Exclusive: ನೆಗೆಟಿವ್ ಇದ್ದವ್ರಿಗೂ ಕೊರೊನಾ ಪಾಸಿಟಿವ್ ಎಂದು ವಿಕ್ಟೋರಿಯಾ ಎಡವಟ್ಟು
ಬೆಂಗಳೂರು, ಜುಲೈ 10: ಕೊರೊನಾವೈರಸ್ ಸುದ್ದಿ ಕೇಳಿಯೇ ಜನ ಹೆದರಿ ಬೆವರುತ್ತಿದ್ದಾರೆ . ಆ ಮಹಾಮಾರಿ ನಮ್ಮ ಬಳಿ ಸುಳಿಯದಿರಲಿ ಎಂದು ಏನೇನೋ ಸಾಹಸ ಮಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ನಂಬರ್ ಒನ್ ಆಸ್ಪತ್ರೆಯೇ ಎಡವಟ್ಟು ಮಾಡಿ ಸಾರ್ವಜನಿಕರನ್ನು ಬೆದರಿಸುತ್ತಿದೆ.
Recommended Video
ಕೊರೊನಾ ನೆಗೆಟಿವ್ ಎಂದು ವರದಿ ಪಡೆದಿರುವ ಬೆಂಗಳೂರು ನಾಗರಿಕರಿಗೆ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ವಿಕ್ಟೋರಿಯಾ ಹಾಗೂ ಬಿಬಿಎಂಪಿ ಸಿಬ್ಬಂದಿ ಕಾಡಿಸುತ್ತಿದ್ದಾರೆ. ವರದಿ ತಯಾರಿಕೆ ಹಾಗೂ ಡಾಟಾ ಎಂಟ್ರಿ ಪ್ರಕ್ರಿಯೆಯಲ್ಲಿ ವಿಕ್ಟೋರಿಯಾ, ಬಿಬಿಎಂಪಿ ಎಡವಟ್ಟಿನಿಂದ ಅನವಶ್ಯಕ ಕಿರುಕುಳ ನೀಡಲಾಗುತ್ತಿದೆ.
ಮಹಿಳೆಯೊಬ್ಬರು ಯಾವುದೇ ಲಕ್ಷಣವಿಲ್ಲದಿದ್ದರೂ ಅವರ ನೆಮ್ಮದಿಗಾಗಿ ಅಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದ್ದರು, ಅವರ ಎಣಿಕೆಯಂತೆ ರಿಪೋರ್ಟ್ ಕೂಡ ಬಂದಿತ್ತು, ಮನೆಗೆ ತೆರಳಿದ ಬಳಿಕ ಬಿಬಿಎಂಪಿಯವರು ಕರೆ ಮಾಡಿ ನಿಮಗೆ ಕೊರೊನಾ ಪಾಸಿಟಿವ್ ಇದೆ ಆಸ್ಪತ್ರೆಗೆ ಬಂದು ದಾಖಲಾಗಿ ಎಂದು ಹೇಳಿದ್ದರು.

ಆದರೆ ಅವರಿಗೆ ವರದಿ ನೆಗೆಟಿವ್ ಬಂದಿದ್ದ ಕಾರಣ ಮತ್ತೊಮ್ಮೆ ಲ್ಯಾಬ್ಗೆ ಹೋಗಿ ಕೇಳಿದಾಗ ಮೊಬೈಲ್ ನಂಬರ್ ವ್ಯತ್ಯಾಸ ಮಾಡಿದ್ದು ಬೆಳಕಿಗೆ ಬಂದಿತ್ತು, ಬಳಿಕ ಬಿಬಿಎಂಪಿಗೆ ತಕ್ಷಣವೇ ಇ-ಮೇಲ್ ಕಳುಹಿಸಲಾಗಿತ್ತು. ಆದರೂ ಕಳೆದ ಮೂರು ದಿನಗಳಿಂದ ಅವರಿಗೆ ಕಾಲ್ ಬರುತ್ತಲೇ ಇದೆ ಎಂದು ದೂರಿದ್ದಾರೆ.
ಕೊರೊನಾ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರು ಮತ್ತೊಮ್ಮೆ ಪರಿಶೀಲಿಸುತ್ತಾರೆ, ಇಲ್ಲವಾದರೆ ಬಿಬಿಎಂಪಿಯಿಂದ ಕಾಲ್ ಬಂದಿದೆ ಅಂದಾಕ್ಷಣ ಆಸ್ಪತ್ರೆಗೆ ಹೋಗಿ ದಾಖಲಾಗುತ್ತಾರೆ, ಇದರಿಂದ ಕೊರೊನಾ ಸೋಂಕು ಇಲ್ಲದಿರುವವರಿಗೂ ಹಬ್ಬುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಸ್ಪತ್ರೆ ಹಾಗೂ ಬಿಬಿಎಂಪಿ ಬೇಜವಾಬ್ದಾರಿ ದೂರವಿಟ್ಟು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬುದು ಆಶಯವಾಗಿದೆ.
ಹಾಗೆಯೇ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗೆ ನೆಗೆಟಿವ್ ವರದಿಯನ್ನು ನೀಡಿದ್ದಾರೆ. ಈ ವಿಕ್ಟೋರಿಯಾ ಹಾಗೂ ಬಿಬಿಎಂಪಿ ಎಡವಟ್ಟಿನಿಂದ ಸಾಕಷ್ಟು ಮಂದಿ ಇದೇ ರೀತಿಯ ತೊಂದರೆಯನ್ನು ಅನುಭವಿಸಿರಬಹುದು.
ಬಿಬಿಎಂಪಿ ಹಾಗೂ ಪ್ರಯೋಗಾಲಯ ಕೇಂದ್ರಗಳು ಇದೇ ರೀತಿ ಇನ್ನಷ್ಟು ಎಡವಟ್ಟು ಮಾಡಿ, ಸೋಂಕು ರಹಿತರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯೋ ಎನ್ನುವ ಆತಂಕ ಎದುರಾಗಿದೆ.
-
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications