ಉಚಿತ ಪ್ರಯಾಣ: ಸಂತಸದಲ್ಲಿ ಮಹಿಳೆಯರು, ಸ್ಮಾರ್ಟ್ ಕಾರ್ಡ್, ಐಡಿ ಕಾರ್ಡ್ ಬೇಡ ಎಂಬ ಒತ್ತಾಯ

ಬೆಂಗಳೂರು, ಜೂನ್. 12: ಬಹು ನಿರೀಕ್ಷಿತ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಸಾಮಾನ್ಯ ಬಸ್‌ಗಳಲ್ಲಿ ಭಾನುವಾರ ಉಚಿತ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಮುಖದಲ್ಲಿ ಸಂತಸ ಕಂಡು ಬರುತ್ತಿತ್ತು. ಹಲವು ಮಹಿಳೆಯರು ಸಿದ್ದರಾಮಯ್ಯ ಸರ್ಕಾರಕ್ಕೆ ವಂದನೆ ಸಲ್ಲಿಸಿದ್ದಾರೆ. ಬಸ್‌ನಲ್ಲಿ ಹತ್ತುವ ಮೊದಲು ಬಸ್‌ಗೆ ನಮನ ಸಲ್ಲಿಸಿದ ಚಿತ್ರ ಎಲ್ಲರನ್ನು ಬೆರಗುಗೊಳಿಸಿದೆ.

ಶಕ್ತಿ ಯೋಜನೆ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮ. ಸಮಾಜದಲ್ಲಿ ಅರ್ಧದಷ್ಟಿರುವ ಮಹಿಳೆಯರು ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರು ಅವಕಾಶಗಳಿಂದ ಹಾಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಅಂಥವರಿಗೆ ನಮ್ಮ ಈ ಯೋಜನೆ ಬಲ ತುಂಬಲಿದೆ ಎಂದು ಸರ್ಕಾರ ಹೇಳಿದೆ.

Shakti scheme: Free travel brought happiness to faces of women passengers

ದಿ ಹಿಂದೂ ಜೊತೆಗೆ ಮಾತಾಡಿರುವ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಶಂಕರ್, "ಹಲವು ಜನರು ಇದನ್ನು ಬಿಟ್ಟಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಒಪ್ಪುವುದಿಲ್ಲ. ಈ ಯೋಜನೆಯು ಮಹಿಳೆಗೆ ಸಾಕಷ್ಟು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಅದು ಅವರ ಕುಟುಂಬಕ್ಕೂ ಸಹಾಯ ಮಾಡುತ್ತದೆ. ಈ ಬಸ್ಸಿನಲ್ಲಿ ಇಂದು ಬಹಳಷ್ಟು ನಗುತ್ತಿರುವ ಮುಖಗಳನ್ನು ನೋಡಿ ನನಗೆ ಸಂತೋಷವಾಗಿದೆ. ಆತ್ಮವಿಶ್ವಾಸ ಮತ್ತು ಸ್ವತಂತ್ರ ಜೀವನವನ್ನು ನಡೆಸಲು ಮಹಿಳೆಗೆ ಹಣವನ್ನು ಉಳಿಸುವುದು ಬಹಳ ಮುಖ್ಯ" ಎಂದು ರಾವು ನೋಡಿದ ಅನುಭವ ಹಂಚಿಕೊಂಡಿದ್ದಾರೆ.

"ಪ್ರತಿ ಸೆಮಿಸ್ಟರ್‌ಗೆ ವಿದ್ಯಾರ್ಥಿ ಬಸ್ ಪಾಸ್‌ಗೆ 1,500 ರೂಪಾಯಿ ವೆಚ್ಚವಾಗುತ್ತದೆ. ಈಗ ಇದನ್ನು ಹೆಣ್ಣುಮಕ್ಕಳಿಗೆ ಉಚಿತವಾಗಿ ನೀಡಿರುವುದರಿಂದ, ಪ್ರತಿ ವರ್ಷ 3,000 ರೂಪಾಯಿ ಉಳಿತಾಯವಾಗುತ್ತದೆ. ನಾನು ಪುಸ್ತಕಗಳನ್ನು ಖರೀದಿಸಲು ಬಳಸಬಹುದು ಅಥವಾ ಸಂಗೀತ ಅಥವಾ ಹೊಸದನ್ನು ಕಲಿಯಲು ಖರ್ಚು ಮಾಡಬಹುದು. ಇದರಿಂದ ತನ್ನ ಪೋಷಕರ ಹೊರೆಯೂ ಕಡಿಮೆಯಾಗುತ್ತದೆ " ಎಂದು ಮಲ್ಲೇಶ್ವರಂನ ವಿದ್ಯಾರ್ಥಿನಿ ಪಲ್ಲವಿ ರಾವ್ ಹೇಳಿದ್ದಾರೆ.

ಇದೇ ವೇಳೆ ಭಾನುವಾರ ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಿ ಮಹಿಳಾ ಕಂಡಕ್ಟರ್‌ಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮೆಜೆಸ್ಟಿಕ್‌ನ ಬಿಎಂಟಿಸಿಯಲ್ಲಿ ಕಂಡಕ್ಟರ್‌ ಆಗಿರುವ ಕೆ.ರಾಧಾ ಅವರು , "ಇಂದು ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಿದ್ದು ನನಗೆ ಸಂತಸದ ಕ್ಷಣ. ನನ್ನ 25 ವರ್ಷಗಳ ವೃತ್ತಿ ಜೀವನದಲ್ಲಿ ಇಂದು ಸ್ಮರಣೀಯ ದಿನ. ಈ ಯೋಜನೆಯು ಬಹಳಷ್ಟು ಮಹಿಳೆಯರಿಗೆ ಮತ್ತು ವಿಶೇಷವಾಗಿ ಬಡ ಹಿನ್ನೆಲೆಯವರಿಗೆ ಪ್ರಯೋಜನವನ್ನು ನೀಡುತ್ತದೆ. ಇಂದು ನಾನು ಮಹಿಳೆಯರಿಗಾಗಿ ಸುಮಾರು 125 ಟಿಕೆಟ್‌ಗಳನ್ನು ನೀಡಿದ್ದೇನೆ. ಮೊದಲ ದಿನ ಹೆಚ್ಚಿನ ಮಹಿಳೆಯರು ಬರುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ ಅನೇಕರು ಬಂದಿದ್ದರು, ಅದರ ಬಗ್ಗೆ ನನಗೆ ಸಂತೋಷವಿದೆ" ಎಂದಿದ್ದಾರೆ.

ಆದರೆ, ನಗರದಲ್ಲಿ ಅನೇಕ ಬಸ್ ಟ್ರಿಪ್‌ಗಳಲ್ಲಿ ಗೊಂದಲ ಮುಂದುವರೆದಿದೆ. ಏಕೆಂದರೆ ಅನೇಕ ಮಹಿಳೆಯರು ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿಯನ್ನು ತೋರಿಸಬೇಕು. ರಾಜ್ಯದಲ್ಲಿ ನಿವಾಸ ಹೊಂದಿರುವವರು ಮಾತ್ರ ಅರ್ಹರು ಎಂಬ ನಿಯಮದ ಬಗ್ಗೆ ತಿಳಿದಿರಲಿಲ್ಲ. ಇದರ ಜೊತೆಗೆ ಮಹಿಳೆಯರಿಗೆ ಶೂನ್ಯ ಟಿಕೆಟ್ ಮತ್ತು ಇತರ ಪ್ರಯಾಣಿಕರಿಗೆ ಸಾಮಾನ್ಯ ಟಿಕೆಟ್ ನೀಡುವ ಬಗ್ಗೆ ಅನೇಕ ಕಂಡಕ್ಟರ್‌ಗಳು ಗೊಂದಲಕ್ಕೊಳಗಾಗಿದ್ದರು .

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (BBPV) ಸದಸ್ಯರಾದ ಶಾಹೀನ್ ಷಾ ಅವರು ಮಾತನಾಡಿ, "ನನ್ನ ಮೊದಲ ಶಕ್ತಿ ಸವಾರಿ ಶಿವಾಜಿನಗರಕ್ಕೆ ಹೋಗಿತ್ತು. ಟಿಕೆಟ್ ಕೊಡುವುದನ್ನು ಮುಗಿಸಲು ಬಸ್ಸು ಮಧ್ಯದಲ್ಲಿ ನಿಂತಿತು. ಕಂಡಕ್ಟರ್ ಗುರುತಿನ ಚೀಟಿಗಳನ್ನು ಪರಿಶೀಲಿಸಬೇಕು, ಸ್ಥಳವನ್ನು ಕೇಳಬೇಕು ಮತ್ತು ಟಿಕೆಟ್‌ಗಳನ್ನು ನೀಡಬೇಕು. ಉಚಿತ ಮತ್ತು ಸಾಮಾನ್ಯ ಟಿಕೆಟ್‌ಗಳ ಅಗತ್ಯವಿರುವ ಮಿಶ್ರ ಗುಂಪಿಗೆ ಟಿಕೆಟ್‌ಗಳನ್ನು ನೀಡುವಲ್ಲಿ ಗೊಂದಲವಿದೆ" ಎಂದಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಪೀಕ್ ಅಥವಾ ಕೆಲಸದ ಸಮಯದಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದಿರುವ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ, ಸ್ಮಾರ್ಟ್ ಕಾರ್ಡ್ ಮತ್ತು ವಾಸಸ್ಥಳದ ಅವಶ್ಯಕತೆಗಳನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ಶಕ್ತಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಅಭಿನಂದಿಸುತ್ತೇನೆ. ಹೆಂಗಸರ ಸಂತೋಷದ ಮುಖ ನೋಡುವುದೇ ಚಂದ. ಆದಾಗ್ಯೂ ಸ್ಮಾರ್ಟ್ ಕಾರ್ಡ್/ಐಡಿ ಕಾರ್ಡ್‌ನ ಅಗತ್ಯವನ್ನು ಕೈಬಿಡುವಂತೆ ನಾವು ಮತ್ತೊಮ್ಮೆ ಸರ್ಕಾರವನ್ನು ವಿನಂತಿಸುತ್ತೇವೆ. ಇಂದು ಗುರುತಿನ ಚೀಟಿ ಇಲ್ಲದ ಕಾರಣ ಒಬ್ಬ ವೃದ್ಧೆ ಟಿಕೆಟ್ ಖರೀದಿಸಬೇಕಾಯಿತು. ಐಡಿ ಕಾರ್ಡ್ ಮತ್ತು ಸ್ಮಾರ್ಟ್ ಕಾರ್ಡ್‌ ಬಿಟ್ಟರೆ ಹೆಚ್ಚಿನ ಮಹಿಳೆಯರಿಗೆ ಯೋಜನೆ ಸಿಗಲಿದೆ" ಎಂದು ಬಿಬಿಪಿವಿ ಸದಸ್ಯ ವಿನಯ್ ಶ್ರೀನಿವಾಸ ಹೇಳಿದ್ದಾರೆ.

ಅನೇಕ ವಲಸೆ ಕಾರ್ಮಿಕರು ಮತ್ತು ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಇತರ ಉದ್ದೇಶಗಳಿಗಾಗಿ ರಾಜ್ಯಕ್ಕೆ ಭೇಟಿ ನೀಡುವ ಜನರು ಯೋಜನೆಯ ಪ್ರಯೋಜನವನ್ನು ಕಳೆದುಕೊಳ್ಳುವುದರಿಂದ ವಾಸಸ್ಥಳದ ಪ್ರಮಾಣ ಪತ್ರವನ್ನು ತೆಗೆದುಹಾಕಲು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ಈ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+