Success Story: ತಾನು ನೋಡದ ಜಗತ್ತಿಗೆ ಬೆಳಕಾದ ಸಾಧಕ: ಇಂದು 350 ಕೋಟಿಯ ದೊಡ್ಡ ಕಂಪನಿ
ಸಾಧಿಸಬೇಕು ಎಂಬ ವಲವೊಂದಿದ್ದರೆ, ಅದು ಎಷ್ಟೇ ತೊಡಕುಗಳ ಬಂದರೂ ಸಾಧಕ ಸಾಧನೆಯತ್ತ ದೃಷ್ಟಿ ನೆಟ್ಟಿರುತ್ತಾನೆ. ನಾವು ಈ ಸಮಾಜದಲ್ಲಿ ಹಲವು ರೀತಿಯ ಸಾಧಕರನ್ನು ನೋಡುತ್ತವೆ. ಹಲವು ಸಾಧಕರು ಹಲವರಿಗೆ ಸ್ಪೂರ್ತಿ. ಇಂತಹದ್ದೇ ಒಬ್ಬ ಸಾಧಕನ ಪರಿಚಯ ಇಲ್ಲಿದೆ.
23 ನೇ ವಯಸ್ಸಿನಲ್ಲಿ ರೆಟಿನಲ್ ಮಸ್ಕ್ಯುಲರ್ ಡಿಗ್ರೇಡೇಶನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸ್ನಾತ್ತಕೋತ್ತರ ಪದವಿ ಪಡೆದ ಮೇಲೆ ಕೆಲಸ ಇಲ್ಲದೆ ಒದ್ದಾಡಿ, ಕೊನೆಗೆ ತನ್ನದೇ ಸ್ವಂತ ಕಂಪನಿ ಕಟ್ಟಿದ ಸಾಧಕನ ಕಥೆ ಇದು. ಅಮ್ಮನ ಸಹಾಯದಿಂದ ಅಂದು ಧೃತಿ ಗೆಡದೆ ಸ್ಥಾಪಿಸಿದ ಸನ್ರೈಸ್ ಕ್ಯಾಂಡಲ್ ಕಂಪನಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ಸಂಸ್ಥಾಪಕ ಭವೇಶ್ ಭಾಟಿಯಾ. ನಿಜಕ್ಕೂ ರೀಯಲ್ ಸಾಧಕ.

ಚಿಕ್ಕ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಭಾವೇಶ್
ಸ್ವಂತ ಕಾಲಿನ ಮೇಲೆ ನಿಲ್ಲುವ ಭಾವೇಶ್ ಸಂಕಲ್ಪ ಮತ್ತು ಅವರ ಹೆಚ್ಚಿನ ಧೈರ್ಯ ಅವರ ಸಾಧನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ರೆಟಿನಲ್ ಮಸ್ಕ್ಯುಲರ್ ಡಿಗ್ರೇಡೇಶನ್ ಎಂಬ ಕಾಯಿಲೆಯಿಂದ, ಅವರು ದೃಷ್ಟಿ ಕಳೆದುಕೊಂಡರು. ಇದಾದ ನಂತರವೂ ಎಂಎ ವ್ಯಾಸಂಗ ಮುಗಿಸಿದರು. ಕಣ್ಣು ಕಾಣದ ಕಾರಣ ಕೆಲಸ ಸಿಗಲಿಲ್ಲ. ಅಂತಹ ಸಮಯದಲ್ಲಿ ಅವನ ತಾಯಿ ಮಾತ್ರ ಅವನಿಗೆ ಆಸರೆಯಾಗಿದ್ದಾಳೆ.
ತಾಯಿಯ ನೆರವಿನಿಂದ ದೊಡ್ಡ ಕಂಪನಿ
ಭಾವೇಶ್ 1994ರಲ್ಲಿ ಆರಂಭಿಸಿದ ಸನ್ರೈಸ್ ಕ್ಯಾಂಡಲ್ ಎಂಬ ಕಂಪನಿ, ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಇಂದು ಈ ಕಂಪನಿಯ ವಾರ್ಷಿಕ ಆದಾಯ 350 ಕೋಟಿ ರೂ. ಅವರ ಕಂಪನಿಯು ಪ್ರಪಂಚದ ಅನೇಕ ದೇಶಗಳಲ್ಲಿ ಮೇಣದಬತ್ತಿಗಳನ್ನು ಮಾರಾಟ ಮಾಡುತ್ತದೆ.
ತಾಯಿಯಿಂದ ಸ್ಫೂರ್ತಿ ಪಡೆದು ಮೇಣದಬತ್ತಿಗಳನ್ನು ತಯಾರಿಸಲು ಆರಂಭಿಸಿದರು. ಇದಕ್ಕಾಗಿ ಮೊದಲು ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸ್ಕೂಲ್ ಗೆ ಸೆರಿದು. ಅಲ್ಲಿಂದಲೇ ಕೌಶಲ ಕಲಿತರು. ಇದಾದ ನಂತರ ಭಾವೇಶ್ ಕೈಗಾಡಿಯನ್ನು 50 ರೂ.ಗೆ ಬಾಡಿಗೆಗೆ ಪಡೆದು ಮೇಣದಬತ್ತಿಗಳನ್ನು ಮಾರಾಟ ಮಾಡಲು ಆರಂಭಿಸಿದರು.

ಅಂದು ನಡೆಯಿತು ಪವಾಡ
ಭಾವೇಶ್ ಕನಸಿನ ಕಂಪನಿ ಸ್ಥಾಪನೆ ಆಯಿತು. ಆದರೆ ಗ್ರಾಹಕರು ಇವರ ಮೇಣದ ಬತ್ತಿಗಳನ್ನು ಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಭಾವೇಶ್ ಗೆಳೆಯನ ನೆರವಿನಿಂದ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಇವುಗಳಲ್ಲಿ ಅವರು 12 ಸಾವಿರಕ್ಕೂ ಹೆಚ್ಚು ವಿನ್ಯಾಸದ ಮೇಣದಬತ್ತಿಗಳನ್ನು ಪ್ರಸ್ತುತಪಡಿಸಿದರು. ನಂತರ ಒಂದು ಪವಾಡ ನಡೆದಂತೆ ಭಾಸವಾಯಿತು. ದೊಡ್ಡ ಕಂಪನಿಗಳಿಂದ ಆರ್ಡರ್ ಬರತೊಡಗಿತು. ಅವರ ವ್ಯಾಪಾರ ಶುರುವಾಯಿತು. ನಂತರ ಅವರು ತಮ್ಮ ಕಂಪನಿಯಲ್ಲಿ 9000 ಅಂಗವಿಕಲರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಭಾವೇಶ್ ಒಂದು ದಿನ ನೀತಾ ಅವರನ್ನು ಭೇಟಿಯಾದರು. ನೀತಾ ಮೇಣದ ಬತ್ತಿಗಳನ್ನು ಖರೀದಿಸಲು ಬರುತ್ತಿದ್ದರು. ನಂತರ ಇಬ್ಬರೂ ಮದುವೆಯಾದರು. ನೀತಾ ಭವೇಶ್ ವ್ಯವಹಾರದಲ್ಲಿ ಸಾಕಷ್ಟು ಸಹಾಯ ಮಾಡಿದರು. ಭವೇಶ್ ಮೇಣದ ಬತ್ತಿಗಳನ್ನು ತಯಾರಿಸುತ್ತಿದ್ದರು ಮತ್ತು ನೀತಾ ಅವುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು.
ಸಾಧನೆಯ ಹಾದಿಯಲ್ಲಿ ನೂರು ಕಷ್ಟ
ಸಾಧನೆಯ ಮಾರ್ಗದಲ್ಲಿ ನೂರು ಸವಾಲುಗಳು ಎಂಬ ಮಾತಿನಂತೆ ಭಾವೇಶ್ ಅವರಿಗೆ ತೊಂದರೆಯನ್ನು ನೀಡಲು ಹಲವು ಜನರು ಕಾಯುತ್ತಿದ್ದರು. ಒಂದು ದಿನ ಮಾರಾಟಕ್ಕೆ ಬಂಡೆಯಲ್ಲಿಟ್ಟಿದ್ದ ಮೇಣದ ಬತ್ತಿಯನ್ನು ಚರಂಡಿಗೆ ಎಸೆದರು. ಅಲ್ಲದೆ ತಾನು ಸಾಲಕ್ಕಾಗಿ ಯಾರ ಬಳಿಯಾದರೂ, ಕೈ ಚಾಚಿದರೆ, ಯಾರೂ ನೀಡುತ್ತಿರಲಿಲ್ಲ ಎಂದು ಭಾವೇಶ್ ತಿಳಿಸುತ್ತಾರೆ.
-
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ: ಇಲ್ಲಿದೆ ಮಾರ್ಚ್ 7ರ ದರಪಟ್ಟಿ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ












Click it and Unblock the Notifications