ಬೆಂಗಳೂರಲ್ಲಿ ಓಲಾ, ಉಬರ್ ಚಾಲಕರಿಗೆ ಬ್ಯಾಂಕ್ ಸಾಲ ಸ್ಥಗಿತ
ಬೆಂಗಳೂರಿನಲ್ಲಿ ವಾಹನ ಸಾಲ ತೆಗೆದು ಸುಸ್ತಿದಾರರಾಗುತ್ತಿರುವ ಓಲಾ ಮತ್ತು ಉಬರ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಲಕರಿಗೆ ಸಾಲ ನೀಡುವುದನ್ನು ನಿಲ್ಲಿಸಿದೆ.
ಬೆಂಗಳೂರು, ಏಪ್ರಿಲ್ 25: ನೀವು ಓಲಾ, ಉಬರ್ ಚಾಲಕರಾ? ನಿಮಗೆ ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಹನ ಸಾಲ ಸಿಗುವುದಿಲ್ಲ.
ವಾಹನ ಸಾಲ ತೆಗೆದು ಸುಸ್ತಿದಾರರಾಗುತ್ತಿರುವ ಓಲಾ ಮತ್ತು ಉಬರ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬ್ಯಾಂಕ್ ಈ ತೀರ್ಮಾನಕ್ಕೆ ಬಂದಿದೆ. ಎಕಾನಮಿಕ್ ಟೈಮ್ಸ್ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ವಾಹನ ಸಾಲ ಪಡೆದ ಐದು ಜನರಲ್ಲಿ ಒಬ್ಬರು ಚಾಲಕರು ಸುಸ್ತಿದಾರರಾಗಿದ್ದಾರೆ.[ಓಲಾ, ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!]

"ಬೆಂಗಳೂರಿನಲ್ಲಿ ಸುಸ್ತಿದಾರರಾದ ಸಾಲ ಮೊತ್ತ 60 ಕೋಟಿ ತಲುಪಿದೆ. ಆದರೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಓಲಾ ವಾಹನಗಳಿಗೆ ಸಾಲ ನೀಡಲಾಗುತ್ತಿದೆ. ಅಲ್ಲಿನ್ನೂ ಸುಸ್ತಿದಾರರ ಸಂಖ್ಯೆ ಶೇಕಡಾ 7 ಅಷ್ಟೇ ಇದೆ," ಎಂದು ಎಸ್.ಬಿ.ಐ ಸಾಲ ವಿಭಾಗದ ಅಧಿಕಾರಿ ಹೇಳಿಕೆ ನೀಡಿದ್ದಾರೆ.
ಚಾಲಕರ ಇನ್ಸೆಂಟಿವ್ ಗಳನ್ನು ಕಂಪೆನಿಗಳು ಕಟ್ ಮಾಡಿದ ನಂತರ ನಗರದ ಚಾಲಕರ ಆದಾಯ ಕುಸಿತವಾಗಿದೆ. ಉಬರ್ ನಿಂದ ಲೀಸಿಗೆ ಪಡೆದಿದ್ದ ಕಾರುಗಳನ್ನು ಹಲವರು ಮರಳಿಸಿದ್ದಾರೆ ಕೂಡಾ. ಇನ್ಸೆಂಟಿವ್ ಗಳನ್ನು ಕಡಿತ ಮಾಡಿದ ನಂತರವೇ ಸುಸ್ತಿದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.[ಓಲಾ ಸಂಸ್ಥೆಯಲ್ಲಿ ರತನ್ ಟಾಟಾ 650 ಕೋಟಿ ರು. ಹೂಡಿಕೆ?]
ಚೆನ್ನೈ, ಬೆಂಗಳೂರು, ಹೈದರಾಬಾದ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಚಾಲಕರು ಸುಸ್ತಿದಾರರಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಈ ಮೂರೂ ನಗರಗಳಲ್ಲಿ ಅತೀ ಹೆಚ್ಚಿನ ಚಾಲಕರು ಈ ಕಂಪೆನಿಗಳ ಜತೆ ಒಪ್ಪಂಧ ಮಾಡಿಕೊಂಡಿದ್ದಾರೆ.
ಇನ್ನು ಓಲಾದ ಚಾಲಕರು ಉಬರ್ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುಸ್ತಿದಾರರಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ದೇಶದಾದ್ಯಂತ 1300 ಉಬರ್ ಚಾಲಕರಿಗೆ ಸಾಲ ನೀಡಲಾಗಿದೆ. ಇವುಗಳ ಮೊತ್ತ 35 ಕೋಟಿ. ಇದರಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಸುಸ್ತಿದಾರರಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈ ಸಂಖ್ಯೆ ಅಂದಾಜು ಶೇಕಡಾ 20ರಷ್ಟು ತಲುಪಿದೆ.
ಇನ್ನು ಕೆಲವು ಪ್ರಕರಣಗಳಲ್ಲಿ ಚಾಲಕರು ಸಾಲ ಕಟ್ಟದೆಯೂ ಕಾರು ಓಡಿಸುತ್ತಲೇ ಇರುತ್ತಾರೆ. ಇಂತಹ ಚಾಲಕರನ್ನು ಬೆನ್ನಟ್ಟುವುದೂ ಬ್ಯಾಂಕುಗಳಿಗೆ ಕಷ್ಟಕರವಾಗಿದೆ. ಹೀಗಾಗಿ ಬ್ಯಾಂಕುಗಳು ಓಲಾ ಮತ್ತು ಉಬರ್ ಚಾಲಕರಿಗೆ ಸಾಲ ನೀಡುವುದನ್ನು ನಿಲ್ಲಿಸಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications