ಮಕ್ಕಳೇ ಕಥೆ ಬರೆಯುವುದು ಹೇಗೆ ಕಾರ್ಯಾಗಾರಕ್ಕೆ ಸಿದ್ಧರಾಗಿ
ಮಕ್ಕಳೇ ಕಥೆ ಬರೆಯುವುದು ಹೇಗೆ ಕಾರ್ಯಾಗಾರಕ್ಕೆ ಸಿದ್ಧರಾಗಿ
ಬೆಂಗಳೂರು, ನವೆಂಬರ್ 14: ಇನ್ನು ನಗರದ ಮಕ್ಕಳು ವಾರ್ಷಿಕ ಮಕ್ಕಳ ಬರಹಗಾರರ ಉತ್ಸವಕ್ಕೆ ಸಿದ್ಧವಾಗಬಹುದು. ಮಕ್ಕಳಲ್ಲಿ ಕಥೆ ಬರೆಯುವ ಹವ್ಯಾಸವನ್ನು ರೂಢಿಸಲು ಚಿತ್ರಗಾರರು ಮತ್ತು ಥಿಯೇಟರ್ ವೃತ್ತಿಗಾರರು ತರಬೇತಿ ನೀಡಲಿದ್ದಾರೆ.
ಸಮಾಜದಲ್ಲಿ ನಡೆಯುವ ಘಟನೆಗಳು, ಪ್ರಾಪಂಚಿಕ ಘಟನೆಗಳನ್ನು ಆಯ್ಕೆ ಮಾಡುವುದು ಹೇಗೆ, ಕಥೆಯಲ್ಲಿನ ಕ್ರಿಯಾಶೀಲ ಅಂಶಗಳು, ಅದರಲ್ಲಿನ ಬರಹ, ಚಿತ್ರಗಳು, ಧ್ವನಿ ಮತ್ತು ಚಿತ್ರಗಳು ಕೂಡ ಮುಖ್ಯವಾಗುತ್ತದೆ. ಖ್ಯಾತ ಬರಹಗಾರರಾದ ವಿಕ್ರಮ್ ಶ್ರೀಧರ್, ಶರೂನ್ ಸುನ್ನಿ, ಸೌರಭ ರಾವ್, ನಿಶಾ ಅಬ್ದುಲ್ಲಾ, ಅಂದಲೀಬ್ ವಾಜಿದ್, ಲಾವಣ್ಯ ಪ್ರಸಾದ್ ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಮಕ್ಕಳ ಕಥೆ ಬರೆಯುವ ಉತ್ಸವ ಸರ್ಜಾಪುರ ರಸ್ತೆಯ ಜಿಇಎಆರ್ ಫೌಂಡೇಶನ್ ನಲ್ಲಿ ನವೆಂಬರ್18 ಹಾಗೂ 19 ರಂದು ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ2.30ರವರೆಗೆ ನಡೆಯಲಿದೆ.












Click it and Unblock the Notifications