3 ವರ್ಷದಲ್ಲಿ 18 ಮನೆ ಬದಲು; ವಿಚ್ಛೇದನದವರೆಗೂ ಬಂದ ಹೆಂಡತಿಯ "ಜಿರಲೆ ಫೋಬಿಯಾ"
ಭೋಪಾಲ್, ಏಪ್ರಿಲ್ 17: ಹೆಂಡತಿಯ ಜಿರಲೆ ಭಯ, ಮೂರು ವರ್ಷದಲ್ಲಿ ಹದಿನೆಂಟು ಬಾರಿ ಮನೆ ಬದಲಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ವಿಚಾರ ಈಗ ವಿಚ್ಛೇದನದವರೆಗೂ ಬಂದು ನಿಂತಿದೆ.
ಹೆಂಡತಿಯ ಜಿರಲೆ ಫೋಬಿಯಾದಿಂದ ಬೇಸತ್ತಿರುವ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗತಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಳಕಿಗೆ ಬಂದಿದೆ. ಭೋಪಾಲ್ನಲ್ಲಿ 2017ರಲ್ಲಿ ಇವರ ಮದುವೆಯಾಗಿದೆ. ಆತ ಸಾಫ್ಟ್ವೇರ್ ಇಂಜಿನಿಯರ್. ತನಗೆ ಜಿರಲೆ ಫೋಬಿಯಾ ಇದ್ದು, ಜಿರಲೆ ಕಂಡರೆ ಸಾಕು ಜೋರಾಗಿ ಕೂಗಿಕೊಳ್ಳುತ್ತೇನೆ. ಆ ಜಿರಲೆ ಕಂಡ ಜಾಗಕ್ಕೆ ಮತ್ತೆ ಕಾಲಿಡುವುದೇ ಇಲ್ಲ ಎಂದು ಹೆಂಡತಿ ಮದುವೆ ನಂತರ ತಿಳಿಸಿದ್ದಾಳೆ. ಇದು ಸಹಜ ಎಂದು ಆತನೂ ಮೊದಮೊದಲು ಸುಮ್ಮನಿದ್ದ.
ಮದುವೆ ನಂತರ 2018ರಲ್ಲಿ ಮೊದಲ ಬಾರಿ ಜಿರಲೆ ಕಾರಣಕ್ಕೆ ದಂಪತಿ ಮನೆ ಬದಲಾಯಿಸಿದ್ದರು. ಆಗಲೂ ಆತನಿಗೆ ಬೇಸರವಾಗಿರಲಿಲ್ಲ. ಆನಂತರ ಆಗಿದ್ದೇ ಬೇರೆ. ಮೂರು ವರ್ಷದಲ್ಲಿ ಒಂದಾದ ನಂತರ ಒಂದರಂತೆ ಸುಮಾರು ಹದಿನೆಂಟು ಮನೆಗಳನ್ನು ಬದಲಾಯಿಸಿದ್ದಾರೆ.

ಇದರಿಂದ ಬೇಸತ್ತ ಗಂಡ, ಹೆಂಡತಿಯನ್ನು ಹಲವು ಮನಃಶಾಸ್ತ್ರಜ್ಞರ ಬಳಿಯೂ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಕೊಡಿಸಿದ್ದಾನೆ. ಆದರೂ ಅದ್ಯಾವುದೂ ಫಲ ನೀಡಿಲ್ಲ. ಯಾವುದೇ ಸಲಹೆ ಪಾಲಿಸದೇ ಗಂಡ ತನ್ನನ್ನು ಹುಚ್ಚಿಯಂತೆ ಪರಿಗಣಿಸುತ್ತಿದ್ದಾನೆ ಎಂದು ಪ್ರತ್ಯಾರೋಪ ಮಾಡಿದ್ದಾಳೆ. ಈ ವಿಷಯ ಪುರುಷ ಹಕ್ಕಿನ ಸಂಸ್ಥೆವರೆಗೂ ತಲುಪಿದೆ. ಸದ್ಯಕ್ಕೆ ಆಕೆಗೆ ಈ ಫೋಬಿಯಾ ಬಿಡುವವರೆಗೂ ನಾನು ಆಕೆ ಜೊತೆಗಿರಲು ಸಾಧ್ಯವಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications