ಭಾರ್ತಿ ಏರ್ಟೆಲ್ ತ್ರೈಮಾಸಿಕ ವರದಿ: 853.6 ಕೋಟಿ ರೂ. ನಿವ್ವಳ ಲಾಭ
ನವದೆಹಲಿ, ಫೆಬ್ರವರಿ 03: ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್ 853.6 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಹಿಂದಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 763.2 ಕೋಟಿ ರೂ. ಗಳಿಸಿತ್ತು.
ಕಂಪನಿಯ ಆದಾಯವು ಡಿಸೆಂಬರ್ ತ್ರೈಮಾಸಿಕದಲ್ಲಿ ವರ್ಷಕ್ಕೆ ಶೇಕಡಾ 24.2 ರಷ್ಟು ಏರಿಕೆಯಾಗಿದ್ದು (YOY) 26,518 ಕೋಟಿ ರೂ.ಗೆ ತಲುಪಿದೆ, ಇದು ತ್ರೈಮಾಸಿಕದ ಅತ್ಯಧಿಕ ಆದಾಯವಾಗಿದ್ದು, ಗ್ರಾಹಕರ ಸೇರ್ಪಡೆ ಹೆಚ್ಚಳಗೊಂಡಿರುವುದು ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಮೊಬೈಲ್ ಎಆರ್ಪಿಯು (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ) ಅಕ್ಟೋಬರ್-ಡಿಸೆಂಬರ್ನಲ್ಲಿ 166 ರೂ.ಗೆ ಏರಿತು. ಇದು ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 135 ರೂ.ಗಳಿಂದ ಗುಣಮಟ್ಟದ ಗ್ರಾಹಕರನ್ನು ಪಡೆದುಕೊಳ್ಳುವುದರ ಜೊತೆಗೆ ಗ್ರಾಹಕರ ದತ್ತಾಂಶವನ್ನು ಅಪ್ಗ್ರೇಡ್ ಮಾಡುವತ್ತ ಗಮನಹರಿಸಿದೆ ಎಂದು ಏರ್ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

''ಕಂಪನಿಯು ತನ್ನ ಪೋಸ್ಟ್ಪೇಯ್ಡ್ ವ್ಯವಹಾರದಲ್ಲಿ ಬಲವಾದ ಸೇರ್ಪಡೆಯನ್ನು ಕಂಡಿದ್ದು, ಈ ತ್ರೈಮಾಸಿಕದಲ್ಲಿ ಸುಮಾರು 7 ಲಕ್ಷ ಪೋಸ್ಟ್-ಪೇಯ್ಡ್ ಗ್ರಾಹಕರನ್ನು ಸೇರಿಸಿದೆ. ನಮ್ಮ ಗ್ರಾಹಕರಿಗೆ ಅದ್ಭುತ ಅನುಭವವನ್ನು ನೀಡಲು ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಏರ್ಟೆಲ್ ಹೇಳಿದೆ.
ತ್ರೈಮಾಸಿಕದಲ್ಲಿ ಕಂಪನಿಯು 1.29 ಕೋಟಿ 4 ಜಿ ಗ್ರಾಹಕರನ್ನು ಸೇರಿಸಿದ್ದು, ತನ್ನ ಒಟ್ಟು 4 ಜಿ ಗ್ರಾಹಕರ ಸಂಖ್ಯೆಯನ್ನು 16.56 ಕೋಟಿಗೆ ತಲುಪಿಸಿದೆ. ಇದರ ಒಟ್ಟಾರೆ ಗ್ರಾಹಕರ ಸಂಖ್ಯೆ 16 ದೇಶಗಳಲ್ಲಿ 45.8 ಕೋಟಿ ಆಗಿದ್ದರೆ, ಡಿಸೆಂಬರ್ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚ 6,864 ಕೋಟಿ ರೂ. ಆಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications