ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದ ಕನ್ನಡಿಗರ ಲೆಕ್ಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ವಂದೇ ಭಾರತ್ ಮಿಷನ್ ಅಡಿಯಲ್ಲಿ 61,000ಕ್ಕೂ ಅಧಿಕ ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಮಿಷನ್ ಆರಂಭಿಸಿತ್ತು.

ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೇ ತಿಂಗಳಿನಲ್ಲಿ ವಂದೇ ಭಾರತ್ ಮಿಷನ್ ಆರಂಭಿಸಿದ ಬಳಿಕ ಕರ್ನಾಟಕ ರಾಜ್ಯವೊಂದಕ್ಕೆ 61,000ಕ್ಕೂ ಅಧಿಕ ಜನರು ಆಗಮಿಸಿದ್ದಾರೆ" ಎಂದು ಹೇಳಿದ್ದಾರೆ.

ವಂದೇ ಭಾರತ್ ಮಿಷನ್: 14 ಲಕ್ಷ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ ವಂದೇ ಭಾರತ್ ಮಿಷನ್: 14 ಲಕ್ಷ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ

ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರ್ನಾಟಕದ ಎರಡು ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ವಿಮಾನಗಳು ಆಗಮಿಸಿವೆ.

6ನೇ ಹಂತದ ವಂದೇ ಭಾರತ್ ಮಿಷನ್ ಬುಕ್ಕಿಂಗ್ ಆರಂಭ 6ನೇ ಹಂತದ ವಂದೇ ಭಾರತ್ ಮಿಷನ್ ಬುಕ್ಕಿಂಗ್ ಆರಂಭ

ಸೆಪ್ಟೆಂಬರ್ 25ರಂದು ಅಂತಿಮಗೊಳಿಸಿ ವೇಳಾಪಟ್ಟಿ ಅನ್ವಯ ಕರ್ನಾಟಕಕ್ಕೆ ವಿವಿಧ ದೇಶಗಳಿಂದ 179 ವಿಮಾನಗಳು ಆಗಮಿಸಬೇಕು. ಬೆಂಗಳೂರು ವಿಮಾನ ನಿಲ್ದಾಣ ವಿವಿಧ ನಗರಗಳನ್ನು ಏರ್ ಬಬ್ಬಲ್ ಯೋಜನೆ ಮೂಲಕ ಸಹ ಸಂಪರ್ಕಿಸಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

ವಂದೇ ಭಾರತ್ ಮಿಷನ್: 11 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್! ವಂದೇ ಭಾರತ್ ಮಿಷನ್: 11 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್!

ವಂದೇ ಭಾರತ್ ಮಿಷನ್ 1ನೇ ಹಂತ

ವಂದೇ ಭಾರತ್ ಮಿಷನ್ 1ನೇ ಹಂತ

ಲಾಕ್ ಡೌನ್ ಸಂದರ್ಭದಲ್ಲಿ ವಂದೇ ಭಾರತ್ ಮಿಷನ್ 1ನೇ ಹಂತದಲ್ಲಿ ಕರ್ನಾಟಕಕ್ಕೆ ಬಂದ ವಿಮಾನಗಳು ಕೇವಲ 6. 2ನೇ ಹಂತದ ಮಿಷನ್‌ನಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡ ವಿಮಾನಗಳು ಸೇರಿ ಒಟ್ಟು 36 ವಿಮಾನಗಳು ಬೆಂಗಳೂರು, ಮಂಗಳೂರು ನಿಲ್ದಾಣಕ್ಕೆ ಬಂದವು.

ಒಟ್ಟು 179 ವಿಮಾನಗಳು

ಒಟ್ಟು 179 ವಿಮಾನಗಳು

ವಂದೇ ಭಾರತ್ ಮಿಷನ್ 3ನೇ ಹಂತದಲ್ಲಿ 38, 4ನೇ ಹಂತದಲ್ಲಿ 79, 5ನೇ ಹಂತದಲ್ಲಿ 83 ವಿಮಾನಗಳು ಕರ್ನಾಟಕಕ್ಕೆ ಆಗಮಿಸಿದವು. ಸೆಪ್ಟೆಂಬರ್ 25ರಂದು ವೇಳಾಪಟ್ಟಿ ನಿಗದಿ ಮಾಡಿದಂತೆ 179 ವಿಮಾನಗಳು ರಾಜ್ಯಕ್ಕೆ ಆಗಮಿಸಬೇಕಿದೆ.

ಎಲ್ಲಿಂದ ವಿಮಾನಗಳ ಸಂಚಾರ

ಎಲ್ಲಿಂದ ವಿಮಾನಗಳ ಸಂಚಾರ

ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ ವಿಮಾನಗಳು ಸಂಚಾರ ನಡೆಸಿವೆ. ಮಾಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಜಕಾರ್ತಾ, ಮೆಲ್ಬೋರ್ನ್, ಡುಬ್ಲಿನ್ ಸೇರಿದಂತೆ ವಿವಿಧ ನಗರಗಳಿಂದ ವಿಮಾನಗಳು ಆಗಮಿಸಿವೆ.

ವಿವಿಧ ನಗರಗಳಿಗೆ ಹಾರಾಟ

ವಿವಿಧ ನಗರಗಳಿಗೆ ಹಾರಾಟ

ಬೆಂಗಳೂರು ವಿಮಾನ ನಿಲ್ದಾಣದಿಂದ ಏರ್ ಬಬ್ಬಲ್ ಅಡಿ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಬುದಾಬಿ, ದುಬೈ, ದೋಹಾ, ಕುವೈತ್, ಲಂಡನ್, ಮಸ್ಕತ್, ಪ್ಯಾರೀಸ್, ರಿಯಾದ್, ಸಿಂಗಾಪುರಕ್ಕೆ ಬೆಂಗಳೂರು ಸಂಪರ್ಕ ಕಲ್ಪಿಸಿದೆ.

English summary
More than 61,000 people returned to Karnataka under Vande Bharat Mission. 179 flights come to two airports of the state till September 25, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X