ಇಂದಿರಾ ಮೊಬೈಲ್ ಕ್ಯಾಂಟೀನ್ ಗಳಿಗೆ ಅಂತಿಮ ರೂಪ
ಬೆಂಗಳೂರು, ಜನವರಿ 13: ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಾಪಿಸಲು ಸ್ಥಳಾವಕಾಶ ದೊರೆಯದ 24 ವಾರ್ಡ್ ಗಳಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಜನವರಿ 26 ರಂದು ಚಾಲನೆ ದೊರೆಯಲಿದೆ. ಆ ಮೊಬೈಲ್ ಕ್ಯಾಂಟೀನ್ ವಾಹನಗಳ ವಿನ್ಯಾಸಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ.
ಬಿಬಿಎಂಪಿಯ ಸಮಚಾರ ಕ್ಯಾಂಟೀನ್ ಗಳಿಗಾಗಿ 24 ಟೆಂಪೋ ಟ್ರಾವೆಲರ್ ಗಳನ್ನು ಖರೀದಿಸಿದ್ದು,, ಇವುಗಳ ವಿನ್ಯಾಸ ಮಾರ್ಪಡಿಸುವ ಟೆಂಡರ್ ಅನ್ನು ವೀರೇಶ್ ಮೋಟಾರ್ಸ್ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಜಿಪಿಎಸ್, ವಿದ್ಯುತ್ ದೀಪಗಳಿಗಾಗಿ ವಾಹನದ ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಸಂಚಾರಿ ಕ್ಯಾಂಟೀನ್ ಗಾಗಿ ವಾಹನ ವಿನ್ಯಾಸ ಮಾಡುವ ಕೆಲಸ ಆರಂಭವಾಗಿದೆ. ಆರಂಭದಲ್ಲಿ ಒಂದು ವಾಹನವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲಾಗುತ್ತದೆ. ಇದನ್ನು ಪರಿಶೀಲಿಸಿ, ಒಪ್ಪಿಗೆ ದೊರೆತ ಬಳಿಕ ಉಳಿದ ವಾಹನಗಳ ವಿನ್ಯಾಸವನ್ನು ಬದಲಿಸುವ ಕೆಲಸ ನಡೆಯಲಿದೆ. ಜ.26 ರ ವೇಳೆಗೆ ಎಲ್ಲ ಇಂದಿರಾ ಸಂಚಾರಿ ಮೊಬೈಲ್ ಕ್ಯಾಂಟೀನ್ ಗಳು ಸಿದ್ಧಗೊಳ್ಳಲಿದೆ.

ಯಾವ್ಯಾವ ವಾರ್ಡ್ ನಲ್ಲಿ ಕ್ಯಾಂಟೀನ್: ಮನೋರಾಯನಪಾಳ್ಯ, ಹಲಸೂರು, ಕಾಚರಕನಹಳ್ಳಿ, ಚಾಮರಾಜಪೇಟೆ, ಓಕಳೀಪುರಂ, ಕಾಡು ಮಲ್ಲೇಶ್ವರ, ದಯಾನಂದನಗರ, ಶಿವನಗರ, ಶ್ರೀರಾಮಮಂದಿರ, ಮಡಿವಾಳ, ಹೊಂಬೇಗೌಡನಗರ, ಗಿರಿನಗರ, ಶ್ರೀನಗರ, ಜಯನಗರ ಪೂರ್ವ, ಜೆಪಿ ನಗರ, ಗಣೇಶ ಮಂದಿರ, ಯಡಿಯೂರು, ಕೆಂಪಾಪುರ, ಅಗ್ರಹಾರ, ಬಾಪೂಜಿನಗರ, ಎಚ್ ಎಎಲ್ ವಿಮಾನ ನಿಲ್ದಾಣ, ಲಕ್ಷ್ಮೀದೇವಿನಗರ, ಲಗ್ಗೆರೆ, ಜ್ಞಾನಭಾರತಿ, ಯಲಚೇನಹಳ್ಳಿಯಲ್ಲಿ ಸಂಚಾರಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಐಪಿಎಲ್ ಪಂದ್ಯಗಳ ವೇಳೆ ಅಪ್ರಾಪ್ತರನ್ನು ಬಳಸಿ ಮೊಬೈಲ್ ಕಳ್ಳತನ: ಅಂತರರಾಜ್ಯ ಗ್ಯಾಂಗ್ ಬೆಂಗಳೂರಿನಲ್ಲಿ ವಶಕ್ಕೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications