ಬೆಂಗಳೂರು ರಸ್ತೆಗುಂಡಿ ಸಮಸ್ಯೆ: ಡಿ.ಕೆ ಶಿವಕುಮಾರ್‌ಗೆ ಬೆದರಿಸುತ್ತಿರುವುದು ಯಾರು, ವೈರಲ್ ಪೋಸ್ಟ್‌!

ಬೆಂಗಳೂರಿನಲ್ಲಿ ಪ್ರತಿ ವರ್ಷವೂ ರಸ್ತೆಗುಂಡಿಗಳ ಸಮಸ್ಯೆ ಇದೆ. ಅಲ್ಲದೇ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗುವುದು ಇದೆ. ಆದರೆ ಈ ವರ್ಷ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಕೆಲವೊಂದು ಐಟಿ - ಬಿಟಿ ಕಂಪನಿಗಳು ಬೆಂಗಳೂರು ತೊರೆಯುವುದಾಗಿ ಹೇಳಿದ್ದು. ಇದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬ್ಲ್ಯಾಕ್ ಮೇಲ್ ತಂತ್ರ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Karnataka Portfolio ಎನ್ನುವ ಖಾತೆಯಿಂದ ಪೋಸ್ಟ್‌ವೊಂದನ್ನು ಮಾಡಲಾಗಿದೆ. ಯಾರನ್ನು ಬೆದರಿಸುತ್ತಿದ್ದಾರೆ? ಸಾರ್ವಜನಿಕರು ಉತ್ತಮ ರಸ್ತೆಗಳಿಗೆ ಬೇಡಿಕೆ ಇಡುತ್ತಿದ್ದಾರೆ, ಡಿಕೆ ಶಿವಕುಮಾರ್ ಇದನ್ನು ಬ್ಲ್ಯಾಕ್‌ಮೇಲ್ ಎಂದು ಪರಿಗಣಿಸಿದ್ದಾರೆ ಎಂದು ಪೋಸ್ಟ್‌ ಮಾಡಲಾಗಿದೆ. ಶಿವಕುಮಾರ್ ಅವರನ್ನು ನಿಜವಾಗಿಯೂ ಯಾರು "ಬೆದರಿಸುತ್ತಿದ್ದಾರೆ"? ಉತ್ತಮ ಮೂಲಸೌಕರ್ಯ ಬೇಕು ಎಂದು ಕೇಳುವುದು ಜನರು ಮತ್ತು ಕಂಪನಿಗಳ ಮೂಲಭೂತ ಹಕ್ಕೇ ಹೊರತು ಸವಲತ್ತುಗಳಲ್ಲ. ಹಾಳಾದ ರಸ್ತೆಗಳು ಮತ್ತು ಕಳಪೆ ಸಾರ್ವಜನಿಕ ಸೇವೆಗಳ ಬಗ್ಗೆ ಹತಾಶೆ ವ್ಯಕ್ತಪಡಿಸುವ ಪ್ರತಿಯೊಬ್ಬ ಸಾರ್ವಜನಿಕ ಅಥವಾ ಕಾರ್ಪೊರೇಟ್ ಈಗ ಅವರಿಗೆ ಮತ್ತು ಸರ್ಕಾರಕ್ಕೆ "ಬೆದರಿಕೆ"ಯೇ? ಎಂದು ಪ್ರಶ್ನೆ ಮಾಡಲಾಗಿದೆ.

Who Is Threatening DK Shivakumar Over Bengaluru Pothole Mess

ವಿಪರ್ಯಾಸವೆಂದರೆ, ಈಗ ಪ್ರಶ್ನೆ ಮಾಡುತ್ತಿರುವವರು (ಬೆಂಗಳೂರಿಗರು & ಬೆಂಗಳೂರು ಕಂಪನಿಗಳು) ರಾಜ್ಯಕ್ಕೆ ಆದಾಯದ ಭಾರಿ ಪಾಲನ್ನು ನೀಡುವ ಅದೇ ತೆರಿಗೆದಾರರು, ಆದರೆ ಪ್ರತಿಯಾಗಿ ತುಂಬಾ ಕಡಿಮೆ ಕೇಳುತ್ತಾರೆ: ಕೇವಲ ಉತ್ತಮ ರಸ್ತೆಗಳು, ಸರಿಯಾದ ಒಳಚರಂಡಿ ವ್ಯವಸ್ಥೆ ಮತ್ತು ದಕ್ಷ ಆಡಳಿತ.

ಎದ್ದುಕಾಣುವ ಸಮಸ್ಯೆಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸುವ ಬದಲು, ನಮ್ಮ ನಾಯಕರು ಬೇಗನೆ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಮಳೆಯನ್ನು ದೂಷಿಸುವುದು, ಸಾರ್ವಜನಿಕರನ್ನು ದೂಷಿಸುವುದು ಅಥವಾ ಹಿಂದಿನ ಸರ್ಕಾರಗಳನ್ನು ಟೀಕಿಸುವುದನ್ನು ಮಾಡುತ್ತಾರೆ. ನಮ್ಮ ರಸ್ತೆಗಳನ್ನು ಮೊದಲು ವೈಜ್ಞಾನಿಕವಾಗಿ ಏಕೆ ನಿರ್ಮಿಸಲಾಗಿಲ್ಲ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬಾರದೇ ಎಂದು ಪ್ರಶ್ನೆ ಮಾಡಲಾಗಿದೆ. ಸಾಧಾರಣ ಮಳೆಯ ನಂತರ ಪ್ರತಿಯೊಂದು ರಸ್ತೆಯೂ ರದ್ತೆಗುಂಡಿಗಳಾಗಿ ಬದಲಾಗುವುದನ್ನು ಖಚಿತಪಡಿಸಿಕೊಂಡು ಆಳವಾಗಿ ಬೇರೂರಿರುವ ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಸಂಬಂಧವನ್ನು ಏಕೆ ಪರಿಹರಿಸಬಾರದು ಎಂದು ಪ್ರಶ್ನೆ ಮಾಡಲಾಗಿದೆ.

ಮುಂದುವರಿದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಹೇಳಿಕೆಯು ನೇರವಾಗಿ ಕಾಣಿಸಬಹುದು, ಆದರೆ ಅದು ಒಂದು ಗೊಂದಲದ ಮನೋಭಾವವನ್ನು ಬಹಿರಂಗಪಡಿಸುತ್ತದೆ. ಒಬ್ಬ ಚುನಾಯಿತ ನಾಯಕ ಹೂಡಿಕೆದಾರರೊಂದಿಗೆ ಈ ರೀತಿ ಮಾತನಾಡುವುದಿಲ್ಲ. ಬದಲಿಗೆ ಅವರ ಹೂಡಿಕೆಗಳು ರಾಜ್ಯದ ಬೆಳವಣಿಗೆಗೆ ಉತ್ತೇಜನ ನೀಡುವ ಸಮಯದಲ್ಲಿ ಅವರಿಗೆ ಭರವಸೆ ನೀಡಬೇಕು. ಕಾರ್ಪೊರೇಟ್‌ಗಳು ತಮ್ಮ ಧ್ವನಿ ಎತ್ತಿದ್ದಕ್ಕಾಗಿ ಬೆದರಿಕೆ ಹಾಕಬಹುದಾದರೆ, ಸಾಮಾನ್ಯ ನಾಗರಿಕರಿಗೂ ತಮ್ಮ ತೆರಿಗೆ ವಿಚಾರವಾಗಿ ಸ್ಪಷ್ಟವಾಗಿ ಮಾತನಾಡಲು ಅದೇ ಸ್ವಾತಂತ್ರ್ಯವಿದೆಯೇ ಅಥವಾ ಸರ್ಕಾರವು ತನ್ನ ಸ್ವಂತ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿರುವಾಗ ಅವರು "ಅಸಹಕಾರ" ಕ್ಕಾಗಿ ತಕ್ಷಣವೇ ದಂಡವನ್ನು ಎದುರಿಸುತ್ತಾರೆಯೇ? ಘೋಷಣೆಗಳು ಮತ್ತು ನೆಪಗಳಿಗಿಂತ ಬೆಂಗಳೂರು ಉತ್ತಮವಾಗಿದೆ. ಅದರ ತೆರಿಗೆದಾರರು ಮತ್ತು ಹೂಡಿಕೆದಾರರು ರಸ್ತೆಗಳು, ಮೂಲಸೌಕರ್ಯ ಮತ್ತು ಆಡಳಿತಕ್ಕೆ ಅರ್ಹರು, ಅಧಿಕಾರದಲ್ಲಿರುವವರಿಂದ ಜನ ಅದನ್ನು ನಿರೀಕ್ಷೆ ಮಾಡುತ್ತಾರೆ ಎಂದು ಪೋಸ್ಟ್‌ ಮಾಡಲಾಗಿದೆ. ಈ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+