ಆರ್ಸಿಬಿ ಜೊತೆ ಈ ತಂಡ ಖರೀದಿಗೂ ಪ್ಲ್ಯಾನ್ ಹಾಕಿಕೊಂಡಿದ್ದ ವಿಜಯ್ ಮಲ್ಯ! RC ವಿಸ್ಕಿ ಮತ್ತು RCB
ಮದ್ಯ ದೊರೆ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಯೊಂದಿಗೆ ಮತ್ತೊಂದು ತಂಡವನ್ನು ಖರೀದಿ ಮಾಡುವುದಕ್ಕೂ ಮುಂದಾಗಿದ್ದರು ಎನ್ನುವ ವಿಷಯ ಈಗ ವೈರಲ್ ಆಗುತ್ತಿದೆ. ಮದ್ಯದ ದೊರೆ ವಿಜಯ್ ಮಲ್ಯ ಅವರು ಆರ್ಸಿಬಿ ತಂಡವನ್ನು ಪ್ರಾರಂಭಿಕವಾಗ ಖರೀದಿ ಮಾಡಿದ್ದರು. ಇದಾದ ಮೇಲೆ ಅದು RC ವಿಸ್ಕಿ ಮತ್ತು RCB ಎನ್ನುವಂತೆ ಬದಲಾಗಿ ಹೋಗಿದ್ದೆಲ್ಲವೂ ಈಗ ಇತಿಹಾಸ.
ಆದರೆ ಐಪಿಎಲ್ನಲ್ಲಿ ವಿಜಯ್ ಮಲ್ಯ ಅವರು ಎರಡು ತಂಡಗಳನ್ನು ಖರೀದಿ ಮಾಡಬೇಕು ಎಂದು
ಕೊಂಡಿದ್ದರು ಅಂತ ಅವರೇ ಹೇಳಿದ್ದು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಈ ಪಾಡ್ ಕಾಸ್ಟ್ನಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನೀವು ಆರ್ ಸಿಬಿ ತಂಡವನ್ನು ಏಕೆ ಖರೀದಿಸಿದಿರಿ ಎಂಬ ಪ್ರಶ್ನೆಗೆ ವಿಜಯ್ ಮಲ್ಯ ಅವರು, ಯಾವುದೇ ಅಳುಕಿಲ್ಲದೆ ನನ್ನ ರಾಯಲ್ ಚಾಲೆಂಜ್ ವಿಸ್ಕಿ ಪ್ರಮೋಟ್ ಮಾಡೋಕೆ ಅಂತ ಉತ್ತರಿಸುತ್ತಾರೆ. ನೀವು ಶೋಕಿವಾಲ, flamboyant. ತೋರಿಕೆಗಾಗಿಯೋ ಅಥವಾ ಕ್ರೀಡಾಭಿಮಾನದಿಂದಲೋ RCB ತಂಡವನ್ನು ಖರೀದಿಸಲಿಲ್ಲವೆ ಎನ್ನುವ ಪ್ರಶ್ನೆಗೆ, ಇಲ್ಲ ರಾಯಲ್ ಚಾಲೆಂಜ್ ವಿಸ್ಕಿಯ ಮಾರ್ಕೆಟಿಂಗ್ ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಮಲ್ಯ ಹೇಳಿದ್ದಾರೆ.
ಮುಂದುವರಿದು ಕಿಂಗ್ ಫಿಷರ್ ಏರ್ ಲೈನ್ ಪ್ರಮೋಟ್ ಮಾಡಲು ಮತ್ತೊಂದು ತಂಡ ಖರೀದಿ ಮಾಡಬೇಕೆಂದಿದ್ದೆ ಆದರೆ ಅದಕ್ಕೆ ಲಲಿತ್ ಮೋದಿ ಅವಕಾಶ ನೀಡಲಿಲ್ಲ ಎನ್ನುತ್ತಾರೆ ಅಂತಲೂ ಹೇಳಿದ್ದಾರೆ ಮಲ್ಯ. ಮಲ್ಯ ಅಂದುಕೊಂಡಂತೆ ಆಗಿದ್ದರೆ, ಎರಡು ತಂಡಗಳನ್ನು ಖರೀದಿ ಮಾಡಬಹುದಾಗಿತ್ತು. ಆದರೆ ನಿಯಮದಲ್ಲಿ ಅವಕಾಶ ಇಲ್ಲದ್ದರಿಂದ ಅಥವಾ ಫಿಕ್ಸಿಂಗ್ ಇನ್ನೇನಾದರೂ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಅವರಿಗೆ ಎರಡು ತಂಡಗಳನ್ನು ಖರೀದಿ ಮಾಡುವಂತಹ ಅವಕಾಶ ಸಿಕ್ಕಿರಲಿಲ್ಲ.
ಈ ಬಗ್ಗೆ ಬರಹಗಾರ ಹರೀಶ್ ಗಂಗಾಧರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ರಾಜ್ ಶಮಾನಿ ಮತ್ತು ವಿಜಯ್ ಮಲ್ಯ ಅವರ podcast youtube ನಲ್ಲಿದೆ. ಪರದೇಶದಲ್ಲಿರುವ ವಿಜಯ್ ಮಲ್ಯರವರ ಗತಕಾಲದ ಗತ್ತು ಕಿಂಚಿತ್ತೂ ಕಡಿಮೆಯಾಗಿಲ್ಲ. ಅದರ ಸೂಚಕವೆಂಬಂತೆ ಅವರ ಕೋಣೆಯಲ್ಲಿನ ಟಿಪ್ಪು ಹುಲಿ ಮತ್ತು ಟೆಲಿಸ್ಕೋಪ್ ಎದ್ದುಕಾಣುತ್ತದೆ. ಉದ್ಯಮಿ ಮತ್ತು ಸರ್ಕಾರದ ನಡುವಿನ ಸಖ್ಯ ಅರಿಯಲು ಈ podcast ಸಹಾಯಕವಾಗಬಹುದು.
ರಾಜ್ ಶಮಾನಿ ತೀರಾ ಪ್ರೋಬಿಂಗ್ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿಲ್ಲ.ಕೆಲ ಬಾರಿ ಯಾವುದೇ ಸಾಮಾಜಿಕ ಬದ್ಧತೆ ಇಲ್ಲದೆ ಇವರ podcast ನಲ್ಲಿ ಅಪ್ರಾಮಾಣಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಕೂಡ. ಆದರೂ ವಿಜಯ್ ಮಲ್ಯ ಎಪಿಸೋಡ್ ಒಮ್ಮೆ ನೋಡಬಹುದು.
ನನಗೆ ಈ ಕ್ಷಣಕ್ಕೆ ಪ್ರಸ್ತುತ ಅನಿಸಿದ್ದು ರಾಜ್ ಕೇಳಿದ RCB ಕುರಿತಾದ ಒಂದು ಪ್ರಶ್ನೆ. "ನೀವು ಆರ್ ಸಿಬಿ ತಂಡವನ್ನು ಏಕೆ ಖರೀದಿಸಿದಿರಿ" ಎಂಬ ಪ್ರಶ್ನೆ ವಿಜಯ್ ಮಲ್ಯ ಯಾವುದೇ ಅಳುಕಿಲ್ಲದೆ ನನ್ನ ರಾಯಲ್ ಚಾಲೆಂಜ್ ವಿಸ್ಕಿ ಪ್ರಮೋಟ್ ಮಾಡೋಕೆ ಅಂತ ಉತ್ತರಿಸುತ್ತಾರೆ. "ನೀವು ಶೋಕಿವಾಲ, flamboyant. ತೋರಿಕೆಗಾಗಿಯೋ ಅಥವಾ ಕ್ರೀಡಾಭಿಮಾನದಿಂದಲೋ RCB ಖರೀದಿಸಲಿಲ್ಲವೆ" ಎಂಬ ಪ್ರಶ್ನೆಗೆ, ಇಲ್ಲ ರಾಯಲ್ ಚಾಲೆಂಜ್ ವಿಸ್ಕಿಯ ಮಾರ್ಕೆಟಿಂಗ್ ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಮಲ್ಯ ಹೇಳುತ್ತಾರೆ!
ಮುಂದುವರಿದು ಕಿಂಗ್ ಫಿಷರ್ ಏರ್ ಲೈನ್ ಪ್ರಮೋಟ್ ಮಾಡಲು ಮತ್ತೊಂದು ತಂಡ ಖರೀದಿ ಮಾಡಬೇಕೆಂದಿದ್ದೆ ಆದ್ರೆ ಅದಕ್ಕೆ ಲಲಿತ್ ಮೋದಿ ಅವಕಾಶ ನೀಡಲಿಲ್ಲ ಎನ್ನುತ್ತಾರೆ ಮಲ್ಯ! ಅಂದು ಸುಮಾರು 112ಮಿಲಿಯನ್ ಡಾಲರ್ಸ್ ಗಳಿಗೆ (600-700 ಕೋಟಿ) RCB ತಂಡ ಖರೀದಿಸಿದ ಮೇಲೆ UB Groups ಭಾರಿ ಲಾಭ ಮಾಡಿದೆ. ಇಂದು ರಾಯಲ್ ಚಾಲೆಂಜ್ ವಿಸ್ಕಿ ಒಂದು established brand ಆಗಿದ್ದು RCB ತಂಡದಿಂದ ಎನ್ನುತ್ತಾರೆ ಮಲ್ಯ.
ಒಂದಾನೊಂದು ಕಾಲದಲ್ಲಿ ನಮ್ ಅಣ್ಣಾವ್ರು ತಾವು ನಟಿಸಿದ ಚಿತ್ರಗಳಲ್ಲಿ ಎಂದಿಗೂ ಹೆಂಡ, ಸಿಗರೇಟ್ ಮುಟ್ಟಲಿಲ್ಲ ಎಂದು ಹೇಳಿಕೊಳ್ಳುತ್ತಾ ಇದ್ದ ನಮ್ಮ ನಾಡಿನ ಜನರು, ಕನ್ನಡಿಗರೇ ಇಲ್ಲದ ಹೆಂಡ, ಬಿಕರಿ ಮಾಡುವ ಕಂಪನಿಯೊಂದರ ತಂಡವನ್ನು ಕರ್ನಾಟಕದ ತಂಡವೆಂದು ಅಪ್ಪಿಕೊಂಡು, ರಾಜ್ಯದ ಅತ್ಯುನ್ನತ ವೇದಿಕೆಯಲ್ಲಿ ಸನ್ಮಾನಿಸಿ, ಅದಕ್ಕಾಗಿ ಪ್ರಾಣ ಕಳೆದುಕೊಂಡಿದ್ದು ವಿಪರ್ಯಾಸ.
ಮತ್ತೊಂದು ವಿಷಯ. ನೂಕು ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದರಿಂದ ಐಪಿಎಲ್ ಸುದ್ದಿಯಲ್ಲಿದೆ. ಭಾರತದ ಪ್ರತಿ ಹಳ್ಳಿಯಲ್ಲಿಯೂ ಐಪಿಎಲ್ ಹೆಸರಲ್ಲಿ ಜೂಜು ಆಡಿ ಸಾಲ ಮಾಡಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಬಹುಶಃ ಎಂದಿಗೂ ಸುದ್ದಿಯಾಗುವುದಿಲ್ಲ ಅಂತ ಅವರು ಹೇಳಿದ್ದಾರೆ.
-
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್ಸಿಬಿ ಅಧಿಕೃತ ಮಾಹಿತಿ -
Nandini: ಆರ್ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications