ಬೆಂಗಳೂರಿಗೆ ಸಿಹಿ ಸುದ್ದಿ ಕೊಡಲಿದೆ ಕೇಂದ್ರ ಸರ್ಕಾರ?
ಬೆಂಗಳೂರು, ಮೇ 03 : ಬೆಂಗಳೂರು ನಗರದಲ್ಲಿ ಕೆಲವು ವಾರ್ಡ್ಗಳಲ್ಲಿ ಮಾತ್ರ ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ.
ಕರ್ನಾಟಕ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳನ್ನು ಕೆಂಪು ವಲಯ ಎಂದು ಗುರುತಿಸುವ ಬದಲು ಕೋವಿಡ್ - 19 ಪ್ರಕರಣಗಳಿಂದಾಗಿ ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಿರುವುದನ್ನು ಮಾತ್ರ ಈ ವ್ಯಾಪ್ತಿಗೆ ಸೇರಿಸಬೇಕು ಎಂದು ತೀರ್ಮಾನಿಸಿದೆ.
ಕೊರೊನಾ ರೆಡ್, ಆರೇಂಜ್ ಗ್ರೀನ್ ವಲಯ: ಸಂಪೂರ್ಣ ಪಟ್ಟಿ
ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಿದೆ. ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ, ಒಪ್ಪಿಗೆ ನೀಡಿದರೆ ಬೆಂಗಳೂರು ನಗರದಲ್ಲಿ ಕೆಲವು ಬಡಾವಣೆಗಳಿಗೆ ಲಾಕ್ ಡೌನ್ನಿಂದ ಹಲವು ವಿನಾಯಿತಿಗಳು ಸಿಗಲಿವೆ.
ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ
ಬಿಬಿಎಂಪಿ ಕೋವಿಡ್ - 19 ಪ್ರಕಗಳಿರುವ ವಾರ್ಡ್ಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಿದೆ. 198 ವಾರ್ಡ್ಗಳನ್ನು ಕೆಂಪು ವಲಯಕ್ಕೆ ಸೇರಿಸಿದರೆ ಆರ್ಥಿಕ ಚಟುವಟಿಕೆಗಳಿಗೆ ಅಡಚಣೆಯಾಗಲಿದೆ ಎಂಬುದು ಸರ್ಕಾರದ ವಾದ.
ವಿಡಿಯೋ; ಬೆಂಗಳೂರು ಅಪಾರ್ಟ್ಮೆಂಟ್ನಲ್ಲಿ ವೈದ್ಯೆಗೆ ಚಪ್ಪಾಳೆ ಸ್ವಾಗತ
ಬಿಬಿಎಂಪಿಯ ದಕ್ಷಿಣ, ಪಶ್ಚಿಮ, ಬೊಮ್ಮನಹಳ್ಳಿ, ಪೂರ್ವ, ಮಹದೇವಪುರ, ಆರ್. ಆರ್. ನಗರ ವ್ಯಾಪ್ತಿಯಲ್ಲಿ ಹಲವು ಪ್ರದೇಶಗಳು ಕಂಟೈನ್ಮೆಂಟ್ ವಲಯಗಳಾಗಿವೆ. ಇಲ್ಲಿ ಲಾಕ್ ಡೌನ್ ನಿಯಮದಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ.
ಮೇಯರ್ ಗೌತಮ್ ಕುಮಾರ್ ಜೈನ್ ನಗರದಲ್ಲಿನ ಕಂಟೈನ್ಮೆಂಟ್ ವಲಯಗಳು ಯಾವುವು?, ಎಲ್ಲಿಯ ತನಕ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಎಂಬ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.
#BBMPFightsCovid19
— M Goutham Kumar (@BBMP_MAYOR) May 2, 2020
The containment zones👇which were identified in view of #COVID19 positive cases to prevent the further spread of infection have returned to normal with immediate effect: pic.twitter.com/e0c8GHgPrw
ಕೇಂದ್ರ ಸರ್ಕಾರ ಈ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆಂಪು ವಲಯದಲ್ಲಿದೆ.