ಓಎಲ್ ನಾಗಭೂಷಣಸ್ವಾಮಿ ಅವರೊಂದಿಗೆ 'ಓದು ರಾಜಕಾರಣ'
ಬೆಂಗಳೂರು, ಜನವರಿ 26: ಸಾವಣ್ಣ ಪ್ರಕಾಶನವು ಜನವರಿ 28 ರಂದು ಓದು ರಾಜಕಾರಣ ಎನ್ನುವ ವಿಷಯ ಕುರಿತ ಸಂವಾದ ಕಾರ್ಯಕ್ರಮವನ್ನು ಬಸವನಗುಡಿಯ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಹಮ್ಮಿಕೊಂಡಿದೆ.
ಯಾರು ಯಾವ ಪುಸ್ತಕ ಓದುತ್ತಾರೆ. ಯಾಕೆ ಓದುತ್ತಾರೆ. ಯಾವುದನ್ನು ಓದುತ್ತಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಗುಟ್ಟಾಗಿ ಯಾವುದನ್ನು ಓದುತ್ತಾರೆ. ಹೇಗೆ ಓದುತ್ತಾರೆ. ಬರೆಯದೇ ಇರುವ ಸಾಲುಗಳನ್ನೂ ಹೇಗೆ ಓದಿಕೊಳ್ಳಲಾಗುತ್ತಿದೆ. ತಮತಮಗೆ ಬೇಕಾದಂತೆ ಓದಿಕೊಳ್ಳುವುದು ಯಾಕೆ?
ಇವೆಲ್ಲದರ ಹಿಂದೊಂದು ರಾಜಕೀಯ ಕೆಲಸ ಮಾಡುತ್ತಿರುತ್ತದೆ. ಅದು ತೀರಾ ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುತ್ತದೆ. ಅದು ನಮಗೆ ಗೊತ್ತಾಗದ ಹೊರತು, ನಮ್ಮ ಓದಿನ ರುಚಿ ನಮಗೆ ಸಿಗುವುದಿಲ್ಲ. ನಾವು ದಿಕ್ಕೆಟ್ಟವರಂತೆ ಓದುತ್ತಿರುತ್ತೇವೆ ಅಷ್ಟೇ.

ಈ ಪಾಲಿಟಿಕ್ಸ್ ಆಫ್ ರೀಡಿಂಗ್ ಕುರಿತು ಹಿರಿಯ ವಿಮರ್ಶಕರೂ, ಅನುವಾದಕರೂ ಲೇಖಕರೂ ಆದ ಓ ಎಲ್ ನಾಗಭೂಷಣ ಸ್ವಾಮಿ ಮಾತಾಡುತ್ತಾರೆ.
ಸಾವಣ್ಣ ಪ್ರಕಾಶನದ ಜಮೀಲ್ ಹೀಗೇನಾದರೊಂದು ಮಾಡೋಣ ಅಂತ ಹೇಳುತ್ತಲೇ ಇದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಂತಿದೆ. ಪ್ರತಿ ತಿಂಗಳೂ ಒಬ್ಬರು ಒಂದು ಉಪನ್ಯಾಸ ನೀಡುವ, ನಂತರ ಎಲ್ಲರೂ ಸೇರಿ ಆ ಕುರಿತು ಚರ್ಚಿಸುವ ಒಂದು ಉಪನ್ಯಾಸ ಮಾಲಿಕೆಯನ್ನು ಶುರುಮಾಡಬಾರದೇಕೆ ಅನ್ನಿಸಿತು. ಹೀಗೆ ಮಾಡಿ ಅಂದರೆ, ನೀವೇ ಅದರ ಸಾರಥ್ಯ ವಹಿಸಿಕೊಳ್ಳಿ ಅಂದರು ಜಮೀಲ್.
ಇದು ಮೊದಲನೆಯ ಉಪನ್ಯಾಸ ಮಾಲೆ. ದಯವಿಟ್ಟು ಗುರುತು ಹಾಕಿಕೊಳ್ಳಿ. ಈ ಭಾನುವಾರ ಸೇರೋಣ ಎಂದು ಎಂದು ಈ ಉಪನ್ಯಾಸ ಮಾಲಿಕೆಯ ಸಂಪಾದಕರು ಹಿರಿಯ ಪತ್ರಕರ್ತ, ಸಾಹಿತಿ ಜೋಗಿ ತಿಳಿಸಿದ್ದಾರೆ.
ಏನು-ಸಾವಣ್ಣ ಉಪನ್ಯಾಸ ಮಾಲಿಕೆ-ಓದು ರಾಜಕಾರಣ
ಎಲ್ಲಿ-ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಯಾವಾಗ-ಜನವರಿ 28, ಭಾನುವಾರ- ಬೆಳಗ್ಗೆ10.30
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications