ಭಾರತದಲ್ಲಿ ಫುಡ್ ಡೆಲಿವರಿ ವ್ಯವಹಾರ ಮುಚ್ಚಲಿದೆ ಅಮೆಜಾನ್
ನವದೆಹಲಿ, ನವೆಂಬರ್ 25: ಇ ಕಾಮರ್ಸ್ ದಿಗ್ಗಜ ಸಂಸ್ಥೆ ಅಮೆಜಾನ್ ಕಂಪೆನಿಯು ಭಾರತದಲ್ಲಿ ಆಹಾರ ವಿತರಣಾ ವ್ಯವಹಾರವನ್ನು ಮುಚ್ಚಲಿದೆ ಎಂದು ಶುಕ್ರವಾರ ತಿಳಿಸಿದೆ.
ದೇಶದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತನ್ನ ಆನ್ಲೈನ್ ಕಲಿಕಾ ವೇದಿಕೆಯನ್ನು ಮುಚ್ಚುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಘೋಷಣೆಯನ್ನು ಕಂಪೆನಿ ಮಾಡಿದೆ. ಈ ಹಿಂದೆ ಅಮೆಜಾನ್ 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಅಮೆಜಾನ್ ಫುಡ್ ಕಂಪನಿಯು ಬೆಂಗಳೂರಿನಲ್ಲಿ ಪ್ರಯೋಗಿಸುತ್ತಿದ್ದ ವ್ಯವಹಾರವನ್ನೂ ಸ್ಥಗಿತಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
"ನಮ್ಮ ವಾರ್ಷಿಕ ಕಾರ್ಯಾಚರಣಾ ಯೋಜನಾ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ, ನಾವು ಅಮೆಜಾನ್ ಫುಡ್ ಅನ್ನು ನಿಲ್ಲಿಸುವ ನಿರ್ಧಾರವನ್ನು ಮಾಡಿದ್ದೇವೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಪ್ರಸ್ತುತ ಗ್ರಾಹಕರು ಮತ್ತು ಪಾಲುದಾರರನ್ನು ನೋಡಿಕೊಳ್ಳಲು ನಾವು ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಕಂಪನಿಯಿಂದ ಅದರ ರೆಸ್ಟೋರೆಂಟ್ ಪಾಲುದಾರರಿಗೆ ಮೇಲ್ ಅನ್ನು ಉಲ್ಲೇಖಿಸಿ, ಡಿಸೆಂಬರ್ 29 ರಿಂದ ವ್ಯವಹಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಕನಾಮಿಕ್ ಟೈಮ್ಸ್ ಈ ಹಿಂದೆ ವರದಿ ಮಾಡಿದೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ವರ್ಚುವಲ್ ಕಲಿಕೆಯ ಮಧ್ಯೆ ಕಳೆದ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ಭಾರತದಲ್ಲಿ ಅಮೆಜಾನ್ ಅಕಾಡೆಮಿ ಪ್ಲಾಟ್ಫಾರ್ಮ್ ಅನ್ನು ಮುಚ್ಚುವುದಾಗಿ ಅಮೆಜಾನ್ ಗುರುವಾರ ಹೇಳಿದೆ.

ಜಾಗತಿಕವಾಗಿ ಉದ್ಯೋಗಿಗಳ ಕಡಿತ
ಕಾರ್ಪೊರೇಟ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿಯು ಯೋಜಿಸುತ್ತಿರುವುದರಿಂದ ಅನಿಶ್ಚಿತ ಸ್ಥೂಲ ಆರ್ಥಿಕ ವಾತಾವರಣವು ಇ ಕಾಮರ್ಸ್ ಕಂಪೆನಿ ಅಮೆಜಾನ್ ತನ್ನ ಜಾಗತಿಕ ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿದೆ ಎಂದು ರಾಯಿಟರ್ಸ್ ಕಳೆದ ವಾರ ವರದಿ ಮಾಡಿದೆ. ಅಮೆಜಾನ್ ಕಂಪನಿಯು ಭಾರತದ ಮಾರುಕಟ್ಟೆಗೆ ಬದ್ಧವಾಗಿದ್ದು, ದಿನಸಿ, ಸ್ಮಾರ್ಟ್ಫೋನ್ಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಸೌಂದರ್ಯವರ್ಧಕ ಹಾಗೆಯೇ ಅಮೆಜಾನ್ ಬಿಸಿನೆಸ್ನಂತಹ ಬಿ2ಬಿ ಕೊಡುಗೆಗಳಾದ್ಯಂತ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಅಮೆಜಾನ್ಗೆ ಲಾಭದಾಯಕತೆಯ ಅಸ್ಪಷ್ಟತೆ
ಬ್ರೋಕರೇಜ್ ಸಂಸ್ಥೆ ಬರ್ನ್ಸ್ಟೈನ್ನ ಇತ್ತೀಚಿನ ವರದಿಯ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ 6.5 ಶತಕೋಟಿ ಡಾಲರ್ ಹೂಡಿಕೆ ಮಾಡಿದ ನಂತರವೂ 5ರಿಂದ 10 ಪ್ರತಿಶತದಷ್ಟು ಋಣಾತ್ಮಕ ಮಾರ್ಜಿನ್ಗಳೊಂದಿಗೆ ದೇಶದ ಪ್ರಮುಖ ಇ-ಕಾಮರ್ಸ್ ಅಮೆಜಾನ್ಗೆ ಲಾಭದಾಯಕತೆಯು ಅಸ್ಪಷ್ಟವಾಗಿದೆ. ಸ್ಮಾರ್ಟ್ಫೋನ್ಗಳು ಮತ್ತು ಉಡುಪುಗಳಂತಹ ವೇಗವಾಗಿ ಬೆಳೆಯುತ್ತಿರುವ ವರ್ಗಗಳಲ್ಲಿ ಕಂಪನಿಯು ಅಪಾರ ಸ್ಪರ್ಧಾತ್ಮಕ ಒತ್ತಡವನ್ನು ಎದುರಿಸುತ್ತಿದೆ. ಸಾಮಾಜಿಕ ವಾಣಿಜ್ಯ ಮತ್ತು ತ್ವರಿತ ವಾಣಿಜ್ಯದಂತಹ 'ಹೊಸ' ವ್ಯಾಪಾರ ಕ್ಷೇತ್ರಗಳಲ್ಲಿ ದುರ್ಬಲ ಮೌಲ್ಯದ ಪ್ರತಿಪಾದನೆ, ಶ್ರೇಣಿ II ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಸೀಮಿತ ಮತ್ತು ಪ್ರತಿಕೂಲವಾದ ನಿಯಂತ್ರಕ ವಾತಾವರಣವನ್ನು ಎದುರಿಸುತ್ತಿದೆ.

ಉದ್ಯೋಗ ಕಡಿತವು ಹೆಚ್ಚು ಕಷ್ಟಕರ
ಜಾಗತಿಕ ಮಂದಗತಿಯ ಆರ್ಥಿಕತೆಯೊಂದಿಗೆ, ಕಳೆದ ಕೆಲವು ತಿಂಗಳುಗಳಲ್ಲಿ ತನ್ನ ವ್ಯವಹಾರದ ವಿವಿಧ ಕ್ಷೇತ್ರಗಳಲ್ಲಿ ವೆಚ್ಚವನ್ನು ಕಡಿತಗೊಳಿಸುತ್ತಿರುವ ಸಿಯಾಟಲ್ ಮೂಲದ ಕಂಪನಿಯು ಹೆಚ್ಚಿನ ಹಣವನ್ನು ಎಲ್ಲಿ ಉಳಿಸಬಹುದು ಎಂಬುದನ್ನು ಲೆಕ್ಕಾಚಾರ ಮಾಡಲು ವಾರ್ಷಿಕ ಪರಾಮರ್ಶೆ ಪ್ರಕ್ರಿಯೆಗೆ ಒಳಗಾಗುತ್ತಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಕಳೆದ ಹಲವಾರು ವರ್ಷಗಳಲ್ಲಿ ಕಂಪನಿಯ ತ್ವರಿತ ನೇಮಕಾತಿಯಿಂದಾಗಿ ಈ ವರ್ಷದ ಉದ್ಯೋಗ ಕಡಿತವು ಹೆಚ್ಚು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಟ್ವಿಟರ್ 7,500 ಮಂದಿ ವಜಾ
ಇತರ ಟೆಕ್ ಕಂಪನಿಗಳು ಆರ್ಥಿಕ ಕುಸಿತದ ಬಗ್ಗೆ ಕಳವಳದ ನಡುವೆ ತಮ್ಮ ಉದ್ಯೋಗಿಗಳನ್ನು ಕಡಿತ ಮಾಡುತ್ತಿವೆ. ಇತರರಲ್ಲಿ ಫೇಸ್ಬುಕ್ ಮಾತೃಸಂಸ್ಥೆ ಮೆಟಾ ಕಳೆದ ವಾರ 11,000 ಜನರನ್ನು ವಜಾಗೊಳಿಸುವುದಾಗಿ ಹೇಳಿದೆ. ಇದು ಜಾಗತಿಕವಾಗಿ ಸುಮಾರು 13 ಪ್ರತಿಶತದಷ್ಟು ಉದ್ಯೋಗಿಗಳ ಬಲವಾಗಿದೆ. ಹೊಸ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರು ಈ ತಿಂಗಳು ಕಂಪನಿಯ ಉದ್ಯೋಗಿಗಳನ್ನು (7,500 ಮಂದಿ ವಜಾ) ಅರ್ಧದಷ್ಟು ಕಡಿತಗೊಳಿಸಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications