Get Updates
Get notified of breaking news, exclusive insights, and must-see stories!

ಮೀನುಗಳನ್ನು ಸ್ನೇಹಿತರಂತೆ ನೋಡಿ: ಬೆಂಗಳೂರು ಜನತೆಗೆ ಮನವಿ ಮಾಡಿದ ಮತ್ಸ್ಯಕನ್ಯೆ

ಮೀನುಗಳು ನೀವು ತಿನ್ನುವ ಆಹಾರವಲ್ಲ, ಅವುಗಳಿಗೂ ಜೀವ ಇದೆ, ಮೀನುಗಳನ್ನು ನಿಮ್ಮ ಆಹಾರದಂತೆ ಅಲ್ಲ ಬದಲಾಗಿ ಸ್ನೇಹಿತರಂತೆ ನೋಡಬೇಕು ಎಂದು ಬೆಂಗಳೂರು ಜನತೆಗೆ ಮತ್ಸ್ಯಕನ್ಯೆ ಮನವಿ ಮಾಡಿದ್ದಾರೆ. ಅರೆ, ಬೆಂಗಳೂರಿನಲ್ಲಿ ಮತ್ಸ್ಯಕನ್ಯೆ ಎಲ್ಲಿಂದ ಬಂದ್ರು, ಮೀನುಗಳನ್ನು ತಿನ್ನಬೇಡಿ ಅಂದಿದ್ಯಾಕೆ ಅಂದುಕೊಂಡ್ರಾ, ಇಲ್ಲಿದೆ ವಿವರ.

ಜೂನ್ 7ರಂದು ವಿಶ್ವ ಸಾಗರ ದಿನದ ಮುನ್ನ, ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಸದಸ್ಯೆಯೊಬ್ಬರು ಬೆಂಗಳೂರಿನಲ್ಲಿ ಮತ್ಸ್ಯಕನ್ಯೆಯಂತೆ ಪೋಸ್ ನೀಡಿ ದಾರಿಹೋಕರನ್ನು ಮೀನುಗಳನ್ನು ಸ್ನೇಹಿತರನ್ನು ಪರಿಗಣಿಸಲು ಮತ್ತು ಸಸ್ಯಾಹಾರಿಗಳನ್ನು ತಿನ್ನುವಂತೆ ಒತ್ತಾಯಿಸಿದರು.

World Ocean Day 2023: Mermaid Call Up Bengaluru People To Go Vegan & Leave Eating Fish

ನಗರದ ಬ್ರಿಗೇಡ್ ರಸ್ತೆಯ ಬಳಿ ಇರುವ ವಿಶ್ವಯುದ್ಧ ಸ್ಮಾರಕದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. "ಮೀನುಗಳು ತಮಾಷೆಯ ಮತ್ತು ಬುದ್ದಿವಂತ ಜೀವಿಗಳಾಗಿವೆ, ಅವುಗಳಿಗೂ ನೋವು ಅನುಭವಕ್ಕೆ ಬರುತ್ತದೆ. ಅವುಗಳು ಕೂಡ ನಮ್ಮಂತೆ ಬದುಕುವ ಹಕ್ಕು ಹೊಂದಿವೆ, ಅವುಗಳು ಕೂಡ ಸಾಯಲು ಬಯಸುವುದಿಲ್ಲ" ಎಂದು ಪೆಟಾ ಇಂಡಿಯಾ ಸಂಯೋಜಕ ಅಥರ್ವ ಡೆಸ್ಕ್‌ಮುಖ್ ತಿಳಿಸಿದ್ದಾರೆ. ಒಂದು ವೇಳೆ ನೀವು ಮಾಡುವ ಉತ್ತಮ ಕೆಲಸ ಎಂದರೆ ಮೀನುಗಳನ್ನು ತಿನ್ನದೇ ಇರುವುದು ಎಂದು ಅವರು ಮನವಿ ಮಾಡಿದರು.

ಮೀನುಗಳು ಬುದ್ಧಿವಂತ ಜೀವಿಗಳು

ಪೆಟಾ ಇಂಡಿಯಾ ನೀಡಿರುವ ಮಾಹಿತಿ ಪ್ರಕಾರ, ಸಮುದ್ರ ಜೀವಶಾಸ್ತ್ರಜ್ಞರು ವರ್ಷಗಳಿಂದ ಹೇಳುತ್ತಿರುವುದನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸುತ್ತವೆ. ಮೀನುಗಳು ನೋವನ್ನು ಅನುಭವಿಸುತ್ತವೆ, ಜ್ಞಾನವನ್ನು ಹಂಚಿಕೊಳ್ಳುತ್ತವೆ, ಸುದೀರ್ಘ ನೆನಪುಗಳನ್ನು ಹೊಂದಿವೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ ಎಂದು ಹೇಳಲಾಗಿದೆ.

ಕೆಲವು ಮೀನುಗಳು ಸಾಗರದ ತಳದಲ್ಲಿರುವ ಮರಳಿನಲ್ಲಿ ಸಂಕೀರ್ಣವಾದ ಕಲಾಕೃತಿಗಳನ್ನು ರಚಿಸಿ ತಮ್ಮ ಸಂಗಾತಿಯನ್ನು ಆಕರ್ಷಿಸುತ್ತವೆ. ಆದರೂ, ಜಗತ್ತಿನಲ್ಲಿ ಪ್ರತಿ ವರ್ಷ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿ ಮೀನುಗಳನ್ನು ಕೊಲ್ಲಲಾಗುತ್ತಿದೆ. ಮೀನುಗಳು ಬದುಕಿರುವಾಗಲೇ ಅವುಗಳನ್ನು ಕತ್ತರಿಸಿ ತುಂಡು ಮಾಡಲಾಗುತ್ತಿದೆ, ಉಸಿರು ಕಟ್ಟಿಸಲಾಗುತ್ತಿದೆ ಎಂದು ಪೆಟಾ ಹೇಳಿದೆ.

ಮೀನುಗಾರಿಕೆ ಉದ್ಯಮದಿಂದ ಬಹಳಷ್ಟು ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. 7,20,000 ಸಮುದ್ರ ಪಕ್ಷಿಗಳು, 3,00,000 ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು, 3,45,000 ಸೀಲ್‌ಗಳು ಮತ್ತು ಸಮುದ್ರ ಸಿಂಹಗಳು ಮತ್ತು 100 ಮಿಲಿಯನ್ ಶಾರ್ಕ್‌ಗಳು ಮತ್ತು ಕಿರಣಗಳನ್ನು ಒಳಗೊಂಡಂತೆ ಹೆಚ್ಚಿನ ಪ್ರಮಾಣದ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ ಎಂದು ಪೆಟಾ ಹೇಳಿದೆ.

ಪೆಟಾ ಪ್ರಾಣಿಗಳ ಮೇಲಿನ ಹಿಂಸೆಯನ್ನು ವಿರೋಧಿಸುತ್ತದೆ. ಹೆಚ್ಚಿನ ಜನ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಗಳಾಗಲು ಪ್ರೇರೇಪಣೆ ನೀಡುತ್ತಿದೆ. ವೀಗನ್ ಎನ್ನುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ್ದು, ಇವರು, ಹಾಲು, ಮೊಸರು, ಜೇನು ತುಪ್ಪ ಮತ್ತು ಅದರ ಖಾದ್ಯಗಳನ್ನು ಕೂಡ ತಿನ್ನುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+