Success Story: ತಾನು ನೋಡದ ಜಗತ್ತಿಗೆ ಬೆಳಕಾದ ಸಾಧಕ: ಇಂದು 350 ಕೋಟಿಯ ದೊಡ್ಡ ಕಂಪನಿ
ಸಾಧಿಸಬೇಕು ಎಂಬ ವಲವೊಂದಿದ್ದರೆ, ಅದು ಎಷ್ಟೇ ತೊಡಕುಗಳ ಬಂದರೂ ಸಾಧಕ ಸಾಧನೆಯತ್ತ ದೃಷ್ಟಿ ನೆಟ್ಟಿರುತ್ತಾನೆ. ನಾವು ಈ ಸಮಾಜದಲ್ಲಿ ಹಲವು ರೀತಿಯ ಸಾಧಕರನ್ನು ನೋಡುತ್ತವೆ. ಹಲವು ಸಾಧಕರು ಹಲವರಿಗೆ ಸ್ಪೂರ್ತಿ. ಇಂತಹದ್ದೇ ಒಬ್ಬ ಸಾಧಕನ ಪರಿಚಯ ಇಲ್ಲಿದೆ.
23 ನೇ ವಯಸ್ಸಿನಲ್ಲಿ ರೆಟಿನಲ್ ಮಸ್ಕ್ಯುಲರ್ ಡಿಗ್ರೇಡೇಶನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸ್ನಾತ್ತಕೋತ್ತರ ಪದವಿ ಪಡೆದ ಮೇಲೆ ಕೆಲಸ ಇಲ್ಲದೆ ಒದ್ದಾಡಿ, ಕೊನೆಗೆ ತನ್ನದೇ ಸ್ವಂತ ಕಂಪನಿ ಕಟ್ಟಿದ ಸಾಧಕನ ಕಥೆ ಇದು. ಅಮ್ಮನ ಸಹಾಯದಿಂದ ಅಂದು ಧೃತಿ ಗೆಡದೆ ಸ್ಥಾಪಿಸಿದ ಸನ್ರೈಸ್ ಕ್ಯಾಂಡಲ್ ಕಂಪನಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ಸಂಸ್ಥಾಪಕ ಭವೇಶ್ ಭಾಟಿಯಾ. ನಿಜಕ್ಕೂ ರೀಯಲ್ ಸಾಧಕ.

ಚಿಕ್ಕ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಭಾವೇಶ್
ಸ್ವಂತ ಕಾಲಿನ ಮೇಲೆ ನಿಲ್ಲುವ ಭಾವೇಶ್ ಸಂಕಲ್ಪ ಮತ್ತು ಅವರ ಹೆಚ್ಚಿನ ಧೈರ್ಯ ಅವರ ಸಾಧನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ರೆಟಿನಲ್ ಮಸ್ಕ್ಯುಲರ್ ಡಿಗ್ರೇಡೇಶನ್ ಎಂಬ ಕಾಯಿಲೆಯಿಂದ, ಅವರು ದೃಷ್ಟಿ ಕಳೆದುಕೊಂಡರು. ಇದಾದ ನಂತರವೂ ಎಂಎ ವ್ಯಾಸಂಗ ಮುಗಿಸಿದರು. ಕಣ್ಣು ಕಾಣದ ಕಾರಣ ಕೆಲಸ ಸಿಗಲಿಲ್ಲ. ಅಂತಹ ಸಮಯದಲ್ಲಿ ಅವನ ತಾಯಿ ಮಾತ್ರ ಅವನಿಗೆ ಆಸರೆಯಾಗಿದ್ದಾಳೆ.
ತಾಯಿಯ ನೆರವಿನಿಂದ ದೊಡ್ಡ ಕಂಪನಿ
ಭಾವೇಶ್ 1994ರಲ್ಲಿ ಆರಂಭಿಸಿದ ಸನ್ರೈಸ್ ಕ್ಯಾಂಡಲ್ ಎಂಬ ಕಂಪನಿ, ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಇಂದು ಈ ಕಂಪನಿಯ ವಾರ್ಷಿಕ ಆದಾಯ 350 ಕೋಟಿ ರೂ. ಅವರ ಕಂಪನಿಯು ಪ್ರಪಂಚದ ಅನೇಕ ದೇಶಗಳಲ್ಲಿ ಮೇಣದಬತ್ತಿಗಳನ್ನು ಮಾರಾಟ ಮಾಡುತ್ತದೆ.
ತಾಯಿಯಿಂದ ಸ್ಫೂರ್ತಿ ಪಡೆದು ಮೇಣದಬತ್ತಿಗಳನ್ನು ತಯಾರಿಸಲು ಆರಂಭಿಸಿದರು. ಇದಕ್ಕಾಗಿ ಮೊದಲು ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸ್ಕೂಲ್ ಗೆ ಸೆರಿದು. ಅಲ್ಲಿಂದಲೇ ಕೌಶಲ ಕಲಿತರು. ಇದಾದ ನಂತರ ಭಾವೇಶ್ ಕೈಗಾಡಿಯನ್ನು 50 ರೂ.ಗೆ ಬಾಡಿಗೆಗೆ ಪಡೆದು ಮೇಣದಬತ್ತಿಗಳನ್ನು ಮಾರಾಟ ಮಾಡಲು ಆರಂಭಿಸಿದರು.

ಅಂದು ನಡೆಯಿತು ಪವಾಡ
ಭಾವೇಶ್ ಕನಸಿನ ಕಂಪನಿ ಸ್ಥಾಪನೆ ಆಯಿತು. ಆದರೆ ಗ್ರಾಹಕರು ಇವರ ಮೇಣದ ಬತ್ತಿಗಳನ್ನು ಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಭಾವೇಶ್ ಗೆಳೆಯನ ನೆರವಿನಿಂದ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಇವುಗಳಲ್ಲಿ ಅವರು 12 ಸಾವಿರಕ್ಕೂ ಹೆಚ್ಚು ವಿನ್ಯಾಸದ ಮೇಣದಬತ್ತಿಗಳನ್ನು ಪ್ರಸ್ತುತಪಡಿಸಿದರು. ನಂತರ ಒಂದು ಪವಾಡ ನಡೆದಂತೆ ಭಾಸವಾಯಿತು. ದೊಡ್ಡ ಕಂಪನಿಗಳಿಂದ ಆರ್ಡರ್ ಬರತೊಡಗಿತು. ಅವರ ವ್ಯಾಪಾರ ಶುರುವಾಯಿತು. ನಂತರ ಅವರು ತಮ್ಮ ಕಂಪನಿಯಲ್ಲಿ 9000 ಅಂಗವಿಕಲರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಭಾವೇಶ್ ಒಂದು ದಿನ ನೀತಾ ಅವರನ್ನು ಭೇಟಿಯಾದರು. ನೀತಾ ಮೇಣದ ಬತ್ತಿಗಳನ್ನು ಖರೀದಿಸಲು ಬರುತ್ತಿದ್ದರು. ನಂತರ ಇಬ್ಬರೂ ಮದುವೆಯಾದರು. ನೀತಾ ಭವೇಶ್ ವ್ಯವಹಾರದಲ್ಲಿ ಸಾಕಷ್ಟು ಸಹಾಯ ಮಾಡಿದರು. ಭವೇಶ್ ಮೇಣದ ಬತ್ತಿಗಳನ್ನು ತಯಾರಿಸುತ್ತಿದ್ದರು ಮತ್ತು ನೀತಾ ಅವುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು.
ಸಾಧನೆಯ ಹಾದಿಯಲ್ಲಿ ನೂರು ಕಷ್ಟ
ಸಾಧನೆಯ ಮಾರ್ಗದಲ್ಲಿ ನೂರು ಸವಾಲುಗಳು ಎಂಬ ಮಾತಿನಂತೆ ಭಾವೇಶ್ ಅವರಿಗೆ ತೊಂದರೆಯನ್ನು ನೀಡಲು ಹಲವು ಜನರು ಕಾಯುತ್ತಿದ್ದರು. ಒಂದು ದಿನ ಮಾರಾಟಕ್ಕೆ ಬಂಡೆಯಲ್ಲಿಟ್ಟಿದ್ದ ಮೇಣದ ಬತ್ತಿಯನ್ನು ಚರಂಡಿಗೆ ಎಸೆದರು. ಅಲ್ಲದೆ ತಾನು ಸಾಲಕ್ಕಾಗಿ ಯಾರ ಬಳಿಯಾದರೂ, ಕೈ ಚಾಚಿದರೆ, ಯಾರೂ ನೀಡುತ್ತಿರಲಿಲ್ಲ ಎಂದು ಭಾವೇಶ್ ತಿಳಿಸುತ್ತಾರೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್











Click it and Unblock the Notifications