದಾಖಲೆ ಇಲ್ಲದ ಆದಾಯವು ತಮ್ಮ ಹಾಗೂ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಬಳಿ ಇರುವುದಾಗಿ ಒಪ್ಪಿಕೊಂಡಿದ್ದರು.

ತೆರಿಗೆ ಪಾವತಿ ಮಾಡಿರಲಿಲ್ಲ
ಐಟಿ ರಿಟರ್ನ್ ಸಲ್ಲಿಸಿದ್ದ ಸಿದ್ಧಾರ್ಥ ಅವರು ತಮ್ಮ ವೈಯಕ್ತಿಕ ಪ್ರಕರಣದಲ್ಲಿನ ಸುಮಾರು 35 ಕೋಟಿ ರೂಪಾಯಿಯನ್ನು ಹೊರತುಪಡಿಸಿ ಈ ಮೇಲೆ ಒಪ್ಪಿಕೊಂಡಿದ್ದ ಬಹಿರಂಗಪಡಿಸದ ಆದಾಯದ ಮೇಲೆ ತೆರಿಗೆ ಪಾವತಿ ಮಾಡಲು ಮುಂದಾಗಿರಲಿಲ್ಲ. ಅಲ್ಲದೆ, ಸಮೂಹ ಕಂಪೆನಿಗಳಲ್ಲಿ ಒಂದಾದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮರು ಆದಾಯದ ಮೇಲಿನ 14.5 ಕೋಟಿ ರೂಪಾಯಿ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಪಾವತಿಸಿರಲಿಲ್ಲ. ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ತನ್ನ ಭಾಗದ ಒಪ್ಪಿಕೊಂಡ ಆದಾಯದ ತೆರಿಗೆ ಪಾವತಿಗೆ ಮುಂದಾಗಿರಲಿಲ್ಲ.

ವರದಿ ಆಧಾರದಲ್ಲಿ ಕಾರ್ಯಾಚರಣೆ
2019ರ ಜನವರಿ 21ರಂದು ಪ್ರಮುಖ ಸುದ್ದಿಪತ್ರಿಕೆಗಳು ವಿಜಿ ಸಿದ್ಧಾರ್ಥ ಅವರು ತಮ್ಮ ಮತ್ತು ತಮ್ಮ ಕಂಪೆನಿಯ ನೇತೃತ್ವದ ಮೈಂಡ್ ಟ್ರೀ ಲಿ.ಯ ಈಕ್ವಿಟಿ ಷೇರುಗಳನ್ನು ಕೂಡಲೇ ಮಾರಾಟಕ್ಕೆ ಚಿಂತನೆ ನಡೆಸಿದ್ದಾರೆ ಎಂದು ವರದಿ ಮಾಡಿದ್ದವು. ಈ ವರದಿಯ ಆಧಾರದ ಮೇಲೆ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ನಡೆಸಲಾಯಿತು. ವಿಜಿ ಸಿದ್ಧಾರ್ಥ, ಅವರ ಕಾಫಿ ಡೇ ಎಂಟರ್ಪ್ರೈಸಸ್ ಮತ್ತು ಕಾಫಿ ಡೇ ಟ್ರೇಡಿಂಗ್ ಲಿ. ಮೈಂಡ್ ಟ್ರೀಯಲ್ಲಿ ಶೇ 21ರಷ್ಟು ಷೇರುಗಳನ್ನು ಹೊಂದಿರುವುದು ತಿಳಿದುಬಂದಿತು. ಇದರ ಜತೆಗೆ 2019 ಜನವರಿಯಲ್ಲಿ ಅಂತಿಮಗೊಳ್ಳಬೇಕಿದ್ದ ಷೇರುಗಳ ಮಾರಾಟದ ಒಪ್ಪಂದದ ಕುರಿತು ಸಹ ಮಾಹಿತಿ ದೊರಕಿತ್ತು.

ಮೌಲ್ಯಮಾಪನ ಅರ್ಜಿ ಸಲ್ಲಿಸಿರಲಿಲ್ಲ
ಶೋಧ ಕಾರ್ಯಾಚರಣೆಯ ಬಳಿಕ ಬಾಕಿ ಉಳಿದ ಬಡ್ಡಿ ಮತ್ತು ಪೆನಾಲ್ಟಿ ರೂಪದಲ್ಲಿನ ತೆರಿಗೆ ನೂರಾರು ಕೋಟಿ ಮೌಲ್ಯದ್ದಾಗಿತ್ತು. ಇನ್ನೊಂದೆಡೆ, ಆದಾಯ ತೆರಿಗೆ ಪ್ರಕ್ರಿಯೆ ಇನ್ನೂ ಬಾಕಿ ಇರುವಾಗ ಯಾವುದೇ ಆಸ್ತಿಯ ವರ್ಗಾವಣೆ ಮಾಡುವ ಮೊದಲು ಶಾಸನಬದ್ಧ ಅನುಮತಿ ಅಡಿಯಲ್ಲಿ ಸಂಬಂಧಿಸಿದ ಮೌಲ್ಯಮಾಪನ ಅಧಿಕಾರಿ ಮುಂದೆ ಅವರು ಯಾವುದೇ ಮೌಲ್ಯಮಾಪನ ಅರ್ಜಿ ಸಲ್ಲಿಸಿರಲಿಲ್ಲ.

ಷೇರುಗಳ ಸ್ವಾಧೀನ
ಆದಾಯದ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ, ವಿಜಿ ಸಿದ್ಧಾರ್ಥ ಮತ್ತು ಕಾಫಿ ಡೇ ಎಂಟರ್ಪ್ರೈಸಸ್ ಮಾಲೀಕತ್ವದ ಮೈಂಡ್ ಟ್ರೀ ಲಿಮಿಟೆಡ್ನ 74,90,000 ಷೇರುಗಳನ್ನು ಆದಾಯ ತೆರಿಗೆ ಕಾಯ್ದೆಯ 281 ಬಿ ನಿಯಮದ ಅಡಿಯಲ್ಲಿ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿತ್ತು. ಇದು ಆದಾಯದ ಹಿತಾಸಕ್ತಿಯನ್ನು ರಕ್ಷಿಸುವ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ.

ಷೇರು ಮಾರಾಟಕ್ಕೆ ಷರತ್ತುಬದ್ಧ ಒಪ್ಪಿಗೆ
ಇದಕ್ಕೆ ಸಿದ್ಧಾರ್ಥ ಅವರು ಮೈಂಡ್ ಟ್ರೀ ಷೇರುಗಳನ್ನು ಬಿಡುಗಡೆಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಿರೀಕ್ಷಿತ ಬೇಡಿಕೆಗೆ ವಿರುದ್ಧವಾಗಿ ಕಾಫಿ ಡೇ ಸಂಸ್ಥೆಯ ಇತರೆ ಭದ್ರತಾ ಷೇರುಗಳ ಮೇಲೆ ನಿಯಂತ್ರಣ ಹೊಂದುವಂತೆ ಕೋರಿದ್ದರು. ಇದನ್ನು ಒಪ್ಪಿಕೊಂಡು ಫೆಬ್ರವರಿ 13ರಂದು ಮೈಂಡ್ ಟ್ರೀ ಷೇರುಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಷೇರುಗಳನ್ನು ಸಾಲದ ಮರುಪಾವತಿಗಾಗಿ ಮಾತ್ರವೇ ಬಳಸಬೇಕು ಎಂದು ನಿರ್ದಿಷ್ಟ ಷರತ್ತು ಹಾಕಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಕಾಫಿ ಡೇ ಸಂಸ್ಥೆಯ 46,01,869 ಅನಿರ್ಬಂಧಿತ ಮತ್ತು 2,04,43,055 ನಿರ್ಬಂಧಿತ ಷೇರುಗಳನ್ನು ಫೆ. 13 ಮತ್ತು 14ರಂದು ವಶಕ್ಕೆ ಪಡೆದುಕೊಳ್ಳಲಾಗಿತ್ತು.

Array
ಬಳಿಕ ಷೇರುದಾರರು ಮೈಂಡ್ ಟ್ರೀ ಷೇರುಗಳನ್ನು ಎಲ್&ಟಿ ಇನ್ಫೋಟೆಕ್ ಲಿಮಿಟೆಡ್ಗೆ ಫೆ. 28ರಂದು ಮಾರಾಟ ಮಾಡಿ 3,200 ಕೋಟಿ ರೂಪಾಯಿ ಪಡೆದಿದ್ದರು. ಇದರಲ್ಲಿ ಅವರು ಸುಮಾರು 3000 ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡಿದ್ದರು. 154 ಕೋಟಿ ರೂಪಾಯಿಯನ್ನು ವೆಚ್ಚ ಆಧಾರಿರ ವರ್ಗಾವಣೆಗಳಿಗೆ ಮತ್ತು ಬಾಕಿ 46 ಕೋಟಿ ರೂಪಾಯಿಯನ್ನು ಕಾಫಿ ಡೇಯ ಸುಮಾರು 300 ಕೋಟಿ ರೂ ಅಂದಾಜು ಮ್ಯಾಟ್ ಲಿಯಾಬಿಲಿಟಿಯ ಮುಂಗಡ ತೆರಿಗೆಯ ಮೊದಲ ಕಂತಿನ ರೂಪದಲ್ಲಿ ಪಾವತಿಸಿದ್ದರು. 250 ಕೋಟಿ ರೂ. ಮ್ಯಾಟ್ ಲಿಯಾಬಿಲಿಟಿ ಬಾಕಿ ಮತ್ತು ತೆರಿಗೆ ಸಾಲದ ಹೆಚ್ಚಳದ ಆಧಾರದಲ್ಲಿ ಶೇ 40ಕ್ಕಿಂತಲೂ ಕಡಿಮೆ, ಅಂದರೆ 400 ಕೋಟಿ ತೆರಿಗೆ ಸಾಲದ ಸಂಭವನೀಯ ಮೊತ್ತವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಕಾಯ್ದೆಯ ನಿಮಯಕ್ಕೆ ಅನುಗುಣವಾಗಿ ಕ್ರಮ
ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸಂಗ್ರಹಿಸಿದ ವಿಶ್ವಾಸಾರ್ಹ ಪುರಾವೆಗಳ ಆಧಾರದಲ್ಲಿ ವ್ಯಕ್ತಿಯು ಒಪ್ಪಿಕೊಂಡ ಆದಾಯದಾಚೆ ವರಮಾನದ ಹಿತಾಸಕ್ತಿಗಳನ್ನು ರಕ್ಷಿಸಲು ಈ ರೀತಿ ತಾತ್ಕಾಲಿಕ ಸ್ವಾಧೀನವನ್ನು ಮಾಡಲಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ನಿಯಮಾವಳಿಗೆ ಅನುಗುಣವಾಗಿ ಕೆಲಸ ಮಾಡಿದೆ ಎಂದು ಅದು ಹೇಳಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications