ಬಾಷ್ ಗೆ ಭರ್ಜರಿ ಲಾಭ, ಆದಾಯ, 770 ಕೋಟಿ ರು ಹೂಡಿಕೆ
ಬೆಂಗಳೂರು, ಮೇ 26: ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಪೂರೈಕೆದಾರ ಮತ್ತು ಸೇವಾ ಪ್ರವರ್ತಕ ಬಾಷ್, ಕಳೆದ 12 ತಿಂಗಳಲ್ಲಿ 10,415 ಕೋಟಿ ರೂ. ನಿವ್ವಳ ಮಾರಾಟ ದಾಖಲಿಸಿದ್ದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.9.5 ರಷ್ಟು ಏರಿಕೆ ಕಂಡಿದೆ.
ತೆರಿಗೆ ಪೂರ್ವ ಲಾಭ 1859 ಕೋಟಿ ರೂ. ಆಗಿದ್ದು ಶೇ.23.6 ರಷ್ಟು ಬೆಳವಣಿಗೆ ಕಂಡಿದೆ. ಅವಧಿಗೆ ತೆರಿಗೆ ನಂತರದ ಲಾಭ 1,245 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇ.23.2 ರಷ್ಟು ಏರಿಕೆ ಕಂಡಿದೆ.
ಕಂಪನಿ ಆರ್ಥಿಕ ಫಲಿತಾಂಶ ಆಧರಿಸಿ ನಿರ್ದೇಶಕರುಗಳು ಕಳೆದ 12 ತಿಂಗಳ ಅವಧಿಯ ತಲಾ ಷೇರಿಗೆ 85 ರೂ. ಡಿವಿಡೆಂಟ್ಗೆ ಶಿಫಾರಸ್ಸು ಮಾಡಿದ್ದು, ಹಿಂದಿನ 15 ತಿಂಗಳಿಗೂ ಇದೇ ಅನ್ವಯವಾಗಲಿದೆ. [ಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆ]

ಹೂಡಿಕೆ ಮುಂದುವರಿಕೆ: ಹೊಸ ಉತ್ಪಾದನೆ ತಾಣಗಳ ಆರಂಭ
ಕಳೆದ 12 ತಿಂಗಳಲ್ಲಿ 2 ಹೊಸ ಉತ್ಪಾದನೆ ಘಟಕವನ್ನು ಬಾಷ್ ಲಿಮಿಟೆಡ್ ಆರಂಭಿಸಿದೆ. ಬಿಡದಿಯಲ್ಲಿನ ಡೀಸೆಲ್ ಸಿಸ್ಟಮ್ ಘಟಕ 2015ರ ಆಗಸ್ಟ್ನಲ್ಲಿ ಆರಂಭಗೊಂಡಿತು. ಭಾರತೀಯ ಮಾರುಕಟ್ಟೆಯ ಅಗತ್ಯತೆ ಪೂರೈಕೆಗೆ ವಿನ್ಯಾಸಗೊಂಡ ಚೆನ್ನೈನ ಪವರ್ ಟೂಲ್ ಘಟಕ ನವೆಂಬರ್.2015ರಲ್ಲಿ ಕಾರ್ಯ ಆರಂಭಿಸಿದೆ. 2015-16ರಲ್ಲಿ ಕಂಪನಿ ಒಟ್ಟಾರೆ 480ಕೋಟಿ ರೂ. ಹೂಡಿಕೆ ಮಾಡಿದೆ. ಈ ವರ್ಷ ಬಿಡದಿ, ನಾಸಿಕ್ನ ಕಾಮನ್ ರೈಲ್ ಪಂಪ್ಸ್ ಹಾಗೂ ಇಂಜೆಕ್ಟರ್ ಮತ್ತು ಬೆಂಗಳೂರಿನ ಆರ್&ಡಿ ಟೆಕ್ ಕೇಂದ್ರದಲ್ಲಿ ಸುಮಾರು 770 ಕೋಟಿ ರೂ. ಹೂಡಿಕೆಗೆ ಆಲೋಚಿಸಿದೆ.[ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?]
ಡಾ.ಬನ್ರ್ಸ್ ಪ್ರಕಾರ ಮುಂದಿನ ತ್ರೈಮಾಸಿಕದ ಭವಿಷ್ಯ ಮುಂಗಾರು, ತೈಲ ದರ ಮತ್ತು ಬಡ್ಡಿ ದರ ಹಾಗೂ ಸರ್ಕಾರಿ ಯೋಜನೆಗಳ ವೇಗವನ್ನು ಆಧರಿಸಿದೆ. 'ನಾವು ಆಟೊಮೊಟೀವ್ ಉದ್ಯಮದಲ್ಲಿ ನಿಯಂತ್ರಿತ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ. ಈ ಸಲ ಭಾರತೀಯ ಮಾರುಕಟ್ಟೆ ಮೇಲೆ ಎಚ್ಚರಿಕೆ ವಹಿಸುತ್ತೇವೆ' ಎಂದರು. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]
ಸೂಚನೆ: ಬಾಷ್ ಲಿಮಿಟೆಡ್ ತನ್ನ ಜನವರಿಯಿಂದ ಡಿಸೆಂಬರ್ ವರೆಗಿನ ಆರ್ಥಿಕ ವರ್ಷವನ್ನು ಏಪ್ರಿಲ್ ನಿಂದ ಮಾರ್ಚ್ ಗೆ ಬದಲಿಸಿಕೊಂಡಿದೆ. ಇದನ್ನು ಆಧರಿಸಿ 2014-15ನೇ ಆರ್ಥಿಕ ವರ್ಷ 15 ತಿಂಗಳ ಅವಧಿಯಾದ್ದಾಗಿದ್ದು ಜನವರಿ 2014ರಿಂದ ಮಾರ್ಚ್2015. ಈ ವರ್ಷ 12 ತಿಂಗಳ ಅವಧಿ. ಏ.2015ರಿಂದ ಮಾ.2016. ಹೀಗಾಗಿ ಬೆಳವಣಿಗೆ ಹೋಲಿಕೆಯನ್ನು 12 ತಿಂಗಳ ಆಧಾರದಲ್ಲಿ ಮಾಡಲಾಗಿದ್ದು ಏ.2014ರಿಂದ ಮಾ.2015 ಹಾಗೂ ಏ.2015ರಿಂದ ಮಾ.2016ರನ್ನು ಪರಿಗಣಿಸಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications