ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಉದ್ಧಾರಕ್ಕೆ ಐಐಎಂಬಿಯಲ್ಲಿ ಚಿಂತಕರ ಚಾವಡಿ

By Prasad
|
Google Oneindia Kannada News

ಬೆಂಗಳೂರು, ಅಕ್ಟೋಬರ್ 06 : ಹಲವಾರು ದಶಕಗಳಿಂದ ಬೆಂಗಳೂರು ಊಹೆಗೂ ಮೀರಿ ಇನ್ನು ಬೆಳೆಯಲು ಅವಕಾಶವಿಲ್ಲದಂತೆ ಅಗಾಧವಾಗಿ ಬೆಳೆದಿದೆ. ಒಂದಾನೊಂದು ಕಾಲದಲ್ಲಿ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇಂದು ಸಿಲಿಕಾನ್ ನಗರಿಯಾಗಿ ಮಿಂಚುತ್ತಿದೆ.

ಪೌರಕಾರ್ಮಿಕರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ, ರಾಜೀವ್ ಚಂದ್ರಶೇಖರ್ ಖಂಡನೆಪೌರಕಾರ್ಮಿಕರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ, ರಾಜೀವ್ ಚಂದ್ರಶೇಖರ್ ಖಂಡನೆ

ವಿಶ್ವದ ಖ್ಯಾತ ಸಾಫ್ಟ್ ವೇರ್ ಕಂಪನಿಗಳೆಲ್ಲ ಬೆಂಗಳೂರಿನಲ್ಲಿ ವ್ಯಾಪಾರದಲ್ಲಿ ತೊಡಗಿವೆ. ಆದರೆ, ಈ ಯಶಸ್ಸಿಗೆ ತಕ್ಕ ಬೆಲೆಯನ್ನೂ ತೆತ್ತಿದೆ ಬೆಂಗಳೂರು. ಟ್ರಾಫಿಕ್ ಸಮಸ್ಯೆ, ತುಂಬಿ ತುಳುಕುತ್ತಿರುವ ಚರಂಡಿಗಳು, ಕಣ್ಮರೆಯಾಗುತ್ತಿರುವ ಕೆರೆಗಳು, ಹೆಚ್ಚುತ್ತಿರುವ ತಾಪಮಾನ ಹಾಗೂ ಅಸಮರ್ಪಕ ಮೂಲಸೌಕರ್ಯ! ಒಂದಾ ಎರಡಾ?

Swarajya presents Citiscapes Bengaluru

ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಕ್ಟೋಬರ್ 7, ಶನಿವಾರದಂದು ನಮ್ಮ ಬೆಂಗಳೂರು ಪ್ರತಿಷ್ಠಾನ, ಸ್ವರಾಜ್ಯ ಪತ್ರಿಕೆಯ ಸಹಯೋಗದೊಂದಿಗೆ "ಸಿಟಿಸ್ಕೇಪ್ಸ್-ಬೆಂಗಳೂರು" ಎಂಬ ಒಂದು ದಿನದ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ಸಂಶೋಧಕರು, ಆಡಳಿತಗಾರರು, ತಜ್ಞರು ಹಾಗು ನಾಗರಿಕರನ್ನು ಒಂದು ಸೂರಿನಡಿ ಸೇರಿಸಿ, ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಶಾಶ್ವತ ಪರಿಹಾರ ಹುಡುಕುವುದು ಈ ಸಮ್ಮೇಳನದ ಮುಖ್ಯ ಉದ್ದೇಶ. ಈ ಸಮ್ಮೇಳನವು ಸಾರಿಗೆ, ಪರಿಸರ ಹಾಗು ರಾಜಕೀಯ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡಂತೆ ನಮ್ಮ ಬೆಂಗಳೂರಿಗೆ ಒಂದು ಸಮಗ್ರ ಮುನ್ನೋಟ-2030 ಸಿದ್ಧಪಡಿಸಲಿದೆ.

ಸಮ್ಮೇಳನದ ವಿವರ:

ಕಾರ್ಯಕ್ರಮ : ಸಿಟಿಸ್ಕೇಪ್ಸ್-ಬೆಂಗಳೂರು
ದಿನಾಂಕ : ಅಕ್ಟೋಬರ್ 7, 2017
ಸಮಯ : ಬೆಳಗ್ಗೆ 9:40ರಿಂದ ಸಂಜೆ 6:15 ರವರೆಗೆ
ಸ್ಥಳ : ಐಐಎಂಬಿ ಸಭಾಂಗಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು

ಭಾಷಣಕಾರರು :

ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯರು
ಪ್ರಿಯಾಂಕ್ ಖರ್ಗೆ - ಐಟಿ/ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ
ಟಿ.ವಿ.ರಾಮಚಂದ್ರ - ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ಪ್ರೊ. ಜಿ. ರಘುರಾಮ್ - ನಿರ್ದೇಶಕರು, ಐಐಎಂಬಿ
ಎ.ಏನ್. ಎಲ್ಲಪ್ಪ ರೆಡ್ಡಿ, ನಿವೃತ್ತ ಐಎಫ್ಎಸ್ ಅಧಿಕಾರಿ
ಪ್ರಕಾಶ್ ಬೆಳವಾಡಿ - ನಟ ಹಾಗೂ ರಂಗಕರ್ಮಿ
ಆರ್. ಜಗನ್ನಾಥ್ - ಸಂಪಾದಕೀಯ ನಿರ್ದೇಶಕರು, ಸ್ವರಾಜ್ಯ
ಶ್ರೀಧರ್ ಪಬ್ಬಿಸೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಮ್ಮ ಬೆಂಗಳೂರು ಪ್ರತಿಷ್ಠಾನ

English summary
Swarajya, in collaboration with Namma Bengaluru foundation, is pleased to present the first edition of ‘Cityscapes – Bengaluru’. The goal of this event is to gather researchers, administrators, experts and citizens under one roof to discuss the issues faced by the city and arrive and sustainable solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X