ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಇನ್ಮುಂದೆ ಪೇಪರ್ ಲೆಸ್
ಮುಂಬೈ, ಮೇ.31: ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಹೊಸ ಪರಿಸರ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಲ್ಲಿ ಇನ್ಮುಂದೆ ಕಾಗದರಹಿತವಾಗಲಿದೆ. ಗ್ರಾಹಕರಿಗೆ ಎಸ್ ಎಂಎಸ್ ಮೂಲಕ ಅಲರ್ಟ್ ನೀಡಲು ಬ್ಯಾಂಕ್ ನಿರ್ಧರಿಸಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಿಂದ ಕ್ಯಾಶ್ ಪಡೆಯುವಾಗ ರಸೀತಿ ಪಡೆಯುವ ಕ್ರಮಕ್ಕೆ ಬ್ರೇಕ್ ಬೀಳಲಿದೆ. ಇದರ ಬಳಿಕೆ ಕ್ಯಾಶ್ ವಿಥ್ ಡ್ರಾ ಮಾಡಿಕೊಂಡ ಮೇಲೆ ಎಸ್ ಎಂಎಸ್ ಮೂಲಕ ಗ್ರಾಹಕರಿಗೆ ಅಲರ್ಟ್ ಕಳಿಸಲಾಗುತ್ತದೆ. ಎಸ್ ಎಂಎಸ್ ನಲ್ಲಿ ವಿಥ್ ಡ್ರಾ ಮೊತ್ತ, ಬ್ಯಾಲೆನ್ಸ್ ಮೊತ್ತ ಸೇರಿದಂತೆ ಪೂರ್ತಿ ವಿವರ ಲಭ್ಯವಾಗಲಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿ ಹೇಳಿದ್ದಾರೆ.[ಕ್ರೆಡಿಟ್ ಕಾರ್ಡ್ ಪಿನ್ ಅಂಚೆಯಲ್ಲಿ ಬರಲ್ಲ]

ಈ ಹೊಸ ವ್ಯವಸ್ಥೆಯನ್ನು ಮೊದಲಿಗೆ ಕೆಲವು ಎಟಿಎಂಗಳಲ್ಲಿ ಜಾರಿಗೊಳಿಸಲಾಗುತ್ತದೆ. ನಂತರ ದೇಶದೆಲ್ಲೆಡೆ ಇರುವ ಸುಮಾರು 11,700 ಎಟಿಎಂಗಳಲ್ಲಿ ಜೂನ್ ತಿಂಗಳ ಅಂತ್ಯಕ್ಕೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ] (ಪಿಟಿಐ)
ಎಚ್ ಡಿಎಫ್ ಸಿ ಬ್ಯಾಂಕಿನ ಎಟಿಎಂ ಮೂಲಕ ಪ್ರತಿ ತಿಂಗಳಿಗೆ ಸುಮಾರು 2 ಕೋಟಿ ರು ಪ್ರತಿ ತಿಂಗಳಿಗೆ ವಿಥ್ ಡ್ರಾ ಕಾಣಲಾಗುತ್ತಿದೆ. ಈ ಪರಿಸರ ಸ್ನೇಹಿ ವ್ಯವಸ್ಥೆ ಜಾರಿಗೊಂಡರೆ ಸರಿ ಸುಮಾರು 10 ಕೋಟಿ ರು ಗೂ ಅಧಿಕ ಮೊತ್ತ ಉಳಿಯಲಿದೆ. ಕಳೆದ ವರ್ಷ ಸುಮಾರು 500ಕ್ಕೂ ಅಧಿಕ ಹೊಸ ಎಟಿಎಂ ಕೇಂದ್ರಗಳನ್ನು ಎಚ್ ಡಿಎಫ್ ಸಿ ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. [ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]
ಈ ಮುಂಚೆ ಎಚ್ ಡಿಎಫ್ ಸಿ ಹಸಿರು ಪಿನ್ ಜಾರಿಗೊಳಿಸಿತ್ತು. ಗ್ರಾಹಕರಿಗೆ ಪಿನ್ ನಂಬರ್ಗಳನ್ನು ಮೊಬೈಲ್ ಮೆಸೆಜ್ ಮೂಲಕ ತಲುಪಿಸಲಾಗುತ್ತದೆ. ಮೊದಲ ಬಾರಿಯ ಪಾಸ್ ವರ್ಡ್ಗಳನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಗ್ರಾಹಕರು ಅಗತ್ಯಬಿದ್ದರೆ ಬ್ಯಾಂಕ್ನ ಎಟಿಎಂ ಗಳಲ್ಲಿ ತಮ್ಮ ಪಾಸ್ ವರ್ಡ್ ಬದಲಾಯಿಸಿಕೊಳ್ಳಬಹುದು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications