ಬಾಷ್ ಗೆ ಭರ್ಜರಿ ಲಾಭ, ಆದಾಯ, 770 ಕೋಟಿ ರು ಹೂಡಿಕೆ
ಬೆಂಗಳೂರು, ಮೇ 26: ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಪೂರೈಕೆದಾರ ಮತ್ತು ಸೇವಾ ಪ್ರವರ್ತಕ ಬಾಷ್, ಕಳೆದ 12 ತಿಂಗಳಲ್ಲಿ 10,415 ಕೋಟಿ ರೂ. ನಿವ್ವಳ ಮಾರಾಟ ದಾಖಲಿಸಿದ್ದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.9.5 ರಷ್ಟು ಏರಿಕೆ ಕಂಡಿದೆ.
ತೆರಿಗೆ ಪೂರ್ವ ಲಾಭ 1859 ಕೋಟಿ ರೂ. ಆಗಿದ್ದು ಶೇ.23.6 ರಷ್ಟು ಬೆಳವಣಿಗೆ ಕಂಡಿದೆ. ಅವಧಿಗೆ ತೆರಿಗೆ ನಂತರದ ಲಾಭ 1,245 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇ.23.2 ರಷ್ಟು ಏರಿಕೆ ಕಂಡಿದೆ.
ಕಂಪನಿ ಆರ್ಥಿಕ ಫಲಿತಾಂಶ ಆಧರಿಸಿ ನಿರ್ದೇಶಕರುಗಳು ಕಳೆದ 12 ತಿಂಗಳ ಅವಧಿಯ ತಲಾ ಷೇರಿಗೆ 85 ರೂ. ಡಿವಿಡೆಂಟ್ಗೆ ಶಿಫಾರಸ್ಸು ಮಾಡಿದ್ದು, ಹಿಂದಿನ 15 ತಿಂಗಳಿಗೂ ಇದೇ ಅನ್ವಯವಾಗಲಿದೆ. [ಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆ]

ಹೂಡಿಕೆ ಮುಂದುವರಿಕೆ: ಹೊಸ ಉತ್ಪಾದನೆ ತಾಣಗಳ ಆರಂಭ
ಕಳೆದ 12 ತಿಂಗಳಲ್ಲಿ 2 ಹೊಸ ಉತ್ಪಾದನೆ ಘಟಕವನ್ನು ಬಾಷ್ ಲಿಮಿಟೆಡ್ ಆರಂಭಿಸಿದೆ. ಬಿಡದಿಯಲ್ಲಿನ ಡೀಸೆಲ್ ಸಿಸ್ಟಮ್ ಘಟಕ 2015ರ ಆಗಸ್ಟ್ನಲ್ಲಿ ಆರಂಭಗೊಂಡಿತು. ಭಾರತೀಯ ಮಾರುಕಟ್ಟೆಯ ಅಗತ್ಯತೆ ಪೂರೈಕೆಗೆ ವಿನ್ಯಾಸಗೊಂಡ ಚೆನ್ನೈನ ಪವರ್ ಟೂಲ್ ಘಟಕ ನವೆಂಬರ್.2015ರಲ್ಲಿ ಕಾರ್ಯ ಆರಂಭಿಸಿದೆ. 2015-16ರಲ್ಲಿ ಕಂಪನಿ ಒಟ್ಟಾರೆ 480ಕೋಟಿ ರೂ. ಹೂಡಿಕೆ ಮಾಡಿದೆ. ಈ ವರ್ಷ ಬಿಡದಿ, ನಾಸಿಕ್ನ ಕಾಮನ್ ರೈಲ್ ಪಂಪ್ಸ್ ಹಾಗೂ ಇಂಜೆಕ್ಟರ್ ಮತ್ತು ಬೆಂಗಳೂರಿನ ಆರ್&ಡಿ ಟೆಕ್ ಕೇಂದ್ರದಲ್ಲಿ ಸುಮಾರು 770 ಕೋಟಿ ರೂ. ಹೂಡಿಕೆಗೆ ಆಲೋಚಿಸಿದೆ.[ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?]
ಡಾ.ಬನ್ರ್ಸ್ ಪ್ರಕಾರ ಮುಂದಿನ ತ್ರೈಮಾಸಿಕದ ಭವಿಷ್ಯ ಮುಂಗಾರು, ತೈಲ ದರ ಮತ್ತು ಬಡ್ಡಿ ದರ ಹಾಗೂ ಸರ್ಕಾರಿ ಯೋಜನೆಗಳ ವೇಗವನ್ನು ಆಧರಿಸಿದೆ. 'ನಾವು ಆಟೊಮೊಟೀವ್ ಉದ್ಯಮದಲ್ಲಿ ನಿಯಂತ್ರಿತ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ. ಈ ಸಲ ಭಾರತೀಯ ಮಾರುಕಟ್ಟೆ ಮೇಲೆ ಎಚ್ಚರಿಕೆ ವಹಿಸುತ್ತೇವೆ' ಎಂದರು. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]
ಸೂಚನೆ: ಬಾಷ್ ಲಿಮಿಟೆಡ್ ತನ್ನ ಜನವರಿಯಿಂದ ಡಿಸೆಂಬರ್ ವರೆಗಿನ ಆರ್ಥಿಕ ವರ್ಷವನ್ನು ಏಪ್ರಿಲ್ ನಿಂದ ಮಾರ್ಚ್ ಗೆ ಬದಲಿಸಿಕೊಂಡಿದೆ. ಇದನ್ನು ಆಧರಿಸಿ 2014-15ನೇ ಆರ್ಥಿಕ ವರ್ಷ 15 ತಿಂಗಳ ಅವಧಿಯಾದ್ದಾಗಿದ್ದು ಜನವರಿ 2014ರಿಂದ ಮಾರ್ಚ್2015. ಈ ವರ್ಷ 12 ತಿಂಗಳ ಅವಧಿ. ಏ.2015ರಿಂದ ಮಾ.2016. ಹೀಗಾಗಿ ಬೆಳವಣಿಗೆ ಹೋಲಿಕೆಯನ್ನು 12 ತಿಂಗಳ ಆಧಾರದಲ್ಲಿ ಮಾಡಲಾಗಿದ್ದು ಏ.2014ರಿಂದ ಮಾ.2015 ಹಾಗೂ ಏ.2015ರಿಂದ ಮಾ.2016ರನ್ನು ಪರಿಗಣಿಸಲಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications