ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ
ಬೆಂಗಳೂರು, ಡಿಸೆಂಬರ್ 13: ಒಂದೊಮ್ಮೆ ಹನಿಕೊಂಬ್ ಬಗ್ಗೆ ಮಾಹಿತಿ ತಿಳಿಯದಿದ್ದರೆ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿಯಲ್ಲಿ ಬೆಂಗಳೂರಲ್ಲೂ ದುರಂತ ಸಂಭವಿಸುತ್ತಿತ್ತು ಎಂದು ಸಾರಿಗೆ ತಜ್ಞ ಶ್ರೀಹರಿ ತಿಳಿಸಿದ್ದಾರೆ.
ಪ್ರತಿ ವರ್ಷವೂ ಪ್ರತಿಯೊಂದು ಮೆಟ್ರೋ ಮಾರ್ಗದ ತಪಾಸಣೆ ಮಾಡಲೇಬೇಕು, ಜನರ ಹಿತದೃಷ್ಟಿಯಿಂದ ಥರ್ಡ್ ಪಾರ್ಟಿ ಎಕ್ಸ್ಪರ್ಟ್ ಕರೆಸಿ ತಪಾಸಣೆ ಮಾಡಿಸಬೇಕಿತ್ತು ಆದರೆ ಅದ್ಯಾವುದನ್ನೂ ಬಿಎಂಆರ್ಸಿಎಲ್ ಮಾಡಿಲ್ಲ, ಎಲ್ಲವನ್ನೂ ರೆವಿನ್ಯೂ ದೃಷ್ಟಿಯಿಂದಲೇ ನೋಡುವುದು ತಪ್ಪು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿತ್ಯ ರೈಲುಗಳು ಓಡಾಡುವಾಗ ರೈಲಿನ ಭಾರ ಸಂಪೂರ್ಣವಾಗಿ ಪಿಲ್ಲರ್ಗಳ ಮೇಲೆಯೇ ಬೀಳುತ್ತದೆ. ಪ್ರತಿ ವರ್ಷ ಟೆಸ್ಟ್ ಮಾಡಿಸುವುದರಿಂದ ಸಮಸ್ಯೆಗಳು ಏನೇ ಇದ್ದರೂ ಮೊದಲೇ ಗೊತ್ತಾಗುತ್ತದೆ ಬೇಗ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತದೆ. ಸರ್ಕಾರ ಈ ಕಡೆಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂಜಿನಿಯರ್ ನ್ನು ತರಾಟೆಗೆ ತೆಗೆದುಕೊಂಡು ನಿಜವಾದ ಕಾರಣವನ್ನು ಬಹಿರಂಗಪಡಿಸುಬೇಕು ಎಲ್ಲವನ್ನೂ ಅನುದಾನದ ದೃಷ್ಟಿಯಿಂದ ನೋಡದೆ ಲಕ್ಷಾಂತರ ಜನರ ಸುರಕ್ಷತೆಯ ಕಡೆಗೆ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.












Click it and Unblock the Notifications