ಜೆಟ್ ಏರ್ ವೇಸ್ ಗೆ ದಿನಕ್ಕೆ 14 ಕೋಟಿ ನಷ್ಟ, ಮೂರನೇ ಬಾರಿಗೆ 1000 ಕೋಟಿಗೂ ಹೆಚ್ಚು ನಷ್ಟ
ನವದೆಹಲಿ, ನವೆಂಬರ್ 12: ಬಿಕ್ಕಟ್ಟು ಉಲ್ಬಣ ಆಗಿರುವ ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆಯು ಜುಲೈ-ಸೆಪ್ಟೆಂಬರ್ 2018ರ ತ್ರೈ ಮಾಸಿಕದಲ್ಲಿ ರು.1297.5 ಕೋಟಿ ನಷ್ಟ ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ರು.49.6 ಕೋಟಿ ಲಾಭ ಗಳಿಸಿತ್ತು.
ಇದು ಮೂರನೇ ಬಾರಿಗೆ 1,000 ಕೋಟಿಗೂ ಹೆಚ್ಚಿನ ನಷ್ಟವನ್ನು ತ್ರೈಮಾಸಿಕ ಫಲಿತಾಂಶದಲ್ಲಿ ತೋರಲಾಗುತ್ತಿದೆ. ಏಪ್ರಿಲ್-ಜೂನ್ 2018ರ ತ್ರೈ ಮಾಸಿಕದಲ್ಲಿ ಜೆಟ್ ಏರ್ ವೇಸ್ 1323 ಕೋಟಿ ರುಪಾಯಿ ನಷ್ಟ ಅನುಭವಿಸಿತ್ತು. ಅದೇ ಕಳೆದ ವರ್ಷದ ಮೊದಲ ತ್ರೈ ಮಾಸಿಕದಲ್ಲಿ 53.5 ಕೋಟಿ ರುಪಾಯಿ ಲಾಭ ಪಡೆದಿತ್ತು.
ಈ ವರ್ಷದ ಮೊದಲ ಆರು ತಿಂಗಳಲ್ಲಿ ಜೆಟ್ ಏರ್ ವೇಸ್ 2,620.5 ಕೋಟಿ ರುಪಾಯಿ ಅಥವಾ ದಿನಕ್ಕೆ 14.4 ಕೋಟಿಯಂತೆ ನಷ್ಟ ಅನುಭವಿಸಿದೆ. ಸೆನ್ಸೆಕ್ಸ್ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್)ನಲ್ಲಿ ಜೆಟ್ ಏರ್ ವೇಸ್ ಷೇರು ಸೋಮವಾರ 6% ಇಳಿಕೆಯಾಗಿ, ದಿನಾಂತ್ಯಕ್ಕೆ 242.05ಕ್ಕೆ ವಹಿವಾಟು ಮುಕ್ತಾಯ ಮಾಡಿದೆ.

ವಿಮಾನ ಕ್ಷೇತ್ರದಲ್ಲಿನ ಕಷ್ಟದ ಸನ್ನಿವೇಶ, ಕಚ್ಚಾ ತೈಲದಲ್ಲಿನ ಭಾರೀ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಹೆಚ್ಚುತ್ತಿರುವ ವಿಮಾನ ಯಾನ ಸಂಸ್ಥೆಗಳಿಂದ ದರ ನಿಗದಿಪಡಿಸುವಲ್ಲಿನ ಸವಾಲುಗಳ ಕಾರಣಕ್ಕೆ ಈ ರೀತಿ ನಷ್ಟ ಎದುರಿಸುವಂತಾಗಿದೆ ಎಂದು ಜೆಟ್ ವಿಮಾನ ಯಾನ ಸಂಸ್ಥೆ ಹೇಳಿದೆ.
ಇಂಡಿಗೋ ವಿಮಾನ ಯಾನ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತ್ರೈ ಮಾಸಿಕದಲ್ಲಿ 652.1 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಎರಡನೇ ತ್ರೈ ಮಾಸಿಕದಲ್ಲಿ 551.6 ಕೋಟಿ ಲಾಭ ಪಡೆದಿತ್ತು. ಮತ್ತೊಂದು ಲಿಸ್ಟೆಡ್ ಏರ್ ಲೈನ್ ಸ್ಪೈಸ್ ಜೆಟ್ ಎರಡನೇ ತ್ರೈ ಮಾಸಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಲಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications