ಮೆಜೆಸ್ಟಿಕ್ ಸುತ್ತ-ಮುತ್ತ ವಾಹನ ನಿಲ್ಲಿಸುವಂತಿಲ್ಲ

ಬೆಂಗಳೂರು, ಅ.1 : ಸರಣಿ ರಜೆಗಳ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಉಂಟಾಗುವ ಸಂಚಾರ ದಟ್ಟಣೆಯನ್ನು ತಡೆಯಲು ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಬುಧವಾರದಿಂದ ಶುಕ್ರವಾರದ ತನಕ ಈ ಆದೇಶ ಅನ್ವಯವಾಗುತ್ತದೆ.

ಗಾಂಧಿ ಜಯಂತಿ, ವಿಜ­ಯ­ದಶಮಿ, ವಾರಾಂತ್ಯದ ಪ್ರಯುಕ್ತ ಸಾರ್ವಜನಿ­ಕರು ತಮ್ಮ ಊರುಗಳಿಗೆ ತೆರಳಲು ಬುಧವಾರ ಸಂಜೆಯಿಂದ ಮೆಜೆಸ್ಟಿಕ್‌ಗೆ ಆಗಮಿಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ವಾಹನ ನಿಲುಗಡೆ ನಿಷೇಧಿಸಲಾಗಿದೆ. [ಸರ್ಕಾರಿ ನೌಕರರಿಗೆ ಅ.6ರಂದು ಬಕ್ರೀದ್ ರಜೆ]

traffic restrictions

ಯಾವ ರಸ್ತೆಗಳಿಗೆ ಅನ್ವಯ : ಧನ್ವಂತರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್‌ ಬಂಡ್‌ ರಸ್ತೆ, ಪ್ಲಾಟ್‌­ ಫಾರಂ ರಸ್ತೆ, ಖೋಡೇಸ್‌ ಜಂಕ್ಷನ್‌­ನಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಮೈಸೂರು, ಕೊಡಗು ಮತ್ತು ಕೇರಳ ಕಡೆಗೆ ಹೋಗುವ ಬಸ್‌ಗಳು ಮೈಸೂರು ರಸ್ತೆಯ ಸ್ಯಾಟಲೈಟ್‌ ನಿಲ್ದಾಣದಿಂದ, ತಮಿ­ಳು­ನಾಡು ಕಡೆಗೆ ಹೋಗುವ ಬಸ್‌ಗಳು ಶಾಂತಿನಗರ ನಿಲ್ದಾಣದಿಂದ ಹೊರಡಲಿವೆ.

ಪೀಣ್ಯಕ್ಕೆ ಹೋಗಬೇಕು : ಬಳ್ಳಾರಿ, ಹೊಸಪೇಟೆ ವಲಯದ ವೇಗದೂತ ಬಸ್ಸುಗಳು ಸೆ.21ರಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಸಂಚರಿಸುತ್ತಿದ್ದ 146 ವೇಗದೂತ ಬಸ್‌ಗಳು ಪೀಣ್ಯಕ್ಕೆ ಸ್ಥಳಾಂತರಗೊಂಡಿವೆ. [ಪೀಣ್ಯದಿಂದ ಹೊರಡುವ ಬಸ್ಸುಗಳು]

ಅ.2ರ ಗುರುವಾರದಿಂದ ಸರಣಿ ರಜೆ ಇದೆ. ಸಾರ್ವಜನಿಕರು ಊರುಗ­ಳಿಗೆ ತೆರಳಲು ಬುಧವಾರ ಸಂಜೆ ಕೆಂಪೇಗೌಡ ಬಸ್‌ ನಿಲ್ದಾಣ, ನಗರ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆ­ಯಲ್ಲಿ ಬರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಆದ್ದರಿಂದ ಸಾರ್ವಜನಿಕರು ಬಿಎಂಟಿಸಿ ಬಸ್‌ ಅಥವಾ ಆಟೋಗಳಲ್ಲಿ ನಿಲ್ದಾಣಕ್ಕೆ ಬರಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಸಾಲು-ಸಾಲು ರಜೆಗಳು
* ಅ.2 ಗಾಂಧಿ ಜಯಂತಿ
* ಅ.3 ಆಯುಧಪೂಜಾ
* ಅ.4 ವಿಜಯದಶಮಿ
* ಅ. 5 ಭಾನುವಾರ
* ಅ. 6 ಬಕ್ರೀದ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+