ಕರ್ನಾಟಕ ಮಾಧ್ಯಮ ಅಕಾಡೆಮಿಗೆ 16 ಸದಸ್ಯರ ನೇಮಕ
ಬೆಂಗಳೂರು, ಜುಲೈ 30 : ಕರ್ನಾಟಕ ಮಾಧ್ಯಮ ಅಕಾಡೆಮಿಗೆ 16 ಸದಸ್ಯರನ್ನು ನೇಮಕ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜಶೇಖರ ಕೋಟಿ (ಮೈಸೂರು), ಎಚ್.ಬಿ. ಮದನಗೌಡ (ಹಾಸನ), ಎಚ್.ಆರ್. ರವೀಶ್ (ಬೆಂಗಳೂರು), ಎನ್. ರವಿಕುಮಾರ್ (ಶಿವಮೊಗ್ಗ). ನಿಂಗಪ್ಪ ಎಚ್. ಚಾವಡಿ (ಹಾವೇರಿ), ಕೆ.ಎಸ್. ಗಣೇಶ್ (ಕೋಲಾರ), ಎಂ.ಯು. ವೆಂಕಟೇಶಯ್ಯ (ಬೆಂಗಳೂರು), ಗಣೇಶ್ ಕದಂ (ಧಾರವಾಡ), ಗಂಗಾಧರ ಹಿರೇಗುತ್ತಿ (ಕಾರವಾರ), ಎನ್. ನಾಗರಾಜ್ (ರಾಯಚೂರು) ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೇಮಕ ಮಾಡಲಾಗಿದೆ.

ಬೆಂಗಳೂರು ವಿ.ವಿ., ಮಂಗಳೂರು ವಿ.ವಿ, ಕರ್ನಾಟಕ ರಾಜ್ಯ ಮಹಿಳಾ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಆಕಾಶವಾಣಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಅವರನ್ನೂ ಸದಸ್ಯರನ್ನಾಗಿ ನೇಮಿಸಲಾಗಿದೆ.












Click it and Unblock the Notifications