Get Updates
Get notified of breaking news, exclusive insights, and must-see stories!

GBA: ಬೆಂಗಳೂರಲ್ಲಿ 1,19,000 ಮನೆಗಳ ಸಮೀಕ್ಷೆ, 05 ಪಾಲಿಕೆವಾರು ಅಂಕಿ-ಅಂಶ ಇಲ್ಲಿದೆ

ಬೆಂಗಳೂರು, ಅಕ್ಟೋಬರ್ 06: ಕರ್ನಾಟಕ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇತ್ತೀಚೆಗೆ ಆರಂಭವಾಯಿತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(GBA) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಅಧಿಕಾರಿಗಳು ಈವರೆಗೆ 1.19 ಲಕ್ಷ ಮನೆಗಳನ್ನು ಸಮೀಕ್ಷೆ ನಡೆಸಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.

ಭಾನುವಾರ 5 ನಗರ ಪಾಲಿಕೆಗಳಲ್ಲಿ ಸಂಜೆ 07.00 ಗಂಟೆಯವರೆಗೆ 95,024 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾದಾರರು ನಿಮ್ಮ ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಹಕರಿಸಲು ಮತ್ತು ಭಾಗವಹಿಸಲು ಎಲ್ಲಾ ನಾಗರಿಕರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೋರಿದೆ.

Social and Educational Survey Done 1 19 Lakh Homes under GBA in Bengaluru

ಇಷ್ಟು ಮಾತ್ರವಲ್ಲದೇ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹ ಸ್ವತಃ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಜಿಬಿಎ ವೆಬ್ ಸೈಟ್ ಲಿಂಕ್ https://kscbcselfdeclaration.karnataka.gov.in/ ನೀಡಿದೆ. ಅದರ ಮೂಲಕವು ನೀವು ಸ್ವಯಂ ಪ್ರೇರಿತವಾಗಿ ಈ ಸಮೀಕ್ಷೆಯ ಭಾಗವಾಗಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದಾದ್ಯಂತ ಆರಂಭವಾದ ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿ ಸರ್ಕಾರದಿಂದ ನಿಯೋಜನೆಗೊಂಡ ಅಧಿಕಾರಿಗಳು ಸೂಕ್ತ ತರಬೇತಿ ಸಹಿತ ಮಸೀಕ್ಷೆ ಆರಂಭಿಸಿದ್ದಾರೆ. ಈರವರೆಗೆ 1,19,000 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಉಳಿದಂತೆ ಸಮೀಕ್ಷೆ ಕಾರ್ಯ ಮುಂದುವರಿದಿದೆ. ಇದರಲ್ಲಿ ಸಮೀಕ್ಷೆ ನಡೆದ ಪಾಲಿಕೆ ವಾರು ಮನೆಗಲ ಮಾಹಿತಿ ಇಲ್ಲಿದೆ.

ಪಾಲಿಕೆವಾರು ಮನೆಗಳ ಸರ್ವೇ ಮಾಹಿತಿ

1. ಕೇಂದ್ರ ನಗರ ಪಾಲಿಕೆ : 14,288 ಮನೆ ನಿವಾಸಿಗಳ ಸರ್ವೇ ಆಗಿದೆ.

2. ಪೂರ್ವ ನಗರ ಪಾಲಿಕೆ : 17,269 ಮನೆಗಳ ಭೇಟಿ

3. ಉತ್ತರ ನಗರ ಪಾಲಿಕೆ : 31,363 ಮನೆಗಳಿಗೆ ಅಧಿಕಾರಿಗಳ ಭೇಟಿ

4. ದಕ್ಷಿಣ ನಗರ ಪಾಲಿಕೆ : 16,445 ಮನೆ ನಿವಾಸಿಗಳ ಸರ್ವೇ ಆಗಿದೆ.

5. ಪಶ್ಚಿಮ ನಗರ ಪಾಲಿಕೆ : 40,112 ಮನೆ ನಿವಾಸಿಗಳ ಸರ್ವೇ ಆಗಿದೆ.

ಒಟ್ಟು ಮನೆಗಳು: 1,19,477 ಮನೆಗಳ ಸರ್ವೆ ಮುಗಿದಿದೆ.

ಪ್ರತಿ ಮನೆ ಮನೆಗಳಿಗೂ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ನಾಗರಿಕರು ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿ ಅಗತ್ಯ ದಾಖಲೆ ಇಟ್ಟುಕೊಂಡು ಸಮೀಕ್ಷೆಗೆ ಸಹಕರಿಸಬೇಕು ಎಂದು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಕೋರಿದ್ದಾರೆ.

ಮತ್ತೊಂದೆಡೆ ರಾಜ್ಯ ಸರ್ಕಾರದ ಈ ಸಮೀಕ್ಷೆ ಕುರಿತು ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ. ಅಧಿಕಾರಿಗಳಿಗೆ ತರಬೇತಿ ಇಲ್ಲ ಎಂದು ಆರಂಭದಲ್ಲಿ ದೂರಿದ್ದರು. ಈ ಸಮೀಕ್ಷೆ ಬಸವತತ್ವ ವಿರುದ್ಧವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೂರಿದರು. ಅಲ್ಲದೇ ಸಮೀಕ್ಷೆ ವೇಳೆ ಕೇಳುವ ಪ್ರಶ್ನೆಗಳು ಇಡಿ ಪ್ರಶ್ನೆಗಳಂತಿವೆ ಅಂತಲೂ ಆರೋಪಿಸಲಾಗಿದೆ. ಬಿಜೆಪಿ ಆರ್.ಅಶೋಕ್, ತೇಜಸ್ವಿ ಸೂರ್ಯ ಅವರು ಸೇರಿದಂತೆ ಕೆಲವರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಂತೆ ಕರೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+