ಭಾರತೀಯನ ಮಾನವೀಯ ಕಾರ್ಯಕ್ಕೆ ಹೊಗಳಿ ಯು.ಎಸ್ ಸೆಕ್ರೆಟರಿ ಟ್ವೀಟ್
ಬೆಂಗಳೂರು, ಏಪ್ರಿಲ್ 30: ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ. ಹೀಗಾಗಿ, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಆದರೆ, ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರೂ ಸೇರಿದಂತೆ ಎಷ್ಟೋ ಮಂದಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
Recommended Video
ವ್ಯಾಪಾರ-ವಹಿವಾಟು ಬಂದ್ ಆಗಿರುವುದರಿಂದ ಎಷ್ಟೋ ಜನರಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನೂ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ನಟ-ನಟಿಯರು, ರಾಜಕಾರಣಿಗಳು, ಸಮಾಜ ಸೇವಕರು, ಕಾರ್ಪೊರೇಟ್ ದಿಗ್ಗಜರು ಸಹಾಯ ಹಸ್ತ ಚಾಚುತ್ತಿದ್ದಾರೆ.

ಈ ನಡುವೆ ಗ್ಲೋಬಲ್ ಕಲ್ಚರ್ ಎಂಬ ಸಂಸ್ಥೆಯಿಂದ ಅರುಣ್ ಸಿವಾಗ್ ಎಂಬುವರು ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ನೆರವು ನೀಡಿದ್ದಾರೆ. ಎಸ್.ಸಿ.ಇ.ಎ.ಡಿ ಫೌಂಡೇಶನ್ ಮತ್ತು ರಾಗರಶ್ಮಿ ಫೌಂಡೇಶನ್ ಜೊತೆ ಸೇರಿ 12 ಸಾವಿರ ಕೆಜಿ ಆಹಾರ, ಅಗತ್ಯ ವಸ್ತುಗಳು ಮತ್ತು ಔಷಧಿಗಳನ್ನು ಬೆಂಗಳೂರಿನಲ್ಲಿ ವಿತರಿಸಿದ್ದಾರೆ. ಈ ಬಗ್ಗೆ ಯು.ಎಸ್ ಕಾನ್ಸುಲೇಟ್ ಚೆನ್ನೈ ಟ್ವೀಟ್ ಮಾಡಿತ್ತು.
We thank @exchangealumni @SivagArun founder Globalkulture for his service to ppl affected by #COVID19!This April he assisted #SCEADFoundation & #RagarashmiFoundation w/distributing 12,000kg of food, essential supplies & medicines to vulnerable communities in Bengaluru @1beatmusic pic.twitter.com/C56HBU4qAr
— US Consulate Chennai (@USAndChennai) April 26, 2020
ಇದನ್ನ ಕಂಡ ಯು.ಎಸ್ ಸೆಕ್ರಿಟರಿ ಮೈಕ್ ಪಾಂಪಿಯೋ, ಅರುಣ್ ಸಿವಾಗ್ ಕೆಲಸವನ್ನು ಶ್ಲಾಘಿಸಿದ್ದಾರೆ.
#ExchangeAlumni getting it done in #India. @sivagarun, your humanitarian spirit and service inspires us all. https://t.co/6o6IqWA4MS
— Secretary Pompeo (@SecPompeo) April 29, 2020
''ಅರುಣ್ ಸಿವಾಗ್, ನಿಮ್ಮ ಮಾನವೀಯ ಮನೋಭಾವ ಮತ್ತು ಸೇವ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ'' ಎಂದು ಮೈಕ್ ಪಾಂಪಿಯೋ ಟ್ವೀಟ್ ಮಾಡಿದ್ದಾರೆ.












Click it and Unblock the Notifications