ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಪಿನ್ ಅಂಚೆಯಲ್ಲಿ ಬರಲ್ಲ
ಹೊಸದೆಹಲಿ, ಸೆ. 14 : ಇನ್ನು ಮುಂದೆ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಪಿನ್ ನಂಬರ್ಗಳು ಪೋಸ್ಟ್ನಲ್ಲಿ ಬರಲ್ಲ. ಹೌದು... ಇಂಥದ್ದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಎಚ್ಡಿಎಫ್ಸಿ ಪರಿಸರ ಸಂರಕ್ಷಣೆ ಉದ್ದೇಶದಿಂದ ಕಾಗದ ರಹಿತ ಬ್ಯಾಂಕಿಂಗ್ ಸಂಪರ್ಕಕ್ಕೆ ಮುಂದಾಗಿದೆ.
ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ದಾರರಿಗೆ ಬ್ಯಾಂಕ್ ಪಿನ್ ನಂಬರ್ಗಳನ್ನು ಇನ್ನು ಮುಂದೆ ಮೆಸೆಜ್ ಮೂಲಕ ಕಳಿಸಲು ಸಿದ್ಧವಾಗಿದೆ.(ಎಚ್ ಡಿಎಫ್ ಸಿ ಸೇರಿ 3 ಬ್ಯಾಂಕುಗಳಿಗೆ ಭಾರಿ ದಂಡ)

ಈ ಹಿಂದೆ ಅಂಚೆ ಮೂಲಕ ಕಳಿಸುತ್ತಿದ್ದ ಪದ್ಧತಿಗೆ ತೀಲಾಂಜಲಿ ಹೇಳಲು ಮುಂದಾಗಿದ್ದು ಈ ಮೂಲಕ ಕಾಗದ ರಹಿತ ಬ್ಯಾಂಕಿಂಗ್ ವ್ಯವಸ್ಥೆಯತ್ತ ಗಮನ ಹರಿಸಿದೆ.
ಇದು ಪರಿಸರಕ್ಕೆ ಮಾತ್ರವಲ್ಲ ಬ್ಯಾಂಕ್ ಮತ್ತು ಗ್ರಾಹಕರಿಗೂ ಅನುಕೂಲವಾಗಲಿದ್ದು ಸಮಯದ ಉಳಿತಾಯವಾಗಲಿದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ಉಪಾಧ್ಯಕ್ಷ ಪರಾಗ್ ರಾವ್ ತಿಳಿಸಿದ್ದಾರೆ.(ಮೊಬೈಲ್ನಿಂದ ಮೆಸೇಜ್ ಕಳಿಸಿ, ಹಣ ರವಾನಿಸಿ)
'ಹಸಿರು ಪಿನ್' ಜಾರಿಗೆ ತಂದಿರುವುದರ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದ್ದೇವೆ. ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಭೂಮಿ ಮತ್ತು ಪರಿಸರ ರಕ್ಷಣಗೆ ಕೊಂಚ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಪಿನ್ ನಂಬರ್ಗಳನ್ನು ಮೊಬೈಲ್ ಮೆಸೆಜ್ ಮೂಲಕ ತಲುಪಿಸಲಾಗುತ್ತದೆ. ಮೊದಲ ಬಾರಿಯ ಪಾಸ್ ವರ್ಡ್ಗಳನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಗ್ರಾಹಕರು ಅಗತ್ಯಬಿದ್ದರೆ ಬ್ಯಾಂಕ್ನ ಎಟಿಎಂ ಗಳಲ್ಲಿ ತಮ್ಮ ಪಾಸ್ ವರ್ಡ್ ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಸದ್ಯ ಎಚ್ಡಿಎಫ್ಸಿ ಬ್ಯಾಂಕ್ 1.75 ಕೋಟಿ ಡೆಬಿಟ್ ಕಾರ್ಡ್ದಾರರನ್ನು ಹೊಂದಿದೆ. ಬ್ಯಾಂಕ್ ಪ್ರತಿವರ್ಷ 16.5 ಕೋಟಿ ಕಾರ್ಡ್ ವಿತರಿಸುತ್ತಿದೆ. ತೀವ್ರ ಪ್ರವಾಹ ಕಾಣಿಸಿಕೊಂಡಿರುವುದರಿಂದ ಜಮ್ಮು ಕಾಶ್ಮೀರಕ್ಕೆ ಈ ಸೌಲಭ್ಯ ವಿಸ್ತರಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications