Bengaluru International Airport: ಹೊಸ ದಂಡ ನಿಯಮಕ್ಕೆ ಟ್ಯಾಕ್ಸಿ ಚಾಲಕರ ವಿರೋಧ, ಪ್ರಯಾಣಿಕರಿಗೆ ಸಂಕಷ್ಟ ನಿರೀಕ್ಷೆ
Bengaluru International Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳುವ ಮತ್ತು ಅಲ್ಲಿಂದ ನಗರದತ್ತ ಬರುವ ಪ್ರಯಾಣಿರಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಕ್ಯಾಬ್ ನಿಲುಗಡೆಗೆ ಸಮಯಾವಕಾಶ ಮಿತಿ ಹೇರಿರುವುದು ಮತ್ತು ದಂಡ ನಿಯಮ ಜಾರಿಗೆ ತಂದಿರುವುದು. ಹೊಸ ನಿಯಮ ವಿರುದ್ಧ ಕನ್ನಡಪರ ಹೋರಾಟಗಾರರ ಸಹಕಾರದಲ್ಲಿ ಟ್ಯಾಕ್ಸಿ ಚಾಲಕರು ಪ್ರತಿಭಟಿಸಿದ್ದಾರೆ.
ಏರ್ಪೊರ್ಟ್ ಸಂಪರ್ಕಿಸುವ ಹೆದ್ದಾರಿ ರಸ್ತೆ ಸಾದನಹಳ್ಳಿ ಟೋಲ್ ಬಳಿ ಟ್ಯಾಕ್ಸಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ಇದರಿಂದ ಏರ್ಪೋರ್ಟ್ಗೆ ತೆರಳುವ ದೈನಂದಿನ ಸಾವಿರಾರು ಜನರಿಗೆ ತೊಂದರೆ ಉಂಟಾಯಿತು. ಈ ಹೋರಾಟ ಮುಂದುವರಿದರೆ, ಏರ್ಪೋರ್ಟ್ನಲ್ಲಿ ಟ್ಯಾಕ್ಸಿ ಸೇವೆಗೆ ಅಡಚಣೆ ಉಂಟಾಗಲಿದೆ. ಸಾದನಹಳ್ಳಿ ಟೋಲ್ ಬಳಿ ದಟ್ಟಣೆ ನಿರ್ಮಾಣವಾಗಲಿದೆ. ಏರ್ಪೋರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚಾರ ನಿಧಾನಗೊಳ್ಳುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಟ್ಯಾಕ್ಸಿ ಚಾಲಕರ ಒಕ್ಕೂಟಗಳು ಹೊಸ ದಂಡ ನಿಯಮ ಟ್ಯಾಕ್ಸಿ ಚಾಲಕರಿಗೆ ಹೊರೆ ಉಂಟು ಮಾಡಲಿದೆ ಎಂದು ಆರೋಪಿಸಿವೆ. ಈ ನಿಯಮ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟಿವೆ. ಹೋರಾಟಗಾರರ ಈ ಬೇಡಿಕೆ ಈಡೇರದಿದ್ದರೆ ಏರ್ಪೋರ್ಟ್ಗೆ ನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರು ಹಾಗೂ ಇತರ ಜಿಲ್ಲೆಗಳ ಜನರಿಗೆ ತೊಂದರೆ ಆಗಬಹುದು. ವಿಮಾನ ನಿಲ್ದಾಣಗಳಲ್ಲಿ ಪಿಕ್ ಅಪ್ ಸೇವೆ ನಿಲ್ಲಿಸಿಬಿಡಬಹುದು. ಏರ್ಪೋರ್ಟ್ ಸಂಪರ್ಕ ಸಾಧಿಸುವ ಇತರ ವಾಹನಗಳಿಗೂ ತೊಂದರೆ ಆಗಬಹುದು.
ಏರ್ಪೋರ್ಟ್ ಹೊಸ ನಿಯಮಗಳೇನು?
ಹೊಸ ನಿಯಮಗಳ ಪ್ರಕಾರ, ಬೆಂಗಳೂರು ಏರ್ಪೋರ್ಟ್ ಆವರಣದಲ್ಲಿ ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ವಾಹನಗಳು (ಟ್ಯಾಕ್ಸಿ, ಕ್ಯಾಬ್) ಗಳು ಎಂಟು ನಿಮಿಷಗಳವರೆಗೆ ಉಚಿತವಾಗಿ ಪಿಕ್ಅಪ್ ಮತ್ತು ಡ್ರಾಪ್ ವೇಳೆ ಕಾಯಬಹುದು. 8 ನಿಮಿಷಗಳ ನಂತರ 13 ನಿಮಿಷಗಳವರೆಗೆ ನಿಂತರೆ ಆಗ 150 ರೂ. ದಂಡ ಪಾವತಿಸಬೇಕಾಗುತ್ತದೆ. 13 ರಿಂದ 18 ನಿಮಿಷಗಳವರೆಗೆ ಟ್ಯಾಕ್ಸಿಗಳು ನಿಂತರೆ 300 ರೂ. ದಂಡ ಹೇರಲಾಗುತ್ತದೆ. ಈ ಪಾರ್ಕಿಂಗ್ ನಿಯಮ ಉಲ್ಲಂಘನೆ ಆದರೆ, ವಾಹನಗಳನ್ನು ಟೊಯಿಂಗ್ ಸಹ ಮಾಡಬಹುದೆಂದು ನಿಯಮ ರೂಪಿಸಲಾಗಿದೆ. ಇದು ಏರ್ಪೋರ್ಟ್ ಟರ್ಮಿನಲ್ 1, 2ಕ್ಕೆ ಅನ್ವಯವಾಗಲಿದೆ.
ಈ ಟ್ಯಾಕ್ಸಿ ಚಾಲಕರು ಸಮಯ ಮಿತಿಗಳು ನಿಯಗಳು ಅವಾಸ್ತವಿಕವಾಗಿವೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಪೀಕ್ ಸಮಯದಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಾಗುತ್ತದೆ. ದಟ್ಟಣೆ ವೇಳೆ ಹೀಗೆ ದಂಡ ವಿಧಿಸಿದರೆ ಸಮಸ್ಯೆ ಆಗುತ್ತದೆ ಎಂದು ಟ್ಯಾಕ್ಸಿ ಚಾಲಕರ ಒಕ್ಕೂಟಗಳು ವಿರೋಧಿಸಿ ಪ್ರತಿಭಟಿಸಿವೆ. ಸದ್ಯ ಈ ಬಗ್ಗೆ ಕೆಐಎಎಲ್ಗೆ ಮನವಿ ಮಾಡಲಾಗಿದೆ.
ಪ್ರಯಾಣಿಕರಿಗೆ ಪರ್ಯಾಯ ಆಯ್ಕೆಗಳು ಏನು?
ಬೆಂಗಳೂರು ಏರ್ಪೋರ್ಟ್ನಿಂದ ಬರುವ ಪ್ರಯಾಣಿಕರಿಗೆ ಟ್ಯಾಕ್ಸಿ ಸಿಗದಿದ್ದ ಪಕ್ಷದಲ್ಲಿ ಅವರು, BMTC ವಾಯು ವಜ್ರ ಮೂಲಕ ಬೆಂಗಳೂರಿನ ಯಲಹಂಕ, ವಿಜಯನಗರ, ಹೆಬ್ಬಾಳ, ಮೆಜೆಸ್ಟಿಕ್ ಸೇರಿದಂತೆ ಇತರ ಮಾರ್ಗಗಳಲ್ಲಿ ಸಂಚರಿಸಬಹುದಾಗಿದೆ. ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗದರೆ ಬಿಎಂಟಿಸಿ ಸಾರಿಗೆ ಅವಲಂಬನೆ ಅತ್ಯುತ್ತಮ ಆಯ್ಕೆ ಆಗಿದೆ. ಮುಂದಿನ ಬೆಳವಣಿಗೆ ನೋಡಿಕೊಂಡು ಪ್ರಯಾಣಿಕರು ತಮ್ಮ ಏರ್ಪೋರ್ಟ್ ಪ್ರಯಾಣವನ್ನು ಸೂಕ್ತ ರೀತಿಯಲ್ಲಿ ಯೋಜಿಸಿಕೊಳ್ಳಬೇಕಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications