ವ್ಯಕ್ತಿಚಿತ್ರ: ಟಾಟಾ ಸಮೂಹದ ಚೇರ್ಮನ್ ನಟರಾಜನ್ ಚಂದ್ರಶೇಖರನ್
ಸಾಫ್ಟ್ ವೇರ್ ಪೋಗ್ರಾಮರ್ ಆಗಿ ಟಿಸಿಎಸ್ ಸೇರಿದ ನಟರಾಜನ್ ಚಂದ್ರಶೇಖರನ್ ಅವರು ಈಗ ಟಾಟಾ ಸಮೂಹ ಸಂಸ್ಥೆಯ ಒಡೆತನ ಹೊಂದಿರುವ ಟಾಟಾ ಸನ್ಸ್ ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ರತನ್ ಟಾಟಾ ಉತ್ತರಾಧಿಕಾರಿಯಾಗಿದ್ದಾರೆ.
ಬೆಂಗಳೂರು, ಜನವರಿ 12: ಸಾಫ್ಟ್ ವೇರ್ ಪೋಗ್ರಾಮರ್ ಆಗಿ ಟಿಸಿಎಸ್ ಸೇರಿದ ನಟರಾಜನ್ ಚಂದ್ರಶೇಖರನ್ ಅವರು ಈಗ ಟಾಟಾ ಸಮೂಹ ಸಂಸ್ಥೆಯ ಒಡೆತನ ಹೊಂದಿರುವ ಟಾಟಾ ಸನ್ಸ್ ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ರತನ್ ಟಾಟಾ ಉತ್ತರಾಧಿಕಾರಿಯಾಗಿದ್ದಾರೆ. ಫೆಬ್ರವರಿ 21ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಚಂದ್ರ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ...
ಚಂದ್ರ ಎಂದು ಕರೆಯಲ್ಪಡುವ ಚಂದ್ರಶೇಖರನ್ ಮೂಲತಃ ತಮಿಳುನಾಡಿನ ಮೋಹನೂರಿಗೆ ಸೇರಿದವರು. ಕೊಯಮತ್ತೂರಿನಲ್ಲಿ ಬಿಎಸ್ ಸ್ಸಿ ಪದವಿ ಪಡೆದ ನಂತರ ತಿರುಚ್ಚಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಲತಿಕಾ ಎಂಬ ಪತ್ನಿ ಹಾಗೂ ಪ್ರಣವ್ ಎಂಬ ಮಗ ಇದ್ದಾನೆ. [ರತನ್ ಟಾಟಾ ಉತ್ತರಾಧಿಕಾರಿಯಾಗಿ ಎನ್ ಚಂದ್ರಶೇಖರನ್]
1986ರಲ್ಲಿ ಮಾಸ್ಟರ್ಸ್ ಪಡೆದ ಮೇಲೆ 1987ಕ್ಕೆ ಟಿಸಿಎಸ್ ಅಂಗಳಕ್ಕೆ ಕಾಲಿರಿಸಿದ ಚಂದ್ರ, ಪೂರ್ಣ ಚಂದ್ರನಂತೆ ಟಾಟಾ ಸಂಸ್ಥೆ ಬೆಳಗಿದವರು. 2009ರಲ್ಲಿ ಸಿಒಒ ಆದ ಚಂದ್ರ ಸಂಸ್ಥೆ ಚಿತ್ರಣವನ್ನೇ ಬದಲಿಸಿದರು. ಹೊಸ ಹೊಸ ಉತ್ಪನ್ನ, ಸೇವೆಗಳತ್ತ ಗಮನಹರಿಸಿದವರು.[ನಾ ಕಂಡಂತೆ ಜೆಆರ್ ಡಿ ಟಾಟಾ : ಸುಧಾ ಮೂರ್ತಿ]

Global Network Delivery Model (GNDM) ಎಂಬ ಕಲ್ಪನೆ ಹುಟ್ಟು ಹಾಕಿದ ಚಂದ್ರ ಐದು ಖಂಡಗಳಿಗೆ ಇದನ್ನು ಹಬ್ಬಿಸಿದರು. ಯುರೋಪ್, ಚೀನಾ ಹಾಗೂ ಲ್ಯಾಟೀನ್ ಅಮೆರಿಕದಲ್ಲಿ ಟಿಸಿಎಸ್ ಹೆಸರು ಜನಜನಿತವಾಗುವಂತೆ ಮಾಡಿದರು. ಬಿಪಿಒ, ಮೂಲ ಸೌಕರ್ಯ ಸೇವೆಯಲ್ಲದೆ ಮಾಧ್ಯಮ, ಮಾಹಿತಿ ಸಂಪರ್ಕ ಕ್ಷೇತ್ರಕ್ಕೂ ಟಿಸಿಎಸ್ ಕಾಲಿರಿಸಿತು.
ಪ್ರಶಸ್ತಿ, ಗೌರವಾದರಗಳು:
* 2006ರಲ್ಲಿ ವಿಶ್ವದ ಟಾಪ್ 25 ಪ್ರಭಾವಿ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರೆನಿಸಿದರು.
* 2011ರಲ್ಲಿ AIMA ಬಿಸಿನೆಸ್ ಲೀಡರ್ ಪ್ರಶಸ್ತಿ
* ನ್ಯಾಸ್ ಕಾಂನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ.
* 2009-2010 ಆರ್ಥಿಕ ವರ್ಷದಲ್ಲಿ ಸುಮಾರು 3 ಕೋಟಿ ರು ಒಟ್ಟಾರೆ ಸಂಬಳ ಪಡೆದು ದಾಖಲೆ ಬರೆದಿದ್ದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ
Download











Click it and Unblock the Notifications