ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್
ರಿಲಯನ್ಸ್ ಜಿಯೋ ಧನ್ ಧನಾ ಧನ್ ಆಫರ್- ಹಳೆ ಬಾಟಲಿಯಲ್ಲಿ ಹೊಸ ವೈನ್ ಎಂದು ಏರ್ ಟೆಲ್ ಟೀಕಿಸಿದೆ. ಜಿಯೋ ನೀಡಿರುವ ಈ ಆಫರ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಮುಂಬೈ, ಏಪ್ರಿಲ್ 13: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನೀಡಿರುವ ಹೊಸ ಪ್ರೊಮೋಷನ್ ಆಫರ್ ನಲ್ಲಿ ಏನಿಲ್ಲ, ಇದು ಹಳೆ ಬಾಟಲಿಯಲ್ಲಿ ಹೊಸ ವೈನ್ ಎಂದು ಏರ್ ಟೆಲ್ ಟೀಕಿಸಿದೆ. ಜಿಯೋ ನೀಡಿರುವ ಈ ಆಫರ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್ ) ಸಲಹೆಯ ಮೇರೆಗೆ ತನ್ನ ಜಿಯೋ ಸಮ್ಮರ್ ಸರ್ಪ್ರೈಸ್ ಅನ್ನು ಸಂಪೂರ್ಣವಾಗಿ ಹಿಂಪಡೆದು ಈ ಹೊಸ ಆಫರ್ ಧನ್ ಧನಾ ಧನ್ ತನ್ನ ಗ್ರಾಹಕರಿಗೆ ನೀಡಿದೆ. [ಜಿಯೋ ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]
* ಜಿಯೋ ಪ್ರೈಮ್ ಸದಸ್ಯರಿಗಾಗಿ ವಿಶಿಷ್ಟವಾಗಿ, ವಿಶೇಷ ಅನುಕೂಲಗಳೊಂದಿಗೆ ಎಲ್ಲಾ ಅನಿಯಮಿತ ಪ್ಲಾನ್ ಗಳನ್ನು ಜಿಯೋ ಘೋಷಿಸಿದೆ.
* ಜಿಯೋ ಚಂದಾದಾರರು ಯಾವುದೇ ನಿರ್ಬಂಧವಿಲ್ಲದೆ ಡಿಜಿಟಲ್ ಲೈಫ್ ಅನ್ನು ಹೊಂದಲಿ ಎಂದು ಜಿಯೋ ಧನ್ ಧನಾ ಧನ್ ಆಫರ್ ನೀಡುತ್ತಿದೆ.

* ಆರಂಭಿಕ ಪ್ಲಾನ್ 309 ರು ನಿಂದ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್ನ 3 ತಿಂಗಳ ಕಾಲ ನೀಡಲಿದೆ.
* 509 ರು.ನ ಎಲ್ಲಾ ಅನಿಯಮಿತ ಪ್ಲಾನ್ ಘೋಷಿಸಿದ್ದು, ಇದು ಪ್ರತಿದಿನ ಅಧಿಕ ಡಾಟಾ ಬಳಕೆದಾರರಿಗೆ ಅನಿಯಮಿತ ಎಸ್ಎಂಎಸ್, ಕರ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್ನಲ್ಲಿ 2ಜಿಬಿ)ವನ್ನು ಮೊದಲ ರಿಚಾರ್ಜ್ನ 3 ತಿಂಗಳ ಕಾಲ ನೀಡಲಿದೆ.
* ಜಿಯೋ ಪ್ರೈಮ್ ಸದಸ್ಯರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳನ್ನು ಪರಿಗಣಿಸಿ, ಜಿಯೋ ಪ್ರೈಮ್ ಅನ್ನು ಯಾವುದೋ ಕಾರಣಕ್ಕೆ ಚಂದಾ ಮಾಡಿಕೊಳ್ಳಲು ಸಾಧ್ಯವಾಗದ ಗ್ರಾಹಕರು 408 ರೂ. ಅಥವಾ 608 ರೂ. (ಜಿಯೋ ಪ್ರೈಮ್ + ರಿಚಾರ್ಜ್ ಬೆಲೆ) ಪಾವತಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
* ಈಗ ಚಾಲ್ತಿಯಲ್ಲಿರುವ ಜಿಯೋ ಗ್ರಾಹಕರು, ಈ ತನಕ ಮೊದಲ ರಿಚಾರ್ಜ್ ಮಾಡಿಸದವರು, ಸೇವೆಯ ಪದಚ್ಯುತಿ ಮತ್ತು ಅಥವಾ ಸಂಪರ್ಕ ಕಡಿತವನ್ನು ತಪ್ಪಿಸಲು 15 ಏಪ್ರಿಲ್ 2017ಕ್ಕಿಂತ ಮೊದಲು ಮಾಡಬೇಕಿದೆ.
(ಒನ್ಇಂಡಿಯಾ ಸುದ್ದಿ)
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications