15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?
ಬೆಂಗಳೂರು, ಜೂನ್ 04:ವಿಶ್ವ ಪರಿಸರ ದಿನ ಎದುರಾಗಿದೆ. ಹಿಂದಿನ ಬೆಂಗಳೂರು ಹೇಗಿತ್ತು? ಇಂದಿನ ಬೆಂಗಳೂರು ಹೇಗಿದೆ? ಹಸಿರು ಮಾಯವಾಗಿ ಕಾಂಕ್ರಿಟ್ ಕಾಡು ಹೇಗೆ ಮನೆ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು.
ಬಿಹಾರದಿಂದ ಬೆಂಗಳೂರಿಗೆ ನಾಲ್ಕು ದಶಕದ ಹಿಂದೆ ಬಂದು ನೆಲೆಸಿದ ನಿವೃತ್ತ ಸರ್ಕಾರಿ ನೌಕರ ನರೇಶ್ ಝಾ ಉದ್ಯಾನ ನಗರಿಯ ಅಂದಿನ ವಾತಾವಣ, ಪರಿಸರವನ್ನು ವಿವರಿಸಿದ್ದಾರೆ.[ಅನಂತ್ ಕುಮಾರ್ ಅವರ ಕನಸಿನ ಹಸಿರು ಬೆಂಗಳೂರು 1:1]

ದಶಕಗಳ ಕಾಲ ಬೆಂಗಳೂರಲ್ಲಿ ನೆಲಿಸಿದ ಝಾ ಕನ್ನಡವನ್ನು ಚೆನ್ನಾಗಿ ಮಾತನಾಡಲು ಕಲಿತಿದ್ದಾರೆ. ಬೆಂಗಳೂರು ಇಂದು ಕಾಂಕ್ರಿಟ್ ಕಾಡಾಗಿ ಪರಿವರ್ತನೆ ಆಗಿದೆ ಎಂದು ಝಾ ವಿಷಾದ ವ್ಯಕ್ತಪಡಿಸುತ್ತಾರೆ.
ಅವರ ಮಾತಿನಲ್ಲೇ ಬೆಂಗಳೂರ ವೈಭವ ಮತ್ತು ಇಂದಿನ ಸ್ಥಿತಿಯನ್ನು ಕೇಳಿಕೊಂಡು ಬರೋಣ....
ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಮರಗಳನ್ನು ನಾವು ಕಳೆದುಕೊಂಡಿದ್ದೇವೆ. ಬೆಂಗಳೂರ ಕೆರೆಗಳು ಮಾಲಿನ್ಯದ ತಾಣವಾಗಿ ಬದಲಾಗಿವೆ. ವಾಯು ಮಾಲಿನ್ಯದ ಪ್ರಮಾಣವನ್ನು ಊಹಿಸಿಕೊಳ್ಳಲು ಅಸಾಧ್ಯ. ಟ್ರಾಫಿಕ್ ಸಮಸ್ಯೆಯಂತೂ ಕೇಳುವುದೇ ಬೇಡ. ಇದು ನಮ್ಮ ಇಂದಿನ ಬೆಂಗಳೂರು.[ನಾವು ಕೋಟಿ ಜನ, ಕೋಟಿ ಮರ ಬೇಕು]

15 ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ಹಸಿರಿನ ತಾಣವಾಗಿದ್ದ ಅಂದಿನ ಬೆಂಗಳೂರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ನಾನು ಪರಿಸರ ಸಂರಕ್ಷಣೆಯಿಂದ ಎಂದಿಗೂ ವಿಮುಖನಾಗುವುದಿಲ್ಲ. ನಾನು ಮತ್ತು ನನ್ನ ಸ್ನೇಹಿತರು ಸೇರಿ ಹಳೆ ವಿಮಾನ ನಿಲ್ದಾಣ ರಸ್ತೆ ಪಕ್ಕ ಈ ಬಾರಿಯೂ ಗಿಡಗಳನ್ನು ನೆಡಲಿದ್ದೇವೆ ಎಂದು ಹೇಳುತ್ತಾರೆ.
ಪರಿಸರ ಮತ್ತು ಅರಣ್ಯ ಇಲಾಖೆ ಒಂದಾಗಿ ವಿಶ್ವ ಪರಿಸರ ದಿನದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂನ್ 5, ಭಾನುವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಿಚ್ ಮಂಡ್ ಅಂಡ್ ಲ್ಯಾಂಗ್ ಫರ್ಡ್ ವೆಲ್ ಫೇರ್ ಅಸೋಸಸಿಯೇಶನ್ ಸದಸ್ಯರು ಜಾಗೃತಿ ಮೆರವಣಿಗೆ ಹೊರಡಲಿದ್ದಾರೆ. ಯುವ ಸೃಷ್ಟಿ ಸಂಘಟನೆ ಸಹ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
" ಗೋ ವೈಲ್ಡ್ ಫಾರ್ ಲೈಫ್" ಘೋಷ ವಾಕ್ಯದಡಿ ಈ ಬಾರಿಯ ಪರಿಸರ ದಿನಾಚರಣೆ ನಡೆಯಲಿದ್ದು ಜಾಗತಿಕ ತಾಪಮಾನ ಏರಿಕೆಯನ್ನು ಪ್ರಮುಖ ಅಂಶವನ್ನಾಗಿ ಇರಿಸಿಕೊಳ್ಳಲಾಗಿದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications