ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ
ಬೆಂಗಳೂರು,ಡಿ.1 ಎಟಿಎಂ ಬಳಕೆ ಉಚಿತ ಎಂಬ ಸೌಲಭ್ಯ ಇನ್ಮುಂದೆ ಮರೀಚಿಕೆಯಾಗಲಿದೆ. ಎಟಿಎಂ ಬಳಕೆ ಎಷ್ಟು ಸರಿ ಉಚಿತವಾಗಿರಬಹುದು ಎಂಬುದನ್ನು ಆರ್ ಬಿಐ ನಿರ್ಧರಿಸಿದ್ದು, ಡಿ.1ರಿಂದ 5 ಬಾರಿಗಿಂತ ಹೆಚ್ಚು ಎಟಿಎಂ ಬಳಕೆ ಮಾಡಿದರೆ ಹೆಚ್ಚಿನ ಪ್ರಮಾಣದ ನಿರ್ವಹಣೆ ವೆಚ್ಚ ನೀಡಬೇಕಾಗುತ್ತದೆ.
ಆಟೋ ಮ್ಯಾಟಿಕ್ ಟೆಲ್ಲರ್ ಮಿಷನ್ ಎನ್ನುವುದಕ್ಕಿಂತ ಏನಿ ಟೈಮ್ ಮನಿ ಎಂದೇ ಚಿರಪರಿಚಿತ ಹಾಗೂ ಬಹು ಜನಪ್ರಿಯ ಬ್ಯಾಂಕ್ ಸೌಲಭ್ಯವಾಗಿದೆ. ಹಣ ವಿಥ್ ಡ್ರಾ ಪ್ರಮಾಣ ತಗ್ಗಿಸುವಂತೆ ಬ್ಯಾಂಕ್ ಸಂಘಟನೆಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಆರ್ ಬಿಐ, ಎಟಿಎಂನಲ್ಲಿ 5 ಬಾರಿಗಿಂತ ಅಧಿಕ ವ್ಯವಹಾರ ನಡೆಸುವ ಗ್ರಾಹಕರಿಗೆ ತಿಂಗಳಿಗೆ 20 ರು ನಂತೆ ಹೆಚ್ಚಿನ ಮೊತ್ತ ಪಡೆಯಲಿದೆ. ನ.1ರಂದೇ ಅರ್ ಬಿಐ ಈ ಕುರಿತು ಸುತ್ತೋಲೆ ಹೊರಡಿಸಿದೆ. [ರಾಜ್ಯಾದ್ಯಂತ ಬ್ಯಾಂಕ್ ಮಷ್ಕರ]

ಡಿ.1 ರಿಂದ ಈ ಹೊಸ ನಿಯಮವನ್ನು ಎಚ್ ಡಿಎಫ್ ಸಿ, ಎಕ್ಸಿಸ್ ಬ್ಯಾಂಕ್ ಅಳವಡಿಸಿಕೊಳ್ಳಲಿದೆ. ಬೆಂಗಳೂರು, ಚೆನ್ನೈ, ಮುಂಬೈ,ನವದೆಹಲಿ,ಕೋಲ್ಕತ್ತಾ, ಹೈದರಾಬಾದ್ ನಲ್ಲಿ ಮೊದಲಿಗೆ ಹೊಸ ದರ ಜಾರಿಗೆ ಬರಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರ ತನ್ನ ಗ್ರಾಹಕರಿಗೆ ಎಟಿಎಂ ವ್ಯವಹಾರ(Financial ಅಥವಾ non-financial)ಕ್ಕೆ ನಿರ್ಬಂಧ ಹೇರುವುದಿಲ್ಲ ಎಂದು ಪ್ರಕಟಿಸಿದೆ. [ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]
ಎಸ್ ಬಿಐ ಹೇಳಿಕೆ: ನಮ್ಮಲ್ಲಿರುವ ಬ್ಯಾಲೆನ್ಸ್ ಕಡಿಮೆಯಿದ್ದು, ಬೃಹತ್ ಸಂಖ್ಯೆಯಲ್ಲಿರುವ ಗ್ರಾಹಕರನ್ನು ನಿಭಾಯಿಸುವುದು ಕಷ್ಟಕರವಾಗಿದೆ.ಪ್ರತಿ ಬಾರಿ ಗ್ರಾಹಕರೊಬ್ಬರು ಎಟಿಎಂಗೆ ಹೋಗಿ ಎಷ್ಟೇ ವಹಿವಾಟು ನಡೆಸಲಿ ಬ್ಯಾಂಕಿಗೆ ತೆರಿಗೆ ಸೇರಿಸಿ ಸುಮಾರು 17 ರು ಖರ್ಚು ಬೀಳಲಿದೆ. ಎಂದು ಎಸ್ ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. [ಎಸ್ ಬಿಐ ಎಟಿಎಂ ಬಳಕೆ ಮಿತಿ ಹೆಚ್ಚಳ]
ಆರ್ ಬಿಐ ಪ್ರತಿಕ್ರಿಯೆ : ಒಂದು ಬ್ಯಾಂಕಿನ ಗ್ರಾಹಕರು ಬೇರೊಂದು ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದರೆ ಬ್ಯಾಂಕಿನವರು ಇಷ್ಟು ಹಣವನ್ನ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಪ್ರತಿ ಬಾರಿ ದುಡ್ಡು ಡ್ರಾ ಮಾಡಿದಾಗಲೂ ಬ್ಯಾಂಕಿಗೆ ಹೊರೆ ಬೀಳುತ್ತಲೇ ಹೋಗುತ್ತದೆ. ಹೀಗಾಗಿ, ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ತನ್ನ ವಹಿವಾಟಿನ ವೆಚ್ಚವನ್ನು ಗ್ರಾಹಕನೇ ಭರಿಸಲಿ ಎಂಬ ಚಿಂತನೆಗೆ ಆರ್.ಬಿ.ಐ. ಬಂದಿದೆ ಎಂದು ಆರ್ ಬಿಐ ಉಪ ಗವರ್ನರ್ ಕೆಸಿ ಚಕ್ರವರ್ತಿ ಹೇಳಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications