ಭಾರತೀಯನ ಮಾನವೀಯ ಕಾರ್ಯಕ್ಕೆ ಹೊಗಳಿ ಯು.ಎಸ್ ಸೆಕ್ರೆಟರಿ ಟ್ವೀಟ್
ಬೆಂಗಳೂರು, ಏಪ್ರಿಲ್ 30: ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ. ಹೀಗಾಗಿ, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಆದರೆ, ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರೂ ಸೇರಿದಂತೆ ಎಷ್ಟೋ ಮಂದಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
Recommended Video
ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!
ವ್ಯಾಪಾರ-ವಹಿವಾಟು ಬಂದ್ ಆಗಿರುವುದರಿಂದ ಎಷ್ಟೋ ಜನರಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನೂ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ನಟ-ನಟಿಯರು, ರಾಜಕಾರಣಿಗಳು, ಸಮಾಜ ಸೇವಕರು, ಕಾರ್ಪೊರೇಟ್ ದಿಗ್ಗಜರು ಸಹಾಯ ಹಸ್ತ ಚಾಚುತ್ತಿದ್ದಾರೆ.
ಈ ನಡುವೆ ಗ್ಲೋಬಲ್ ಕಲ್ಚರ್ ಎಂಬ ಸಂಸ್ಥೆಯಿಂದ ಅರುಣ್ ಸಿವಾಗ್ ಎಂಬುವರು ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ನೆರವು ನೀಡಿದ್ದಾರೆ. ಎಸ್.ಸಿ.ಇ.ಎ.ಡಿ ಫೌಂಡೇಶನ್ ಮತ್ತು ರಾಗರಶ್ಮಿ ಫೌಂಡೇಶನ್ ಜೊತೆ ಸೇರಿ 12 ಸಾವಿರ ಕೆಜಿ ಆಹಾರ, ಅಗತ್ಯ ವಸ್ತುಗಳು ಮತ್ತು ಔಷಧಿಗಳನ್ನು ಬೆಂಗಳೂರಿನಲ್ಲಿ ವಿತರಿಸಿದ್ದಾರೆ. ಈ ಬಗ್ಗೆ ಯು.ಎಸ್ ಕಾನ್ಸುಲೇಟ್ ಚೆನ್ನೈ ಟ್ವೀಟ್ ಮಾಡಿತ್ತು.
We thank @exchangealumni @SivagArun founder Globalkulture for his service to ppl affected by #COVID19!This April he assisted #SCEADFoundation & #RagarashmiFoundation w/distributing 12,000kg of food, essential supplies & medicines to vulnerable communities in Bengaluru @1beatmusic pic.twitter.com/C56HBU4qAr
— US Consulate Chennai (@USAndChennai) April 26, 2020
ಇದನ್ನ ಕಂಡ ಯು.ಎಸ್ ಸೆಕ್ರಿಟರಿ ಮೈಕ್ ಪಾಂಪಿಯೋ, ಅರುಣ್ ಸಿವಾಗ್ ಕೆಲಸವನ್ನು ಶ್ಲಾಘಿಸಿದ್ದಾರೆ.
#ExchangeAlumni getting it done in #India. @sivagarun, your humanitarian spirit and service inspires us all. https://t.co/6o6IqWA4MS
— Secretary Pompeo (@SecPompeo) April 29, 2020
''ಅರುಣ್ ಸಿವಾಗ್, ನಿಮ್ಮ ಮಾನವೀಯ ಮನೋಭಾವ ಮತ್ತು ಸೇವ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ'' ಎಂದು ಮೈಕ್ ಪಾಂಪಿಯೋ ಟ್ವೀಟ್ ಮಾಡಿದ್ದಾರೆ.