'ಕಾಸು ಕೊಟ್ಟು ಕುಣಿಸುತ್ತೇವೆ' : ದರ್ಶನ್ ಅಭಿಮಾನಿಗಳಿಗೆ ಉಮಾಪತಿ ಖಡಕ್ ಉತ್ತರ
ಬೆಂಗಳೂರು, ಜೂನ್ 20: ನಟ ದರ್ಶನ್ ಹೆಸರು ಹೇಳಿಕೊಂಡು ನಿರ್ಮಾಪಕ ಉಮಾಪತಿ ಹೆಸರು ಮಾಡಿದ್ದಾರೆ ಎನ್ನುವ ದರ್ಶನ್ ಅಭಿಮಾನಿಗಳ ಆರೋಪಕ್ಕೆ ಉಮಾಪತಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ನಾನು ಅಂದು ನೋಡಿದ ದುಡ್ಡು, ದರ್ಶನ್ ಇದುವರೆಗೂ ನೋಡಿಲ್ಲ. ಅಷ್ಟರ ಮಟ್ಟಿಗೆ ದುಡ್ಡು ನೋಡಿಕೊಂಡು ಅಂತಹ ಕುಟುಂಬದಲ್ಲೇ ಹುಟ್ಟಿರುವುದು ನಾನು. ಇಲ್ಲಿರುವ ಜಾಗ ಒಂದೂವರೆ ಎಕರೆ ಇದೆ. ಹೆಚ್ಎಸ್ಆರ್ ಅಲ್ಲಿ ಒಂದು ಸ್ಕ್ವಾರ್ಫೀಟ್ ನೆಲವತೈದು ಸಾವಿರಕ್ಕೆ ಬೆಲೆ ಬಾಳುತ್ತದೆ. ಹಾಗಿದ್ರೆ ಒಂದೂವರೆ ಎಕರೆಗೆ ಎಷ್ಟು ಆಯ್ತು.. ನಮ್ಮ ಫ್ಯಾಮಿಲಿದು ಎಲ್ಲರಿಗೂ ಒಂದು ಎಕರೆ ಎರಡು ಎಕರೆ ಇದೆ ಅಂದರೆ ಲೆಕ್ಕಾ ಹಾಕಿ

ನಾವು ಅವರು ಹೆಸರು ಹೇಳಿಕೊಂಡು ಬದುವುದಲ್ಲ. ನಮ್ಮಿಂದ ಅವರು ಅನ್ನ ತಿನ್ನುತ್ತಿರುವುದು. ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೇನೆ. ಪುಕಸಟ್ಟೆ ಯಾರೂ ಕೆಲಸ ಮಾಡಿಲ್ಲ. ದುಡ್ಡು ಕೊಟ್ಟಿದ್ದಿನಿ ಆ್ಯಕ್ಟ್ ಮಾಡಿಸಿಕೊಂಡಿದ್ದೇನೆ. ದುಡ್ಡು ಕೊಟ್ಟಿದ್ದೀನಿ ಕುಣಿಸಿದ್ದೀನಿ. ಯಾವುದಕ್ಕೂ ಫ್ರೀ ಆಗಿ ಏನೂ ಮಾಡಿಸಿಕೊಂಡಿಲ್ಲ. ನನ್ನ ಮನೆ ಕಾರ್ಯಕ್ರಮಕ್ಕೂ ನಾನು ಯಾರನ್ನೂ ಕರೆಯಲ್ಲ.
ನಮ್ಮ ಮನೆಯಲ್ಲಿ ಕಾರ್ಯಕ್ರಮ ಆದರೆ ಯಾವೊಬ್ಬ ನಟನನ್ನು ನಾನು ಕರೆಯುವುದಿಲ್ಲ. ಆ ರೀತಿ ಏನಾದರೂ ಇದ್ದರೆ, ಚಿಕ್ಕಣ್ಣ ಮಾತ್ರ. ಯಾಕೆಂದರೆ ಚಿಕ್ಕಣ್ಣ ನನಗೆ ಎಷ್ಟೋ ಸಲ ಸ್ನೇಹಿತನಾಗಿ, ನನ್ನ ಸಹೋದರನಾಗಿ ನಿಂತಿರುವುದಕ್ಕೆ ಚಿಕ್ಕಣ್ಣನ ಮನೆ ಕಾರ್ಯಕ್ರಮಕ್ಕೆ ಕರೆಯುತ್ತೇನೆ ಬಿಟ್ಟರೆ, ಇನ್ನಇಇನ್ನು ಯಾರನ್ನೂ ಮನೆಗೆ ಕರೆಯುವುದಿಲ್ಲ.
ಇನ್ನು ಯಾರ್ಯಾರೋ ಬೊಗಳುತ್ತಾರೆ ಅಂತಾ ನಾವು ತಲೆ ಕೆಡಿಸಿಕೊಳ್ಳಲಾಗುತ್ತದೆಯೇ.. ಒಂದು ಅರ್ಥ ಮಾಡಿಕೊಳ್ಳಿ ನಾನು ಕೊಟ್ಟ ಇದೆಯಲ್ಲಾ,, ಹಾಗೂ ಒಂದು ಜಾಗಕ್ಕೆ ಅವರಿಗೆ ನಾನು ಕಾಂಪೌಂಡ್ ಹಾಕಿಸಿಕೊಟ್ಟೆ. ಅಷ್ಟಿದ್ದವರು ಫ್ಯಾನ್ ಅನ್ನೋರು ಹಾಕಿಸಬಹುದಿಲ್ಲ. ಇವರನ್ನು ಅಲ್ಲಿ ಕಾಲಿಡಲು ಬಿಡುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಹೋಗಿ ಹಾಕಿಸಿಕೊಟ್ಟೆ..ಹೋಗಲಿ ಈಗ ಫ್ಯಾನ್ಸ್ ಹೋಗಿ ಬಿಡಿಸಿಕೊಂಡು ಬರಬಹುದಲ್ಲ ಎಂದಿದ್ದಾರೆ.












Click it and Unblock the Notifications