ಮೋದಿ ಎಫೆಕ್ಟ್: ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಬಡವರು, ಕೆಳ ಮಧ್ಯಮ ವರ್ಗದ ಜನತೆಗೆ ನೆರವಾಗುವಂತೆ ಬ್ಯಾಂಕುಗಳಿಗೆ ಸೂಚಿಸಿದ್ದರು. ಅದರಂತೆ , ಬ್ಯಾಂಕುಗಳು ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿವೆ.
ಬೆಂಗಳೂರು, ಜನವರಿ 01: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಬಡವರು, ಕೆಳ ಮಧ್ಯಮ ವರ್ಗದ ಜನತೆಗೆ ನೆರವಾಗುವಂತೆ ಬ್ಯಾಂಕುಗಳಿಗೆ ಸೂಚಿಸಿದ್ದರು. ಅದರಂತೆ, ಹೊಸ ವರ್ಷದ ದಿನದಂದು ತನ್ನ ಗ್ರಾಹಕರಿಗೆ ಎಸ್ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ಶುಭ ಸುದ್ದಿ ನೀಡಿವೆ.
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಮತ್ತು ಐಡಿಬಿಐ ನೀಡುತ್ತಿರುವ ಸಾಲಗಳ ಮೇಲಿನ ಬಡ್ಡಿಯನ್ನು ಗಣನೀಯ ಇಳಿಸಲಾಗಿದೆ.. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಇದು ಅತ್ಯಂತ ಹೆಚ್ಚಿನ ಪ್ರಮಾಣದ ಬಡ್ಡಿ ದರ ಇಳಿಕೆಯಾಗಿದೆ.[ಭಾಯಿಯೋ ಔರ್ ಬೆಹೆಣೋ... ಮೋದಿ ಭಾಷಣದ ಮುಖ್ಯಾಂಶಗಳು]

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಅವಧಿ ಸಾಲಗಳ ಬಡ್ಡಿ ದರವನ್ನು ಶೇಕಡಾ 0.9ರಷ್ಟು ಇಳಿಸಿದೆ. ಒಂದು ವರ್ಷ ಅವಧಿಯ marginal cost of lending rates (MCLR) ಸಾಲದ ಬಡ್ಡಿಯನ್ನು ಬ್ಯಾಂಕ್ ಶೇಕಡಾ 8.90ದಿಂದ ಶೇಕಡಾ 8ಕ್ಕೆ ಇಳಿಸಿದೆ. ಎಂಸಿಎಲ್ಆರ್ ಓವರ್ನೈಟ್ ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ ಶೇಕಡಾ 8.65ರಿಂದ ಶೇಕಡಾ 7.75ಕ್ಕೆ ಇಳಿಸಿದೆ. 3 ವರ್ಷ ಅವಧಿಯ ಸಾಲದ ಬಡ್ಡಿ ದರವನ್ನು ಶೇಕಡಾ 9.05ರಿಂದ ಶೇಕಡಾ 8.15ಕ್ಕೆ ಇಳಿಸಿದೆ.
ಠೇವಣಿ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ನೋಟು ರದ್ದತಿಯ ನೋವನ್ನು ಶಮನಗೊಳಿಸುವ ಸಲುವಾಗಿ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಹೊಸ ಬಡ್ಡಿ ದರಗಳು ಜನವರಿ 1 ರಿಂದಲೇ ಜಾರಿಯಾಗಲಿವೆ. ಎಸ್ಬಿಐಯ ಮಹಿಳಾ ಗೃಹ ಸಾಲಗಾರರಿಗೆ ಶೇಕಡಾ 8.20 ರ ದರದಲ್ಲಿ ಸಾಲ ಲಭಿಸಲಿದೆ. ಇತರರಿಗೂ ಶೇಕಡಾ 8.25ರ ದರದಲ್ಲಿ ಸಾಲ ಲಭಿಸಲಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಒಂದು ವರ್ಷ ಅವಧಿಯ ಎಂ ಸಿಎಲ್ ಆರ್ ಸಾಲದ ಬಡ್ಡಿ ದರವನ್ನು 65 ಬೇಸಿಸ್ ಪಾಯಿಂಟ್ನಷ್ಟು ಇಳಿಕೆ ಮಾಡಿದೆ. ಅಂದರೆ ಶೇಕಡಾ 8.65ಕ್ಕೆ ಇಳಿಸಿದೆ.
ಮೂರು ವರ್ಷಗಳ ಅವಧಿಯ ಸಾಲ ಪಡೆಯುವವರಿಗೆ ಐಡಿಬಿಐ ಶೇಕಡಾ 9.30ರಷ್ಟು (ಶೇಕಡಾ 0.40ರಷ್ಟು) ದರದಲ್ಲಿ ಸಾಲ ಲಭಿಸಲಿದೆ. 6 ತಿಂಗಳ ಅವಧಿಯ ಸಾಲದ ಬಡ್ಡಿ ದರ ಶೇಕಡಾ 0.35 ಅಂದರೆ ಶೇಕಡಾ 8.90ಕ್ಕೆ ಇಳಿಸಿದೆ. ಒಂದು ವರ್ಷದ ಅವಧಿ ಸಾಲಕ್ಕೆ ಐಡಿಬಿಐ ಬ್ಯಾಂಕ್ ಈಗಿನ ಶೇಕಡಾ 9.30ರ ಬದಲಿಗೆ ಶೇಕಡಾ 9.15 ಬಡ್ಡಿ ವಿಧಿಸಲಿದೆ.
ನೋಟು ಬ್ಯಾನ್ ಬಳಿಕ ಬ್ಯಾಂಕುಗಳಿಗೆ 14.9 ಲಕ್ಷ ಕೋಟಿ ರೂಪಾಯಿ ಠೇವಣಿ ಹರಿದು ಬಂದಿದೆ. ಸಾರ್ವಜನಿಕ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕುಗಳು ನೆರವಾಗಬೇಕಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸೂಚಿಸಿದ್ದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications