ಫಿಟ್ನೆಟ್ ಕಾಪಾಡಿಕೊಳ್ಳಿ, 10 ಲಕ್ಷ ರೂ. ಗೆಲ್ಲಿ; ಬೆಂಗಳೂರು ಮೂಲದ ಕಂಪನಿಯ ಘೋಷಣೆ
ಬೆಂಗಳೂರು, ಸೆ. 25: ಬೆಂಗಳೂರು ಮೂಲದ ಹಣಕಾಸು ಸೇವೆಗಳ ಕಂಪನಿ ಝಿರೋಧಾ (Zerodha) ತನ್ನ ಸಿಬ್ಬಂದಿಯನ್ನು ಆರೋಗ್ಯವಾಗಿರಿಸಲು ಹೊಸ ಫಿಟ್ನೆಸ್ ಸವಾಲು ಹಾಕಿದೆ. ಸಹ-ಸಂಸ್ಥಾಪಕ ಮತ್ತು CEO ನಿತಿನ್ ಕಾಮತ್ ಅವರು ಆರೋಗ್ಯ ಚಟುವಟಿಕೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಮುಂದಿನ ವರ್ಷದಲ್ಲಿ 90% ದಿನಗಳಲ್ಲಿ ನಿಗದಿತ ಗುರಿಯನ್ನು ಸಾಧಿಸುವವರಿಗೆ ಬೋನಸ್ ಸಿಗುತ್ತದೆ.
ಸಿಇಒ ನಿತಿನ್ ಕಾಮತ್ ಅವರ ಪ್ರಕಾರ, ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಉದಾರವಾದ ಬೋನಸ್ ಸಿಗುತ್ತದೆ. ಅಷ್ಟೇ ಅಲ್ಲದೆ ಭಾಗವಹಿಸುವ ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂಪಾಯಿ ದೊರೆಯುತ್ತದೆ.
ಸಿಇಒ ನಿತಿನ್ ಕಾಮತ್ ಹೇಳುವಂತೆ ದಿನಕ್ಕೆ ಕನಿಷ್ಠ 350 ಕ್ಯಾಲೊರಿಗಳನ್ನು ಕಡಿಮೆ ಮಾಡುವ ಸವಾಲನ್ನು ಒಳಗೊಂಡಿರುತ್ತದೆ. ಕಂಪನಿಯ ಫಿಟ್ನೆಸ್ ಟ್ರ್ಯಾಕರ್ಗಳಲ್ಲಿ ದೈನಂದಿನ ಗುರಿಗಳನ್ನು ಹೊಂದಿಸುವುದು ಕೂಡ ಒಂದು ಆಯ್ಕೆಯಾಗಿದೆ.

"Zerodha ನಲ್ಲಿ ನಮ್ಮ ಇತ್ತೀಚಿನ ಆರೋಗ್ಯ ಸವಾಲು ನಮ್ಮ ಫಿಟ್ನೆಸ್ ಟ್ರ್ಯಾಕರ್ಗಳಲ್ಲಿ ದೈನಂದಿನ ಚಟುವಟಿಕೆಯ ಗುರಿಯನ್ನು ಹೊಂದಿಸುವ ಆಯ್ಕೆಯನ್ನು ನೀಡುವುದು. ಮುಂದಿನ ವರ್ಷದಲ್ಲಿ 90% ದಿನಗಳಲ್ಲಿ ನಿಗದಿಪಡಿಸಿದ ಗುರಿಯನ್ನು ತಲುಪುವವರು ಒಂದು ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ. ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂಪಾಯಿ ದೊರೆಯುತ್ತದೆ" ಎಂದು ನಿತಿನ್ ಕಾಮತ್ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
Our latest health challenge at @zerodhaonline is to give an option to set a daily activity goal on our fitness trackers. Anyone meeting whatever goal set on 90% of the days over next year gets 1 month's salary as a bonus. One lucky draw of Rs 10lks as a motivation kicker.😃 1/3
— Nithin Kamath (@Nithin0dha) September 24, 2022
ತಮ್ಮ ಪೋಸ್ಟ್ನಲ್ಲಿ, "ನಮ್ಮಲ್ಲಿ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುವುದರಿಂದ, ಕುಳಿತಲ್ಲೇ ಕುಳಿತುಕೊಳ್ಳುವುದು, ಹೊಸ ಧೂಮಪಾನ ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತಿದೆ" ಎಂದಿದ್ದಾರೆ.
Zerodha ಸಂಸ್ಥಾಪಕರು ತನ್ನ ವೈಯಕ್ತಿಕ ಕಥೆಯೊಂದಿಗೆ ಆರೋಗ್ಯ ಅಪ್ಲಿಕೇಶನ್ನ ಸ್ಕ್ರೀನ್ಶಾಟ್ ಅನ್ನು ಸಹ ಒದಗಿಸಿದ್ದಾರೆ.

"ಕೊರೊನಾ ನಂತರ ನನ್ನ ಆರಂಭಿಕ ತೂಕ ಹೆಚ್ಚಾಗಿದ್ದರಿಂದ, ಟ್ರ್ಯಾಕಿಂಗ್ ಚಟುವಟಿಕೆಯು ಅತ್ಯುತ್ತಮ ಬೆಳವಣಿಗೆಯ ತಂತ್ರ ಆಗಿದೆ, ಆಹಾರದ ಬಗ್ಗೆ ಹೆಚ್ಚು ಜಾಗೃತರಾಗಿರಿ. ನಿಧಾನವಾಗಿ ದೈನಂದಿನ ಗುರಿಯನ್ನು 1000 ಕ್ಯಾಲೊರಿಗಳಿಗೆ ಹೆಚ್ಚಿಸಿ" ಎಂದು ಅವರು ಬರೆದಿದ್ದಾರೆ.
ಈ ವರ್ಷದ ಏಪ್ರಿಲ್ನಲ್ಲಿ, ಝಿರೋಧಾ ಈಗಾಗಲೇ ಸಿಬ್ಬಂದಿ ಸದಸ್ಯರಿಗೆ ತೂಕ ನಷ್ಟದ ಪ್ರೋತ್ಸಾಹ ನೀಡುವ ಭರವಸೆ ನೀಡಿದ್ದರು. 25 ಕ್ಕಿಂತ ಕಡಿಮೆ BMI ಹೊಂದಿರುವ ಉದ್ಯೋಗಿಗಳು ಅರ್ಧ ತಿಂಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಪಡೆಯುತ್ತಾರೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು? -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು










Click it and Unblock the Notifications