ಮೂಲ ಅನುಭವ ಮಂಟಪ ವಿವಾದ: ಬಣ್ಣ ಹಚ್ಚಿ ದರ್ಗಾ ಎಂದು ಬಿಂಬಿಸುವ ಯತ್ನ?
ಬೀದರ್, ಮೇ 31: ಜ್ಞಾನವಾಪಿ ಮಸೀದಿ ವಿವಾದದ ಬೆನ್ನಲ್ಲೇ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿಗ ವಿವಾದ ಕಿಡಿ ಹೊತ್ತಿಸಿದೆ. ಸದ್ಯ ಕಳೆದ ಎರಡು ಮೂರು ದಿನದಲ್ಲಿ ಕಂಬಗಳ ಮಂಟಪಕ್ಕೆ ಬಣ್ಣ ಹಚ್ಚಿ ದರ್ಗಾ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಮೂಲ ಅನುಭವ ಮಂಟಪದ ವಿಚಾರ ಮುನ್ನೆಲೆಗೆ ಬಂದಿದ್ದು ಪರ ವಿರೋಧ ಚರ್ಚೆ ನಡೆಯುತ್ತಿದೆ.. ಈ ಮಧ್ಯೆ ಅಲ್ಲಿನ ಅನುಭವ ಮಂಟಪದಲ್ಲಿರುವ ತ್ರಿಮೂರ್ತಿಗಳು ಮತ್ತು ಮಂಟಪದ ಕಂಬಗಳನ್ನು ರಾತ್ರೋರಾತ್ರಿ ಬದಲಿಸುವ ಕಾರ್ಯ ನಡೆಯುತ್ತಿರುವ ಆರೋಪ ಇದೆ.
ಇಲ್ಲಿನ ಪೀರ್ ಪಾಶಾ ದರ್ಗಾ ಅಂತ ಕರೆಯುವ ಈ ದರ್ಗಾವೇ ಮೂಲ ಅನುಭವ ಮಂಟಪ ಅಂತಾರೆ ಕುಂದಗೂಳ ಚನ್ನಬಸವೇಶ್ವರ ಪೀಠದ ಚನ್ನಬಸವಾನಂದ ಸ್ವಾಮೀಜಿ. ಇವರ ಹೇಳಿಕೆ ಬೆನ್ನಲ್ಲೇ ಬಸವಕಲ್ಯಾಣ ಶಾಸಕ ಶರಣು ಸಲಗರ, ಅದು ಮೂಲ ಅನುಭವ ಮಂಟಪವೇ ಇದೆ ಅಂತ ಚನ್ನಬಸವಾನಂದ ಸ್ವಾಮೀಜಿ ಹೇಳಿಕೆಯನ್ನು ಬೆಂಬಲಿಸಿ ಮೂಲ ಅನುಭವ ಮಂಟಪದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಮಧ್ಯೆ ನಡೆಯುತ್ತಿರುವ ಬೆಳವಣಿಗೆ ನೋಡಿದ ಫಿರ್ ಪಾಶಾ ದರ್ಗಾದವರು ಅದರಲ್ಲಿ ರಾತೋರಾತ್ರಿ ಬಣ್ಣ ಹಚ್ಚಿ ಸಾಕ್ಷಿಗಳನ್ನ ಕಣ್ಮರೆ ಮಾಡುವ ಕಾರ್ಯ ಅಲ್ಲಿ ನಡೆದಿದೆ ಎಂದು ಬಸವೇಶ್ವರ ಪೀಠ ಕುಂದಗೋಳ ಬೆಂಗಳೂರು ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ವಿವಾದ ಮತ್ತುಷ್ಟು ಚುರುಕು
ಈ ವಿಷಯ ಕುರಿತು ಶಾಸಕ ಶರಣು ಸಲಗರ ಮಾತನಾಡಿದ ಅವರು, ಯಾವಾಗ ಮೂಲ ಅನುಭವ ಮಂಟಪದ ಪರವಾಗಿ ಹಲವು ಸ್ವಾಮೀಜಿಗಳು ತೊಡೆತಟ್ಟಿ ನಿಂತಿದ್ದೇ ತಡ ಎಚ್ಚೆತ್ತ ಭಾಲ್ಕಿಯ ಬಸವಲಿಂಗ ಪಟ್ಡದೇವರು, "ಅದು ಮೂಲ ಅನುಭವ ಮಂಟಪವೇ ಅಲ್ಲ ಹಿಂದು ಮುಸ್ಲಿಂ ಬಾಂಧವರು ಸೌಹಾರ್ದ ಯುತವಾಗಿ ಬಾಳಬೇಕು ಅಂತ ಹೇಳಿಕೆ ನೀಡಿದರು. ಇವರ ಹೇಳಿಕೆ ಬೆನ್ನಲ್ಲೇ ಶ್ರಿರಾಮ ಸೇನೆ ಸಂಸ್ಥಾಪಕ ಸಿದ್ದಲಿಂಗ ಸ್ವಾಮಿಗಳು ಕೆಂಡಾಮಂಡಲವಾದರು. ಸದ್ಯಕ್ಕೆ ಎಲ್ಲಾ ಸ್ವಾಮಿಗಳು ಒಗ್ಗೂಡಿ ಪತ್ರಿಕಾಗೋಷ್ಠಿ ಮಾಡಲಿದ್ದು ನಮ್ಮ ನಡೆ ಮೂಲ ಅನುಭವ ಮಂಟಪದ ಕಡೆ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಿದ್ದು ಜೂನ್ ತಿಂಗಳಲ್ಲಿ ವಿವಾದ ಮತ್ತಷ್ಟು ಗರಂ ಆಗಲಿದೆ.

ಮುಕ್ತಿ ಕೊಡಿಸುವ ಕಾರ್ಯ ಮಾಡಬೇಕಿದೆ
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಮಾತನಾಡಿ, ಒಟ್ಟಾರೆ ಮೂಲ ಅನುಭವ ಮಂಟಪದ ಚರ್ಚೆ ಮುನ್ನೆಲೆಗೆ ಬಂದಿದೆ. ಏಕ ವ್ಯಕ್ತಿ ಅಧೀನದಲ್ಲಿರುವ ಈ ಅನುಭವ ಮಂಟಪವೇ ಮೂಲ ಅನುಭವ ಮಂಟಪ ಅನ್ನೋದು ಲಿಂಗಾಯತ ವೀರಶೈವ ಮಠದ ಸ್ವಾಮಿಗಳ ಹೇಳಿಕೆ. ಜೊತೆಗೆ ಇದಕ್ಕಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಕೂಡಾ ಕೈ ಜೋಡಿಸಿದ್ದು, ಮೂಲ ಅನುಭವ ಮಂಟಪದ ತಾಣವಾದ ಪೀರ್ ಪಾಶಾ ದರ್ಗಾಕ್ಕೆ ಮುಕ್ತಿ ಸಿಗುವ ದಿನಗಳು ಹತ್ತಿರವಾಗುತ್ತಿವೆ. ಈಗ ರಾತೋರಾತ್ರಿ ಅಲ್ಲಿ ಎಲ್ಲವನ್ನೂ ಬದಲಿಸುವ ಕಾರ್ಯ ನಡೆಯುತ್ತಿರುವ ಅನುಮಾನ ಇದೆ. ಸರಕಾರ ಎಚ್ಚೆತ್ತು ಮೂಲ ಅನುಭವ ಮಂಟಪದ ತಾಣವನ್ನು ಮರಳಿಪಡೆಯುವ ಕೆಲಸ ಮಾಡಬೇಕಿದೆ ಎಂಬ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications