Vatal Nagaraj: ಊಟ-ತಿಂಡಿ ದರ ಏರಿಕೆ: ಆಗಸ್ಟ್ 4ರಂದು 1ರೂ.ಗೆ ರಾಗಿ ಮುದ್ದೆ-ಸಾರು ಮಾರಾಟ

ಬೆಂಗಳೂರು, ಆಗಸ್ಟ್ 03: ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಒಂದು ಕಡೆಗೆ ಹೋಟೆಲ್ ತಿಂಡಿ-ತಿನಿಸು ಹೆಚ್ಚಾಗಿದೆ. ಇತ್ತ ನಾಳೆ ಶುಕ್ರವಾರ ಆಗಸ್ಟ್ 04ರಂದು ಬೆಂಗಳೂರಿನಲ್ಲಿ ಒಂದು ರೂಪಾಯಿಗೆ ರಾಗಿ ಮುದ್ದೆ-ಸಾರು ಸಿಗಲಿದೆ.

ಹೌದು, ಬೆಲೆ ಏರಿಕೆ ವಿರುದ್ಧ 'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಅಧ್ಯಕ್ಷ ಮತ್ತು ಕನ್ನಡಪರ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಹೋಟೆಲ್ ಊಟ-ತಿಂಡಿ ಬೆಲೆ ಏರಿಕೆ ವಿರುದ್ಧ ಶುಕ್ರವಾರ ವಿನೂತನ ಪ್ರತಿಭಟನೆ ಮಾಡಲಿದ್ದಾರೆ.

Vatal Nagaraj Led Protest Against Hotel Food Meal Price Hike In Bengaluru On August 4th

ಶುಕ್ರವಾರದಂದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ಮಧ್ಯಾಹ್ನ 12 ಗಂಟೆಗೆ ದರ ಏರಿಸಿರುವ ಹೋಟೆಲ್‌ ಗಳ ವಿರುದ್ಧ 1 ರೂಪಾಯಿಗೆ ಒಂದು ರಾಗಿ ಮುದ್ದೆ- ಸಾರು ಮಾರಾಟ ಮಾಡಲಿದ್ದಾರೆ. ಈ ವೇಳೆ ಮೆಜೆಸ್ಟಿಕ್ ಸುತ್ತಮುತ್ತಲಿನ ಜನರು ಜಮಾಯಿಸುವ ಸಾಧ್ಯತೆ ಇದೆ.

ಏಕಾಎಕಿ ವೈಜ್ಞಾನಿಕವಾಗಿಯೂ ಚಿಂತನೆ ಮಾಡದೇ ಹೋಟೆಲ್‌ಗಳ ತಿಂಡಿ ತಿನಿಸು, ಟಿ ಕಾಪಿ ದರ ಏರಿಕೆ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ದಿಢೀರನೇ ಹೋಟೆಲ್ ಆಹಾರ ಪದಾರ್ಥಗಳ ದರ ಹೆಚ್ಚಳ ಅವೈಜ್ಞಾನಿಕ ಎಂದು ವಾಟಾಳ್ ನಾಗರಾಜ್ ಅವರು ದೂರಿದರು.

Vatal Nagaraj Led Protest Against Hotel Food Meal Price Hike In Bengaluru On August 4th

ಶೇ. 60 ಮಂದಿ ಹೋಟೆಲ್ ಮೇಲೆ ಅವಲಂಬನೆ

ಅಲ್ಲದೇ ಬೆಂಗಳೂರಿನಲ್ಲಿ ಶೇಕಡಾ 60 ರಷ್ಟು ಮಂದಿ ಹೋಟೆಲ್ ಆಹಾರದ ಮೇಲೆಯೆ ಅವಲಂಬಿತವಾಗಿದ್ದಾರೆ. ಆದ್ದರಿಂದ ಹೋಟೆಲ್‌ಗಳ ಊಟ ತಿಂಡಿ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿನೂತನವಾದ ಪ್ರತಿಭಟನೆ ನಡೆಯಲಿದೆ ಎಂದು 'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಪ್ರಕಟಣೆ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಇಂಧನ, ಅಡುಗೆ ಅನಿಲ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ದರದಲ್ಲಿ ಭಾರಿ ಏರಿಕೆ ಆಗಿದೆ. ಇತ್ತೀಚೆಗೆ ಟೊಮೆಟೊ ಸೇರಿದಂತೆ ತರಕಾರಿಗಳ ದರ ಹೆಚ್ಚಾಗಿದೆ. ಗುರುವಾರ ಬೆಂಗಳೂರಿನಲ್ಲಿ ಕೆ.ಜಿ. ಟೊಮೆಟೊ ಬೆಲೆ 250 ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ಅಲ್ಲದೇ ಇತ್ತೀಚೆಗೆ ಹಾಲಿನ ದರದಲ್ಲಿ ಸಹ ಪರಿಷ್ಕರಣೆ ಆಗಿದೆ.ಈ ಎಲ್ಲ ಕಾಣದಿಂದ ಹೋಟೆಲ್ ತಿಂಡಿ ತಿನಿಸುಗಳ ದರದಲ್ಲಿ ಏರಿಕೆ ಆಗಿದೆ. ಇದರ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರು ಹೊರಬೇಕಾದ ಸ್ಥಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+