ಟ್ರಾಫಿಕ್ ಕಂಟ್ರೋಲ್ಗೆ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಳಕೆ: ಪೋಷಕರ ವಿರೋಧ
ಬೆಂಗಳೂರು, ಅಕ್ಟೋಬರ್ 11: ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ತಗ್ಗಿಸುವ ಸಲುವಾಗಿ ಮಹತ್ತರ ಸಭೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಟ್ರಾಫಿಕ್ ನಿಯಂತ್ರಣ ಸಲುವಾಗಿ ವ್ಯಕ್ತವಾದ ಎರಡು ಮುಖ್ಯ ಸಲಹೆಗಳು ಸದ್ಯ ಚರ್ಚೆಯಲ್ಲಿವೆ. ಒಂದು ಸಲಹೆಯನ್ನು ಜನ ಸ್ವಾಗತ ಮಾಡಿದರೆ ಇನ್ನೊಂದು ಸಲಹೆಗೆ ಅಸಮಾಧನ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಟ್ರಾಫಿಕ್ದೇ ಅತೀ ದೊಡ್ಡ ಸಮಸ್ಯೆ. ಹೌ ಟು ಅವಾಯ್ಡ್ ಟ್ರಾಫಿಕ್ ಅಂತ ಗೂಗಲ್ ಅಲ್ಲಿ ಸರ್ಚ್ ಮಾಡುವವರ ಸಂಖ್ಯೆ ಕೂಡ ಒನ್ ಟು ಡಬಲ್ ಆಗಿದೆ. ಈ ಮಧ್ಯೆ ಟ್ರಾಫಿಕ್ ಕಡಿಮೆ ಮಾಡುವ ಸಲುವಾಗಿ ನಿನ್ನೆ ಶಿಕ್ಷಣ ಇಲಾಖೆ ನಡೆಸಿದ ಸಭೆಯಲ್ಲಿ ಟ್ರಾಫಿಕ್ ವಾರ್ಡನ್ ಪರಿಚಯ ಮಾಡುವ ಪರಿಕಲ್ಪನೆ ಹಾಗೂ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಳಕೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ.

ಈ ಎರಡೂ ಸಲಹೆಗೆ ಸಂಬಂಧಪಟ್ಟ ಸಂಚಾರಿ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಂಟಿಸಿ ಅಧಿಕಾರಿಗಳು ಗ್ರೀನ್ ಸಿಗ್ನಲ್ ಕೊಟ್ಟಿರುವುದು ಸದ್ಯ ಪೋಷಕರ ತಲೆನೋವಿಗೆ ಕಾರಣವಾಗಿದೆ.
ಟ್ರಾಫಿಕ್ ಕಂಟ್ರೋಲ್ ಮಾಡಲು ಟ್ರಾಫಿಕ್ ವಾರ್ಡನ್ ಪರಿಚಯ ಮಾಡುವ ಪರಿಕಲ್ಪನೆ ಅಂದ್ರೆ ಏನು ಅಂತ ನೋಡುವುದಾದರೆ ಆಯಾಯ ಶಾಲೆಯ ವ್ಯಾಪ್ತಿಯ 100 ಮೀಟರ್ ಟ್ರಾಫಿಕ್ ನಿಯಂತ್ರಣ ಮಾಡುವ ಜವಾಬ್ದಾರಿ ಪೋಷಕರದ್ದು, ದಿನ ಒಬ್ಬೊಬ್ಬ ಪೋಷಕರು ಸ್ವಯಂ ಆಗಿ ಮುಂದೆ ಬಂದು ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕು. ಈ ಬಗ್ಗೆ ಖಾಸಗಿ ಶಾಲ ಒಕ್ಕೂಟ ಒಂದಷ್ಟು ಸಲಹೆ ಕೊಟ್ಟಿದೆ.
ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡಲು ಇಚ್ಛಿಸುವ ಪೋಷಕರಿಗೆ ಪೊಲೀಸ್ ಇಲಾಖೆಯಿಂದ ಟ್ರೈನಿಂಗ್ ಕೊಡಬೇಕು. ಟ್ರೈನಿಂಗ್ ಮುಗಿದ ಮೇಲೆ ಸರ್ಟಿಫೈಡ್ ಅಂತ ಏನಾದ್ರೂ ಸರ್ಟಿಫಿಕೇಟ್ ಕೊಡಬೇಕು. ಆಗ ಪೋಷಕರಿಗೂ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸಲು ಉತ್ತೇಜನ ಸಿಗುತ್ತದೆ. ಬೆಳಿಗ್ಗೆ ಶಾಲಾ ಆರಂಭ ಆಗುವ ಹೊತ್ತಲ್ಲಿ, ಸಂಜೆ ಶಾಲಾ ಬಿಡುವ ಹೊತ್ತಲ್ಲಿ ಶಾಲೆಯ 100 ಮೀಟರ್ ಟ್ರಾಫಿಕ್ ಕಂಟ್ರೋಲ್ ಮಾಡುವ ಟ್ರಾಫಿಕ್ ವಾರ್ಡನ್ ಸಿಲಿಕಾನ್ ಸಿಟಿಯಲ್ಲಿ ಬಹು ಅಗತ್ಯ ಎಂದು ಖಾಸಗಿ ಶಾಲಾ ಒಕ್ಕೂಟ ತಿಳಿಸಿದೆ.
ಇನ್ನು ಯಾವ ಶಾಲೆ ತನ್ನದೇ ಆದ ಸ್ಕೂಲ್ ಬಸ್ ಹೊಂದಿಲ್ಲವೋ ಅಂತಹ ಶಾಲೆಗಳು ಖಾಸಗಿ ಬಸ್ ಬಳಸುವ ಬದಲು ಬಿಎಂಟಿಸಿ ಬಸ್ ಬಳಕೆ ಮಾಡಲು ಸಭೆಯಲ್ಲಿ ಸಲಹೆ ವ್ಯಕ್ತವಾಗಿತ್ತು. ಸಾರ್ವಜನಿಕ ಸಾರಿಗೆ ಉತ್ತೇಜನ ಕೊಡಲು ಕೂಡ ಬಿಎಂಟಿಸಿ ಬಳಕೆ ಉತ್ತಮ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ ಬಿಎಂಟಿಸಿ ಬಸ್ನಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಬಿಎಂಟಿಸಿ ಬಸ್ ಬಳಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಬಿಎಂಟಿಸಿ ಬಸ್ ಹೋಗುವ ವೇಗ ನೋಡಿದರೆ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಬಿಎಂಟಿಸಿ ಮಳೆ ಬಂದರೆ ಸೋರುತ್ತದೆ, ಸೀಟ್ ಹರಿದು ಹೋಗಿದೆ. ಎಲ್ಲಿ ಕೆಟ್ಟು ನಿಲ್ಲುತ್ತೋ ಅದಕ್ಕೆ ಗೊತ್ತಿಲ್ಲ. ಹೊಗೆಯ ಪ್ರಮಾಣ ಮಾತ್ರ ಅಬ್ಬಬ್ಬಾ ಹೇಳುವುದಕ್ಕೆ ಅಸಾಧ್ಯ ಹೀಗಿರುವಾಗ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಿಟ್ಟರೆ ಹೆಂಗಪ್ಪಾ ಕತೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ NWKRTC ವೇಗದೂತ ಬಸ್ಗಳ ವ್ಯವಸ್ಥೆ: ಟಿಕೆಟ್ ದರ, ಮಾರ್ಗ-ವೇಳಾಪಟ್ಟಿ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications