ಸಕಲೇಶಪುರದಲ್ಲಿ ಸುಂದರ ಕಾಫಿ ತೋಟದ ಮಾಲಿಕರಾಗಿರಿ
ಸದಾ ತಂಪು ತಂಪು ವಾತಾವರಣ, ಎತ್ತೆತ್ತ ನೋಡಿದತ್ತ ಬೆಚ್ಚನೆ ಅನುಭವ ನೀಡುವ ಹಚ್ಚ ಹಸಿರಿನ ನೋಟ, ಕಣ್ಣು ಹಾಯಿಸಿದತ್ತ ಮುದ ನೀಡುವ ಗುಡ್ಡ ಬೆಟ್ಟ, ಕಾಫಿ ಹೂವಿನ ಘಮಲು, ಇನ್ನು ಚಳಿಗಾಲದಲ್ಲಂತೂ ಭೂಮಿಯ ಮೇಲಿದ್ದೆವೋ, ಸ್ವರ್ಗವೇ ಧರೆಗಿಳಿದು ಬಂದಂತಿದೆಯೋ ಎಂಬಂತಹ ಅನುಭವ.
ಇಂಥ ತಾಣ ಇರುವುದು ಮತ್ತೆಲ್ಲೂ ಅಲ್ಲ, ಕರ್ನಾಟಕದ ಹಾಸನ ಜಿಲ್ಲೆಯ ಮಲೆನಾಡಿನ ತಾಣ ಸಕಲೇಶಪುರದಲ್ಲಿ. ಇಂಥ ಹಸಿರಿನಿಂದ ತುಂಬಿದ ಸುಂದರ ಪರಿಸರದಲ್ಲಿ, ಶಾಂತಿಯುತ ವಾತಾವರಣದಲ್ಲಿ, ಒಂದು ನಿವೇಶನವನ್ನೋ ಜಾಗವನ್ನೋ ಕೊಂಡುಕೊಂಡು ನಿಶ್ಚಿಂತೆಯಿಂದ ವಾಸಿಸಬೇಕು ಎಂಬುದು ಹಲವು ಧನವಂತರ ಕನಸಾಗಿರುತ್ತದೆ.
ಇಂಥದೊಂದು ಕನಸನ್ನು ನನಸು ಮಾಡಲು ಮುಂದೆ ಬಂದಿದೆ ವೈಬೆಜ್ ಎಸ್ಟೇಟ್ಸ್. ವೈಬೆಜ್ ಎಸ್ಟೇಟ್ ನಿಂದ ಪ್ರಮೋಟ್ ಆಗುತ್ತಿರುವ, ಪ್ರಕೃತಿ ಸಿರಿಯಿಂದ ಕಂಗೊಳಿಸುವ ಸಕಲೇಶಪುರದಲ್ಲಿರುವ ಎಸ್ಟೇಟ್ ಗಳು ಆ ರೀತಿ ಕನಸು ಕಾಣುವವರಿಗೆ ಹೇಳಿ ಮಾಡಿಸಿದಂತಿವೆ.
ಈ ಎಸ್ಟೇಟ್ ಗಳನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಲಾಗುತ್ತಿದ್ದು, ಎಲ್ಲ ಸೌಲಭ್ಯಗಳನ್ನು ಮತ್ತು ಎಲ್ಲ ಬಗೆಯ ಸೇವೆಗಳನ್ನು ಹೊಂದಿವೆ. ಈ ಎಸ್ಟೇಟ್ ಗಳಲ್ಲಿ ಕಳೆದ 5 ವರ್ಷಗಳಿಂದ ಕಾಫಿಯನ್ನು ಉತ್ಪಾದಿಸಲಾಗುತ್ತಿದ್ದು, ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಇದನ್ನು ನಿರ್ವಹಿಸುತ್ತಿರುವ ಅಸೋಸಿಯೇಟ್ ಮ್ಯಾನೇಜ್ಮೆಂಟ್ ಕಂಪನಿ ಎಸ್ಟೇಟ್ ನಿರ್ವಹಣೆಯ ಬಗ್ಗೆ ಕಾಲಕಾಲಕ್ಕೆ ಎಲ್ಲ ಮಾಹಿತಿಗಳನ್ನು ಒದಗಿಸುತ್ತಿರುತ್ತದೆ. ಅಲ್ಲಿಯ ಪರಿಸ್ಥಿತಿಯಲ್ಲಿ ಏನಾದರೂ ಏರುಪೇರು ಕಂಡುಬಂದರೆ, ವಾತಾವರಣದಲ್ಲಿ ಬದಲಾವಣೆಯಾದರೆ ಕೂಡ ಮಾಹಿತಿ ರವಾನಿಸುತ್ತದೆ.
ಕಾಫಿ ಎಸ್ಟೇಟ್ ನ ನಿರ್ವಹಣೆಯ ಮಾಹಿತಿ, ಅದಕ್ಕೆ ತಗಲಿರುವ ವೆಚ್ಚ ಕೂಡ ಮಾಲಿಕರಿಗೆ ತಿಳಿಸಲಾಗುತ್ತದೆ. ಅತ್ಯಂತ ವೃತ್ತಪರತೆಯಿಂದ ನಿರ್ವಹಣೆಯನ್ನು ಮಾಡುತ್ತಿರುವುದರಿಂದ ಯಾವುದೇ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ. ಮನಸ್ಸು ಕೂಡ ನಿರಾಳವಾಗಿರುತ್ತದೆ.
ಇಂತಹ ಕಾಫಿ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಜಾಣತನವಲ್ಲವೆ? ನೀವು ಗುರುತಿಸಲಾಗಿರುವ ಕಾಫಿ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹಣವನ್ನು ಸದ್ವಿನಿಯೋಗ ಮಾಡಿದಂತಾಗುತ್ತದೆ ಮತ್ತು ಉತ್ತಮ ಆದಾಯವನ್ನೂ ಪಡೆಯಬಹುದು. ಬೆಲೆ ಎಕರೆಗೆ 25 ಲಕ್ಷ ರುಪಾಯಿಯಿಂದ ಆರಂಭ.
ಸಕಲೇಶಪುರ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಮುಂಗಾರು ಮಳೆಯ ಚಿತ್ರಣ ಜ್ಞಾಪಕಕ್ಕೆ ಬರುವುದಿಲ್ಲವೆ? ಹಾಸನ ಜಿಲ್ಲೆಯಲ್ಲಿರುವ ಸಕಲೇಶಪುರ ಪ್ರಸಿದ್ಧ ಗಿರಿಧಾಮವಾಗಿ ಹೆಸರುವಾಸಿಯಾಗಿದೆ. ಅಲ್ಲಿಯ ಸ್ನಿಗ್ಧ ಸೌಂದರ್ಯ, ಹಚ್ಚಹಸಿರುವ ಪ್ಲಾಂಟೇಷನ್ ಗಳು, ಮುದ ನೀಡುವ ಗುಡ್ಡಬೆಟ್ಟಗಳು, ಪ್ರಣಯಸದೃಶ ವಾತಾವರಣ ಹಾಲಿಡೇಗೆ ಹೇಳಿ ಮಾಡಿಸಿದಂತಿದೆ.
ಚಾರಣಿಗರಿಗೆ ಫೆವರಿಟ್ ತಾಣವಾಗಿರುವ ಸಕಲೇಶಪುರ ಸಮುದ್ರಮಟ್ಟದಿಂದ 949 ಮೀಟರ್ (3,113 ಚದರ ಅಡಿ) ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳಲ್ಲಿ ಇದು ಸಮಶೀತೋಷ್ಣದ ಹವಾಮಾನವನ್ನು ಹೊಂದಿರುವ ಕಾರಣ, ಇಲ್ಲಿ ಬೆಳೆಗಳಿಂದ ಕಾಂಚಾಣ ಝಣಝಣ. ಸುತ್ತಲಿನ ಹಳ್ಳಿಗಳಲ್ಲಿರುವ ಕಾಫಿ ಬೆಳೆಗಾರರು ಕೂಡ ಕಾಫಿ ಮಾರಾಟ ಮಾಡಲು ಸಕಲೇಶಪುರಕ್ಕೆ ಬರುತ್ತಾರೆ. ಇನ್ನೇಕೆ ತಡ, ವೈಬೆಜ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿ, ಜಾಣತನ ಮೆರೆಯಿರಿ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್















Click it and Unblock the Notifications