ಬೆಂಗಳೂರಿನಲ್ಲಿ ಶೆಲ್ ಐಟಿ ಕೇಂದ್ರ ಆರಂಭ
ಬೆಂಗಳೂರು, ಏಪ್ರಿಲ್ 28: ಶೆಲ್ ಇಂಡಿಯಾ ಮಾರ್ಕೆಟ್ ಪ್ರೈ.ಲಿ, ಬೆಂಗಳೂರಿನಲ್ಲಿ ತನ್ನ ಐಟಿ ಕೇಂದ್ರವನ್ನು ಉದ್ಘಾಟಿಸಿದೆ. ಆತಂರಿಕ ಜಾಗತಿಕ ಮಾಹಿತಿ ತಂತ್ರಜ್ಞಾನ ಕೇಂದ್ರ 2016ರ ಅಂತ್ಯಕ್ಕೆ 1,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ. 2020ರ ವೇಳೆಗೆ ಇನ್ನೊಂದಷ್ಟು ಸಾವಿರ ಮಂದಿಗೆ ಉದ್ಯೋಗ ನೀಡಲಿದೆ.
ಬ್ಯಾಂಕ್ ಆಫ್ ಬರೋಡ ಅಧ್ಯಕ್ಷ ರವಿ ವೆಂಕಟೇಶನ್ ಐಟಿ ಕೇಂದ್ರವನ್ನು ಉದ್ಘಾಟಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ರಾಜ್ಯ ಐಟಿ, ಬಿಟಿ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಯಲ್ ಡಚ್ ಶೆಲ್ ಮುಖ್ಯ ಮಾಹಿತಿ ಅಧಿಕಾರಿ ಜಯ್ ಕ್ರೋಟ್ಸ್, ಭಾರತೀಯ ಮಾರುಕಟ್ಟೆಯಲ್ಲಿನ ಪ್ರತಿಭೆ ಶೆಲ್ಗೆ ಇಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಲು ಆಕರ್ಷಿಸಿದೆ. ಶೆಲ್ ಮತ್ತು ಭವಿಷ್ಯದ ಇಂಧನ ಐಟಿ ಉತ್ತೇಜಿತ.
ಹೀಗಾಗಿ, ಐಟಿ ಕೇಂದ್ರ ಒಂದು ಮಹತ್ವದ ತಾಣ. ಐಟಿ, ಇಂಧನ ವಹಿವಾಟಿಗೆ ತಳಮಟ್ಟದ ಬೆಂಬಲ ನೀಡುತ್ತದೆ. ತಂತ್ರಜ್ಞಾನ ಪ್ರೇರಿತ ವಹಿವಾಟಿನಿಂದ ಉತ್ಕೃಷ್ಟ ಗುಣಮಟ್ಟ ಸಾಧ್ಯ. ಜೊತೆಗೆ ವಹಿವಾಟು ಬೆಳವಣಿಗೆ ಹಾಗೂ ವರ್ಗಾವಣೆಗೂ ಸಹಕಾರಿ. ಬೆಂಗಳೂರಿನ ಅತ್ಯುತ್ತಮ ಸಿಬ್ಬಂದಿ ನಮಗೆ ಬೆಂಬಲವಾಗುತ್ತಾರೆ ಎಂಬ ಭರವಸೆಯಿದೆ ಎಂದರು.
ಭಾರತೀಯ ಶೆಲ್ ಕಂಪನಿಗಳ ಅಧ್ಯಕ್ಷ ಡಾ.ಯಾಸ್ಮಿನ್ ಹಿಲ್ಟನ್ ಮಾತನಾಡಿ, ಐಟಿ ಕೇಂದ್ರದ ಔಪಚಾರಿಕ ಉದ್ಘಾಟನೆ ಹೆಮ್ಮೆಯೆನಿಸುತ್ತಿದೆ. ಭಾರತ, ವಿಶೇಷವಾಗಿ ಬೆಂಗಳೂರು ಸಂಶೋಧನೆ ಕೇಂದ್ರವೆಂದು ಸಾಬೀತಾಗಿದ್ದು ಕಳೆದ ದಶಕಗಳಿಂದ ಈ ಕ್ಷೇತ್ರದಲ್ಲಿ ಸೇವೆ ಒದಗಿಸುತ್ತಿದೆ.
ತಾಂತ್ರಿಕ ಸಂಸ್ಥೆಗಳು ಮತ್ತು ಕರ್ನಾಟಕದಲ್ಲಿನ ಪ್ರತಿಭಾನ್ವಿತರನ್ನು ಕೇಂದ್ರಿಕರಿಸಿ ಶೆಲ್ ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದ್ದು, ಭವಿಷ್ಯಕ್ಕೆ ಅಗತ್ಯ ಐಟಿ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲಿದೆ. ಇದು ನಮಗೆ ಉತ್ಕೃಷ್ಟ ಗುಣಮಟ್ಟದ ಐಟಿ ಯೋಜನೆ ನೀಡಲು ಸಹಕಾರಿ ಎಂದರು.
ಶೆಲ್, ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಭಾರತದ ಕೌಶಲ್ಯದಿಂದ ತನ್ನ ವಹಿವಾಟಿಗೆ ಬೆಂಗಳೂರು ಕೇಂದ್ರದಿಂದ ಬೃಹತ್ ಐಟಿ ಪರಿಹಾರ ಒದಗಿಸುತ್ತದೆ.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications