ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆ

|
Google Oneindia Kannada News

Recommended Video

Yediyurappa inaugurates Prakruthi Vana in Bengaluru | Oneindia Kannada

ಬೆಂಗಳೂರು, ಅಕ್ಟೋಬರ್ 31 : ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಜಯನಗರ. ಉತ್ತಮವಾದ ಪಾರ್ಕ್‌ಗಳು ಜಯನಗರದಲ್ಲಿವೆ. ಇದಕ್ಕೆ ಹೊಸ ಸೇರ್ಪಡೆ 1.5 ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 'ಪ್ರಕೃತಿ ವನ'.

In Pics: ಬೆಂಗಳೂರಿನ ಹೊಸ ಸೆಲ್ಫಿ ಸ್ಟಾಟ್; ಜಯನಗರದ ಪ್ರಕೃತಿ ವನ

ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಬಿಎಂಪಿಯ ವಾರ್ಡ್‌ ನಂಬರ್ 167ರಲ್ಲಿ ಪಾಲಿಕೆ ನಿರ್ಮಾಣ ಮಾಡಿರುವ 'ಪ್ರಕೃತಿ ವನ' ಲೋಕಾರ್ಪಣೆ ಮಾಡಿದರು. ಕಂದಾಯ ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಯನಗರ ರಣಧೀರ ಕಂಠೀರವ ಪಾರ್ಕ್ ವಿಶೇಷತೆಗಳುಜಯನಗರ ರಣಧೀರ ಕಂಠೀರವ ಪಾರ್ಕ್ ವಿಶೇಷತೆಗಳು

ಜಯನಗರದ ಸೌತ್ ಎಂಡ್ ಸರ್ಕಲ್‌ ಬಳಿ ಬಿಬಿಎಂಪಿ 1.25 ಕೋಟಿ ರೂ. ವೆಚ್ಚದಲ್ಲಿ 'ಪ್ರಕೃತಿ ವನ' ನಿರ್ಮಾಣ ಮಾಡಿದೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿ ವನ ಇದ್ದು, ಮುಂಭಾಗದಲ್ಲಿ ಅಂಬರ ಚುಂಚನ ಗಡಿಯಾರ ಗೋಪುರವಿದೆ.

ಶತಮಾನದ ಹಿಂದಿನ ಬೆಂಗಳೂರು ನೆನಪಿಸುವ ಸಿದ್ದಾಪುರದ ಸಸ್ಯಕಾಶಿಶತಮಾನದ ಹಿಂದಿನ ಬೆಂಗಳೂರು ನೆನಪಿಸುವ ಸಿದ್ದಾಪುರದ ಸಸ್ಯಕಾಶಿ

ಹೆಸರಿಗೆ ತಕ್ಕಂತೆ 'ಪ್ರಕೃತಿ ವನ' ಪರಿಸರ ಸ್ನೇಹಿಯಾಗಿದೆ. ಈ ಪಾರ್ಕ್‌ನಲ್ಲಿ ಮಳೆ ನೀರನ್ನು ಇಂಗಿಸಲು ಎರಡು ಬೃಹತ್ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಅಪರೂಪದ ಗಿಡಮೂಲಿಕೆ ಮತ್ತು ವಿವಿಧ ಪ್ರದೇಶಗಳ ಸಸ್ಯಗಳು ಇಲ್ಲಿವೆ.

ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ?ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ?

ಪ್ರಕೃತಿ ವನಕ್ಕೆ 1.25 ಕೋಟಿ ರೂ. ವೆಚ್ಚ

ಪ್ರಕೃತಿ ವನಕ್ಕೆ 1.25 ಕೋಟಿ ರೂ. ವೆಚ್ಚ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ ನಂಬರ್ 167ರಲ್ಲಿ 'ಪ್ರಕೃತಿ ವನ' ನಿರ್ಮಾಣ ಮಾಡಿದೆ. 1.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಪಾರ್ಕ್‌ಗೆ 1.25 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಪ್ರಕೃತಿ ದೇವನ ಮೂರ್ತಿ

ಪ್ರಕೃತಿ ದೇವನ ಮೂರ್ತಿ

ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪದಲ್ಲಿರುವ ಪ್ರಕೃತಿ ವನದಲ್ಲಿ 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ವನದಲ್ಲಿ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನದಿ ಮೂಲ, ಮರ ಕಡಿಯಬೇಡಿ ಎಂಬ ಸಂದೇಶ ಸಾರುವ ಕಲಾಕೃತಿಗಳು ಇಲ್ಲಿವೆ.

ಪ್ರಕೃತಿವನದಲ್ಲಿ ಪರಿಸರ ಪ್ರೀತಿ

ಪ್ರಕೃತಿವನದಲ್ಲಿ ಪರಿಸರ ಪ್ರೀತಿ

1.5ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಪ್ರಕೃತಿ ವನದಲ್ಲಿ 8000 ಮತ್ತು 12,000 ಲೀಟರ್ ಸಾಮರ್ಥ್ಯದ ಎರಡು ಬೃಹತ್ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಹೆಸರಿಗೆ ತಕ್ಕಂತೆ ಪರಿಸರ ಕಾಳಜಿ ಇದೆ.

ಜಯನಗರದಲ್ಲಿ ಹಲವು ಪಾರ್ಕ್

ಜಯನಗರದಲ್ಲಿ ಹಲವು ಪಾರ್ಕ್

ಧನ್ವಂತರಿ ವನ, ಸಂಜೀವಿನಿ ಉದ್ಯಾನ, ಡಾ. ರಾಜ್ ಕುಮಾರ್ 14.7 ಅಡಿ ಕಂಚಿನ ಪ್ರತಿಮೆ, ಪಾರ್ತವಮ್ಮ ರಾಜ್ ಕುಮಾರ್ ಪ್ರತಿಮೆ, ಅಂಬರ ಚುಂಬನ ಗಡಿಯಾರ ಗೋಪುರದ ಬಳಿಕ ಸೌತ್ ಎಂಡ್ ಸರ್ಕಲ್ ಬಳಿ ಈಗ'ಪ್ರಕೃತಿವನ' ನಿರ್ಮಾಣಗೊಂಡಿದೆ. ಅಪರೂಪದ ಗಿಡಮೂಲಿಕೆ ಗಳು ಮತ್ತು ವಿವಿಧ ಪ್ರದೇಶಗಳ ಸಸ್ಯಗಳು ಇಲ್ಲಿವೆ.

English summary
Karnataka chief minister B. S. Yediyurappa inaugurated Prakruthi Vana near south end circle, Bengaluru. BBMP developed park in 1.5 acre of land in the cost of 1.25 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X