Get Updates
Get notified of breaking news, exclusive insights, and must-see stories!

Karnataka Rails: ವಂದೇ ಭಾರತ್ ಸೇರಿ 06 ರೈಲುಗಳ ಮಾರ್ಗ ಬದಲಾವಣೆ: ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು, ನವೆಂಬರ್ 13: ಬೆಳ್ಳಂದೂರು ರಸ್ತೆ-ಕರ್ಮೇಲಾರಂ ರೈಲು ವಿಭಾಗದಲ್ಲಿ ಸುರಕ್ಷತಾ ಸಿಗ್ನಲಿಂಗ್, ಪಾಯಿಂಟ್ಸ್ ಹಾಗೂ ತಾತ್ಕಾಲಿಕ ಟ್ರ್ಯಾಕ್ ಪರಸ್ಪರ ಸಂಪರ್ಕ ಬದಲಾವಣೆ ಹಾಗೂ ಇತರ ಕಾಮಗಾರಿಗಳು ಕೈಗೊಳ್ಳಲಾಗಿದೆ. ಹೊಸ ಹುಸ್ಕೂರು ರೈಲು ನಿಲ್ದಾಣದಲ್ಲಿ ತುರ್ತು ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 06 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಪರಿಷ್ಕರಣೆ ಇದೇ ನವೆಂಬರ್ 16ರಂದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗ ಬದಲಾದ ರೈಲುಗಳ ಪಟ್ಟಿ, ವಿವರ

* SMVT ಬೆಂಗಳೂರು-ಎರ್ನಾಕುಲಂ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12677) ನವೆಂಬರ್ 16ರಿಂದ SMVT ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಕರ್ಮೇಲಾರಂ, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡದೇ ಸಂಚರಿಸಲಿದೆ ಎಂಬುದನ್ನು ಪ್ರಯಾಣಿಕರು ಗಮನಿಸಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.

Six Trains Diverted Due to Bellandur Carmelaram Track Doubling Work Know List

* SMVT ಬೆಂಗಳೂರು-ಕರೈಕಲ್ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16529) ಈ ರೈಲು SMVT ಬೆಂಗಳೂರು, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಜೋಲಾರ್‌ಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸೇವೆ ನೀಡಲಿದ್ದು, ಬೆಳಂದೂರು ರಸ್ತೆ ಹಾಗೂ ಓಮಲೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲ್ಲ.

* ಯಶವಂತಪುರ-ಸೇಲಂ ಡೈಲಿ ಎಕ್ಸ್‌ಪ್ರೆಸ್ ರೈಲು (16211) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಬನಸವಾಡಿ, SMVT ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್‌ಪೇಟೆ ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬೆಳಂದೂರು ರಸ್ತೆ ಮತ್ತು ಓಮಲೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

* ಬೆಂಗಳೂರು ಕಂಟೋನ್ಮೆಂಟ್ -ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20641) ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚಾರ ಸೇವೆ ನೀಡಲಿದೆ. ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ರೈಲು ನಿಲ್ಲುವುದಿಲ್ಲ.

* ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ರೈಲು (20642) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಧರ್ಮಪುರಿ ನಿಲ್ದಾಣದಲ್ಲಿ ನಿಲುಗಡೆ ನೀಡದೇ ಸೇಲಂ, ತಿರುಪತ್ತೂರು, ಜೋಲಾರ್‌ಪೇಟೆ ಎ.ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಬೆಂಗಳೂರು ಕಂಟೋನ್ಮೆಂಟ್ ಮೂಲಕ ಸಾಗಲಿದೆ.

* ಕೊಯಮತ್ತೂರು-ಲೋಕಮಾನ್ಯ ತಿಲಕ್ ಡೈಲಿ ಎಕ್ಸ್‌ಪ್ರೆಸ್ ರೈಲು (11014) ಸೇಲಂ, ತಿರುಪತ್ತೂರು, ಜೋಲಾರ್‌ಪೇಟೆ ಎ ಕೇಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಬೆಂಗಳೂರು ಕಂಟೋನ್ಮೆಂಟ್ ಮಾರ್ಗವಾಗಿ ಸಾಗಲಿದ್ದು, ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಈ ಕಾಮಗಾರಿಯ ಅವಧಿಯಲ್ಲಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://www.enquiry.indianrail.gov.in ಗೆ ಅಥವಾ NTES ಆಪ್ ಮೂಲಕ ನವೀಕೃತ ಮಾಹಿತಿ ಪರಿಶೀಲಿಸಬಹುದು. ಈ ಬದಲಾವಣೆಗಳಿಂದ ಪ್ರಯಾಣಿಕರು ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿಸುವ ಅಗತ್ಯವಿದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನ ಹೊಸ ವೇಳಾಪಟ್ಟಿ ಹಾಗೂ ಮಾರ್ಗ ವಿವರಗಳನ್ನು ಖಚಿತಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+