ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ: ಬಿಂದುರಾಣಿಗೆ ಸೀನಿಯರ್ ಕೋಚ್ ಪತ್ನಿ ಗ್ರೌಂಡ್ನಲ್ಲೇ ತರಾಟೆ
ಬೆಂಗಳೂರು, ಜುಲೈ 03: ಏಷ್ಯನ್ ಮೆಡಲಿಸ್ಟ್ ಬಿಂದು ರಾಣಿ ಅವರ ಮೇಲೆ ಸೀನಿಯರ್ ಕೋಚ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇಂದು(ಜುಲೈ 03)ರ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಸೀನಿಯರ್ ಕೋಚ್ ಯತೀಶ್ ಎನ್ನುವವರ ಪತ್ನಿ ಕೋಚ್ ಶ್ವೇತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಂದು ರಾಣಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕಂಠೀರವ ಸ್ಟೇಡಿಯಂನಲ್ಲಿ ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಶೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ದೊಡ್ಡ ಸೆಲಬ್ರೆಟಿಗಳು ಭಾಗಿಯಾಗಿದ್ದರು. ಜೊತೆಗೆ ಬಿಂದು ರಾಣಿಗೂ ಸಹ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಬಿಂದು ರಾಣಿ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ಕೊಟ್ಟು ಅವಕಾಶ ಗಿಟ್ಟಿಸಿರುವುದಾಗಿ ನಿಂದಿಸಿ ಸೀನಿಯರ್ ಕೋಚ್ ಯತೀಶ್ ಪತ್ನಿ ಆರೋಪಿಸಿದ್ದಾರೆ.

ಸೀನಿಯರ್ ಕೋಚ್ ಯತೀಶ್ ಪತ್ನಿ ಬಿಂದು ರಾಣಿ ಅವರನ್ನು ನಿಂದಿಸಿ ಚಪ್ಪಲಿ ತೋರಿಸಿರುವ ವಿಡಿಯೋ ಸಾಮಾಜಿಕ ಜಾಲ ಎಲ್ಲೆಡೆ ವೈರಲ್ ಆಗುತ್ತಿದೆ. ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಿಂದು ರಾಣಿ ಬಂದಾಗ ಶ್ವೇತಾ ಏಕವಚನದಲ್ಲಿ ಮನಸೋಯಿಚ್ಛೆ ನಿಂದಿಸಿ ಜೋರಾಗಿ ಕೂಗಿ ವಾಗ್ದಾಳಿ ನಡೆಸಿದ್ದಾರೆ.
ಏನ್ ಮಾಡ್ತೀಯಾ? ನನಗೆ ಬೆದರಿಸ್ತಿಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬಂದಿದ್ದೀನಿ ಸ್ಟೇಡಿಯಂಗೆ ಏನ್ ಮಾಡ್ತೀಯಾ ಹೇಳಲೇ? ಯಾವ ಫ್ಲಾಟ್ ಫಾರಂನಲ್ಲಿ ಪ್ರಶ್ನೆ ಕೇಳಿದೀನಿ. ಅದೇ ಫ್ಲಾಟ್ ಫಾರಂನಲ್ಲಿ ಉತ್ತರ ಕೊಡಬೇಕು. ದೊಡ್ಡವರು ಇನ್ವಾಲ್ವ್ ಇದಾರಾ ? ಎಂದು ಶ್ವೇತಾ ಅವಾಜ್ ಹಾಕಿದ್ದಾರೆ.
ಏಯ್.. ಹೇಳೇ...? ಏನೇ ನಿಂದು ಫಾರ್ಪಾಮೆನ್ಸ್? ನಿಜ ಹೇಳು. ಸುಳ್ ಯಾಕೆ ಹೇಳ್ತಿದಿಯಾ ಎಲ್ಲರೂ ಕೇಳಲಿ. ಯಾಕೆ ಬಾಯಿ ಇಲ್ವಾ? ಎಲ್ಲಿ ಹೋಗ್ಬೇಕೋ ಅಲ್ಲಿಗೇ ಹೋಗುತ್ತೇವೆ. ಯಾಕೆ ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ? ನಿನಗೆ ಇಲ್ಲಿ ನಿಂತುಕೊಳ್ಳುವ ಯೋಗ್ಯತೆ ಏನು? ನಿನ್ನ ಸಾಧನೆ ಏನು? ನೀನು ಸೀನಿಯರ್ಗಳಿಗೆ ಮರ್ಯಾದೆ ಕೊಟ್ಟು ಉತ್ತರ ಕೊಡುತ್ತಿದ್ದೀಯಾ? ನೀನು ನಿಜವಾದ ಸಾಧಕಿ ಆಗಿದ್ರೆ ಕಂಠೀರವ ಕೋಚ್ ಗ್ರೂಪ್ ಅಲ್ಲಿ ಉತ್ತರ ಕೊಡ್ತಿದ್ದೆ ಎಂದು ಎಂದು ಜೋರಾಗಿ ಕೂಗಾಡಿದ್ದಾರೆ.

ನೀನ್ಯಾಕೆ ರಾತ್ರಿ 10 ಗಂಟೆಗೆ ಫೋನ್ ಮಾಡಿದೆ. ಸೋತವಳು ಕೇಳಿದ್ದ ಕಡೆ ಉತ್ತರ ಕೊಡಬೇಕು. ವಂಚಕಿ ಈಕೆ. ಪ್ರಶ್ನೆ ಕೇಳಿದ್ದವರಿಗೆ ಉತ್ತರ ಕೊಡಬೇಕು. ಗಂಡ, ಹೆಂಡ್ತಿಗೆ ವಾಯ್ಸ್ ಇಲ್ಲವಾ? ಫೋನ್ ಮಾಡಿ ಯಾಕೆ ಕೇಳ್ತೀರಾ ಎಂದು ಮೈದಾನದಲ್ಲೇ ನಿಂತು ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಯ ದೃಶ್ಯ ಎಲ್ಲಡೆ ವೈರಲ್ ಆಗುತ್ತಿದ್ದು, ಅಸೋಸಿಯೇಷನ್ಗೆ ದೂರು ನೀಡಲು ಬಿಂದು ರಾಣಿ ಮುಂದಾಗಿದ್ದಾರೆ ಎನ್ನಲಾಗಿದೆ. ಸಂಪಗಿರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಕುರಿತು ಬಿಂದುರಾಣಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ











Click it and Unblock the Notifications