ತ್ರಿಪುರ ಚಿಟ್ಫಂಡ್ ಹಗರಣ: ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ
ನವದೆಹಲಿ, ಜೂ.18: ಬರೋಬ್ಬರಿ 191,18,90,089 ಕೋಟಿ ರೂಪಾಯಿಗಳ ಚಿಟ್ ಫಂಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವ್ಯಕ್ತಿಗಳು ಮತ್ತು ನಾಲ್ಕು ಖಾಸಗಿ ಸಂಸ್ಥೆಗಳು ಸೇರಿದಂತೆ ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಿಳಿಸಿದೆ.
ಗೌತಮ್ ಕುಂದು, ನಿರ್ದೇಶಕ ಶಿಬಾಮೊಯ್ ದತ್ತಾ, ನಿರ್ದೇಶಕ ಅಶೋಕ್ ಕುಮಾರ್ ಸಹಾ, ರಾಮ್ ಲಾಲ್ ಗೋಸ್ವಾಮಿ, ರೋಸ್ ವ್ಯಾಲಿ ಹೋಟೆಲ್ ಮತ್ತು ಎಂಟರ್ಟೈನ್ಮೆಂಟ್ ಲಿಮಿಟೆಡ್, ರೋಸ್ ವ್ಯಾಲಿ ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್ ಲಿಮಿಟೆಡ್, ಕೋಲ್ಕತ್ತಾ, ರೋಸ್ ವ್ಯಾಲಿ, ಇಂಡಸ್ಟ್ರೀಸ್, ಕೋಲ್ಕತ್ತಾ, ಮತ್ತು ರಿಯಲ್ ಎಸ್ಟೇಟ್ ಮತ್ತು ಲ್ಯಾಂಡ್ಬ್ಯಾಂಕ್ ಇಂಡಿಯಾ ಲಿಮಿಟೆಡ್ ವಿರುದ್ಧ ತ್ರಿಪುರಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ.

ನಿಯಮಾವಳಿಗಳನ್ನು ಉಲ್ಲಂಘಿಸಿದ ನಿರ್ದೇಶಕರು
ರಿಯಲ್ ಎಸ್ಟೇಟ್ ವ್ಯವಹಾರಗಳ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಿ, ಅಪಾರ ಸಂಖ್ಯೆಯ ಹೂಡಿಕೆದಾರರಿಗೆ ಹೋಟೆಲ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವುದು, ಉದ್ಯಮ ಮತ್ತು ಭೂಮಿ ಅಭಿವೃದ್ಧಿ, ಸೆಬಿ ಮತ್ತು ಆರ್ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ದೇಶಕರು ಠೇವಣಿ ರೂಪದಲ್ಲಿ ಭಾರಿ ಸಾರ್ವಜನಿಕ ಹಣವನ್ನು ಸಂಗ್ರಹಿಸಿದ್ದರು.

2018 ರಲ್ಲಿ ಚಾರ್ಜ್ಶೀಟ್ ಪೊಲೀಸರಿಂದ ಚಾರ್ಚ್ ಶೀಟ್
ತ್ರಿಪುರಾ ಹೈಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ಸಿಬಿಐ ಅಕ್ಟೋಬರ್ 18, 2019 ರಂದು ಪ್ರಕರಣವನ್ನು ದಾಖಲಿಸಿತ್ತು. ಈ ಹಿಂದೆ ಕುಮಾರ್ಘಾಟ್, ಅಗರ್ತಲಾ ಮತ್ತು ಇತರೆಡೆ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಯ ವಿರುದ್ಧ ಕುಮಾರ್ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಪನಿಯ ನಿರ್ದೇಶಕರ ಮಂಡಳಿ ಮತ್ತು ಇತರರ ವಿರುದ್ಧ ಪೊಲೀಸರು 2018 ರಲ್ಲಿ ಚಾರ್ಜ್ಶೀಟ್ ಸಲ್ಲಿಸಿದರು. ದೂರುದಾರರು 2007 ಮತ್ತು 2009 ರ ನಡುವೆ ಕುಮಾರ್ಘಾಟ್ ಶಾಖೆಯಲ್ಲಿ ಖಾಸಗಿ ಕಂಪನಿಯಲ್ಲಿ 9,26,000 ರುಪಾಯಿ ಮತ್ತು ಅಗರ್ತಲಾದಲ್ಲಿರುವ ಅದರ ಇನ್ನೊಂದು ಶಾಖೆಯಲ್ಲಿ 75,000 ರುಪಾಯಿ ಠೇವಣಿ ಮಾಡಿದ್ದರು.

ಪರಸ್ಪರ ಪಿತೂರಿ ನಡೆಸಿರುವ ಆರೋಪಿಗಳು
ಆದರೆ, ಮೆಚ್ಯೂರಿಟಿ ದಿನಾಂಕಗಳು ಕಳೆದರೂ ಆರೋಪಿಗಳು ದೂರುದಾರರಿಗೆ ಹಣವನ್ನು ಹಿಂದಿರುಗಿಸಿರಲಿಲ್ಲ. ಪರಸ್ಪರ ಪಿತೂರಿ ನಡೆಸಿರುವ ಆರೋಪಿಗಳು ತಮ್ಮ ನಿಧಿ ಸಂಗ್ರಹಿಸುವ ಕಂಪನಿಗಳ ನಿರ್ದೇಶಕರು ಮತ್ತು ಷೇರುದಾರರಾಗಿದ್ದಾರೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಗಳು ಗ್ರೂಪ್ ಆಫ್ ಕಂಪನೀಸ್ ಅಡಿಯಲ್ಲಿ ಹಲವಾರು ಕಂಪನಿಗಳನ್ನು ರಚಿಸಿದರು. ಬಳಿಕ ಅದರ ನಿರ್ದೇಶಕರಾದರು. ಈ ಕಂಪನಿಗಳು ನಷ್ಟವನ್ನುಂಟು ಮಾಡುವ ಘಟಕಗಳು ಎಂದು ತಿಳಿದು ಹಣವನ್ನು ಇತರ ಕಂಪನಿಗಳಿಗೆ ವರ್ಗಾಯಿಸಿದರು. ಬಳಿಕ ಈ ಕಂಪನಿಗಳ ಹೆಸರಿನಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದು ಇದೇ ಖಾತೆಗಳಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ಸಲುವಾಗಿ ಈ ಬ್ಯಾಂಕ್ ಖಾತೆಗಳಿಗೆ ಸಹಿ ಹಾಕಿದರು.

ಹೂಡಿಕೆ ಮಾಡಲು ಪ್ರೇರಣೆ
ಆರೋಪಿಗಳು ಒಬ್ಬರ ಮೇಲೊಬ್ಬರಂತೆ ಏಜೆಂಟರನ್ನು ನೇಮಿಸಿ ಹೆಚ್ಚಿನ ಕಮಿಷನ್ ಮತ್ತು ಪ್ರೋತ್ಸಾಹದೊಂದಿಗೆ ಜನರಿಗೆ ಆಮಿಷವೊಡ್ಡುವ ಮೂಲಕ ಠೇವಣಿ ಸಂಗ್ರಹಿಸಲು ಪ್ರೇರೇಪಿಸಿದರು. ಹೆಚ್ಚಿನ ಆದಾಯವನ್ನು ನೀಡುವ ಖಾಸಗಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಹೂಡಿಕೆದಾರರನ್ನು ಪ್ರೇರೇಪಿಸಿದರು. ಆರೋಪಿಗಳು ತಮ್ಮ ಕಂಪನಿಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಾಗಿದ್ದು, ಹೂಡಿಕೆದಾರರು ಹೂಡಿಕೆ ಮಾಡಿದ ಮೊತ್ತವನ್ನು ಸದರಿ ಗುಂಪಿನ ಹಿತಾಸಕ್ತಿಗಾಗಿ ನಷ್ಟಕ್ಕೆ ತಿರುಗಿಸಲಾಯಿತು. ಆ ಮೂಲಕ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಯಿತು. ಇದು ಬರೋಬ್ಬರಿ 191,18,90,089 ರೂಪಾಯಿ ದುರುಪಯೋಗವಾಗಿದೆ ಎಂದು ಸಿಬಿಐ ಹೇಳಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications