62ನೇ ವಿಶ್ವದಾಖಲೆ ಬರೆದ ನಿವೃತ್ತ ವಿಜ್ಞಾನಿ ಡಾ. ರಮೇಶ್ ಬಾಬು
ಬೆಂಗಳೂರು, ಏಪ್ರಿಲ್ 18:ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಎಸ್. ರಮೇಶ್ ಬಾಬು ಅವರು ಈವರೆಗೆ 69 ವಿಶ್ವ ದಾಖಲೆಯನ್ನು ಮಾಡಿದ್ದು, ಇದೀಗ ಕಿಬ್ಬೊಟ್ಟೆಯ ಪುಷ್ ಅಪ್ ಗಳನ್ನು ಸತತ ಒಂದು ಗಂಟೆಗಳ ಕಾಲ ಮಾಡುವ ಮೂಲಕ ತಮ್ಮ 62ನೇ ವಿಶ್ವದಾಖಲೆಯನ್ನು ಸ್ಥಾಪಿಸಿದ್ದಾರೆ.
ಬೆಂಗಳೂರಿನ ಪ್ರೊ. ಸತೀಶ್ ಧವನ್ ಪಾರ್ಕ್ ನಲ್ಲಿ ಏಪ್ರಿಲ್ 14ರಂದು ಬೆಳಗ್ಗೆ 9 ಗಂಟೆಯಿಂದ ಸತತ ಒಂದು ಗಂಟೆಗಳ ಕಾಲ ಪುಷ್ ಅಪ್ ಗಳನ್ನು ತೆರೆದ ಜಿಮ್ ನಲ್ಲಿ ಮಾಡುವ ಮೂಲಕ ತಮ್ಮ ವಿಕ್ರಮವನ್ನು ಸಾಧಿಸಿದ್ದಾರೆ.
ಇತ್ತೀಚೆಗಷ್ಟೇ ಹೈವೇ ಕಾರ್ ಡ್ರೈವಿಂಗ್ ನ ಸೋಲೋ ಮ್ಯಾರಥಾನ್ ನ ಹಾಗೂ ಅತಿ ಎತ್ತರದ ಪಾರ್ವತಿ ಜೆಡ್ ಸಸಿ ಬೆಳೆಸುವುದು ಹಾಗೂ ವಿಶ್ವದಲ್ಲೇ ಅತಿ ಎತ್ತರದ ಸಿಮರೋಬಾ ಮರಗಳನ್ನು ತಮ್ಮ ನಿವಾಸದ ಗಾರ್ಡನ್ ನಲ್ಲಿ ಬೆಳೆಸುವ ಮೂಲಕ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದರು. ತಮ್ಮ ಈ ನೂತನ ದಾಖಲೆಯನ್ನು ತಮ್ಮ ಪತ್ನಿ ಉಷಾ ಅವರ ಜನ್ಮ ದಿನ ಅಂಗವಾಗಿ ಪತ್ನಿಗೆ ಸಮರ್ಪಿಸಿದ್ದಾಗಿ ಅವರು ಪ್ರಕಟಿಸಿದ್ದಾರೆ.

ದಿನಕ್ಕೆ ಎರಡು ಬಾರಿ ಸತತ ಒಂದು ಸಾವಿರ ಕಿಬ್ಬೊಟ್ಟೆಯ ಪುಷ್ ಅಪ್ ಗಳನ್ನು ತೆಗೆಯುವ ಮೂಲಕ ತಾಲೀಮು ನಡೆಸಿದ್ದ ಅವರು ಇದೀಗ ಒಂದು ಗಂಟೆಗಳ ಕಾಲ ಸತತ ಕಿಬ್ಬೊಟ್ಟೆಯ ಪುಷ್ ಅಪ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪ್ರತಿ 38 ನಿಮಿಷ್ 28 ಸೆಕೆಂಡ್ ಗಳಿಗೆ 1ಸಾವಿರ ಪುಷ್ ಅಪ್ ಗಳನ್ನು ತೆಗೆಯುತ್ತಿದ್ದು ಡಾ. ರಮೇಶ್ ಬಾಬು ಅವರು ದಾಖಲೆ ವೇಳೆ ಸತತ ಒಂದು ಗಂಟೆಗಳ ಕಾಲ ಒಂದೂವರೆ ಸಾವಿರಕ್ಕೂ ಹೆಚ್ಚು ಪುಷ್ ಅಪ್ ಗಳನ್ನು ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications