'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ
ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಪುತ್ರನ ಹೆಸರು ಟೈಮ್ ನಿಯತಕಾಲಿಕದ 'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಗೆ ಸೇರ್ಪಡೆಗೊಂಡ ಏಕೈಕ ಭಾರತೀಯ ಆಕಾಶ್ ಅಂಬಾನಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಭಾರತೀಯ ಮೂಲದ ಅಮೇರಿಕನ್ ಪ್ರಜೆ ಅಮರಪಾಲಿ ಗಾನಾ ಕೂಡ ಟೈಮ್ಸ್ನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಆಕಾಶ್ ಅಂಬಾನಿ 100 ನೆಕ್ಸ್ಟ್ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡ ನಂತರ, ಟೈಮ್ಸ್ ತನ್ನ ನಿಯತಕಾಲಿಕದಲ್ಲಿ ಅವರ ಬಗ್ಗೆ ದೊಡ್ಡ ವಿಷಯವನ್ನು ಬರೆದಿದೆ. ಅವರ ಬಗ್ಗೆ ಪ್ರತಿಕ್ರಿಯಿಸಿದ ಟೈಮ್ ಮ್ಯಾಗಜೀನ್, ಭಾರತದ ದೊಡ್ಡ ಕೈಗಾರಿಕಾ ಸಂಸ್ಥೆಗೆ ಸೇರಿದ ಆಕಾಶ್ ಅಂಬಾನಿ ಮುಂಬರುವ ದಿನಗಳಲ್ಲಿ ರಿಲಯನ್ಸ್ ಜಿಯೋವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಬರೆದುಕೊಂಡಿದೆ.

ಟೈಮ್ ಮ್ಯಾಗಜೀನ್ ನೀಡುವ ಈ ಟೈಮ್ಸ್ 100 ನೆಕ್ಸ್ಟ್ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಉದ್ಯಮಿಗಳ ವ್ಯಕ್ತಿಗಳ ಪಟ್ಟಿಯಲ್ಲಿ ಅಂಬಾನಿ ಅವರ ಮಗನ ಹೆಸರು ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ವ್ಯಾಪಾರ ಮತ್ತು ಇತರ ಕ್ಷೇತ್ರಗಳ ಉದಯೋನ್ಮುಖ ತಾರೆಗಳಿಗೆ ಸ್ಥಾನ ನೀಡಲಾಗಿದೆ.

ಆಕಾಶ್ ಅಂಬಾನಿ ಹೇಗೆ ಆಯ್ಕೆಯಾದರು?
ಮುಖೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಕಮಾಂಡ್ ನೀಡಲಾಗಿದೆ. 'ಟೈಮ್ 100 ನೆಕ್ಸ್ಟ್'ನಲ್ಲಿ ಆಕಾಶ್ ಅಂಬಾನಿ ಸೇರ್ಪಡೆಗೊಂಡಿರುವ ವರ್ಗವು ನಾಯಕರ ವರ್ಗವಾಗಿದೆ. ಇತ್ತೀಚೆಗೆ ಆಕಾಶ್ ಅಂಬಾನಿ ಗೂಗಲ್ ಮತ್ತು ಫೇಸ್ಬುಕ್ನೊಂದಿಗೆ ರಿಲಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಗೂಗಲ್ ಮತ್ತು ಫೇಸ್ಬುಕ್ ಜೊತೆಗಿನ ಒಪ್ಪಂದದಲ್ಲಿ ಆಕಾಶ್ ಅಂಬಾನಿ 5ಜಿ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಘೋಷಿಸುವ ಯೋಜನೆ ಹೊಂದಿದ್ದಾರೆ ತಾವೇ ಹೇಳಿಕೊಂಡಿದ್ದಾರೆ.

ರಿಲಯನ್ಸ್ ಜಿಯೋ ಮತ್ತು ಆಕಾಶ್ ಅಂಬಾನಿ
ಆಕಾಶ್ ಅಂಬಾನಿ ಕೇವಲ 22ನೇ ವಯಸ್ಸಿನಲ್ಲಿ ಜಿಯೋ ಮಂಡಳಿಯಲ್ಲಿ ಸ್ಥಾನ ಪಡೆದರು. ಇದರ ನಂತರ ಅವರು ಜೂನ್ 2022ರಲ್ಲಿ ಅವರನ್ನು ರಿಲಯನ್ಸ್ ಜಿಯೋ ಅಧ್ಯಕ್ಷರನ್ನಾಗಿ ಮಾಡಲಾಯಿತು. ಸದ್ಯ ಆಕಾಶ್ ಅಂಬಾನಿಗೆ ಕೇವಲ 30 ವರ್ಷ. ರಿಲಯನ್ಸ್ ಜಿಯೋ ದೇಶಾದ್ಯಂತ ಸುಮಾರು 42 ಕೋಟಿ 60 ಲಕ್ಷ ಗ್ರಾಹಕರನ್ನು ಹೊಂದಿದೆ. ರಿಲಯನ್ಸ್ ಜಿಯೋ 700 MHz ಸ್ಪೆಕ್ಟ್ರಮ್ ಬ್ಯಾಂಡ್ನ್ನು ಖರೀದಿಸಿದ ಏಕೈಕ ಭಾರತೀಯ ಟೆಲಿಕಾಂ ಕಂಪನಿಯಾಗಿದೆ. ದಿಪಾವಳಿಗೆ 5G ಸೇವೆಯನ್ನು ನೀಡಲಿದ್ದೇವೆ ಎಂದು ಈ ಟೆಲಿಕಾಂ ಸಂಸ್ಥೆಯು ಗ್ರಾಹಕರಿಗೆ ಏನು ಕೊಡುಗೆ ನೀಡಲಿದೆ ಎಂಬುವುದು ಜಿಯೋ ಗ್ರಾಹಕರ ನಿರೀಕ್ಷೆಯಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications