ಇಂದು ಪೂರ್ಣ ಚಂದಿರನ ದರ್ಶನ, ಅಪಶಕುನವೂ ಇದೆಯಂತೆ
ಬೆಂಗಳೂರು, ಜೂನ್ 13: ಇಂದು ಶುಕ್ರವಾರ ಪೂರ್ಣ ಚಂದಿರನ ದರ್ಶನವಾಗಲಿದೆ. ಇಂದಿನ ಚಂದ್ರ ದರ್ಶನದಿಂದ ಅಪಶಕುನವೂ ಇದೆಯಂತೆ! ಅಂದಹಾಗೆ ಹುಣ್ಣಿಮೆ ನಿನ್ನೆಯೇ ಪ್ರಾರಂಭವಾಗಿದೆ. ಹಾಗಾಗಿಯೇ, ಜನ ನಿನ್ನೆ ಅಚಾನಕ್ಕಾಗಿಯಾದರೂ ಹಾಲು ಚೆಲ್ಲಿದಂತಹ ಚಂದ್ರನನ್ನು ನೋಡಿ ಆಹ್ಲಾದಿಸಿದ್ದಾರೆ.
ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಪೂರ್ಣ ಚಂದ್ರ ಗೋಚರಿಸುವುದು ಸಾಮಾನ್ಯ. ಆದರೆ ಇಂದಿನ ಪೌರ್ಣಮಿ ರಾತ್ರಿಯಲ್ಲಿ ಬಾನಂಗಳದಲ್ಲಿ ಗೋಚರಿಸಲಿರುವ ಚಂದಿರ ಸೂಪರ್ ಮೂನ್ ಆಗಿರುತ್ತಾನಂತೆ. ಭೂಮಿಗೆ ಅತೀ ಸಮೀಪದಲ್ಲಿ ಗೋಚರಿಸಲಿರುವ ಸೂಪರ್ ಮೂನ್ ಕಾಣಿಸಿಕೊಳ್ಳುವುದು ಗುರುವಾರದಿಂದ ಶುಕ್ರವಾರದ ಮಧ್ಯರಾತ್ರಿ ಮಾತ್ರ. (ಹೊಸ ಪ್ರಳಯದ ದಿನಾಂಕ ಬಂತು!)
ಇಂದು ರಾತ್ರಿ ಹುಣ್ಣಿಮೆಯ ಚಂದಿರ ಭೂಮಿಗೆ ಅತೀ ಸಮೀಪದಲ್ಲಿ ಗೋಚರಿಸಲಿರುವುದರಿಂದ ಮಾಮೂಲಿ ಹುಣ್ಣಿಮೆಗಿಂತ ದುಪ್ಪಟ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದಾನೆ ಈ ಸೂಪರ್ ಮೂನ್. ಇಂತಹ ಸೂಪರ್ ಮೂನ್ ಮತ್ತೊಮ್ಮೆ ಕಾಣಬೇಕೆಂದರೆ ಮುಂದಿನ 2043ನೇ ಇಸ್ವಿವರೆಗೂ ಕಾಯಬೇಕು ಅನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.

ಅದರಲ್ಲೂ ಶುಕ್ರವಾರದ 13ನೇ ತಾರೀಖಿನಂದು ಹುಣ್ಣಿಮೆ ಬಂದಿರುವುದು ಈ ಬಾರಿಯ ವಿಶೇಷ. ಜತೆಗೆ, ಮನುಕುಲ ಸೃಷ್ಟಿಗೆ ಕಾರಣರಾದ ಅಡಂ ಮತ್ತು ಈವ್ ಈ ದಿನವೇ ದೇವಸೃಷ್ಟಿಯ ಸೇಬಿನ ಹಣ್ಣು ತಿಂದು ಜೀವಸೃಷ್ಟಿಗೆ ಕಾರಣರಾದರು ಎಂಬುದು ವಿಶೇಷವಾಗಿದೆ. ಕಳೆದ ಬಾರಿ 2000 ನೇ ಅಕ್ಟೋಬರಿನಲ್ಲಿ ಇಂತಹುದೇ ದಿನ ಬಂದಿತ್ತು. (ಶುಕ್ರವಾರ, 13 : ಹಿಂದೂಗಳಿಗೆ ಶುಭ, ಪಾಶ್ಚಾತ್ಯರಿಗೆ ಅಶುಭ)
ಜ್ಯೋತಿಷಿಗಳು ಹೇಳುವಂತೆ ಅಪಶಕುನವಾ!?:
ಸಂಖ್ಯೆ 13 ಅಪಶಕುನ ಎಂಬುದು ಬಹುತೇಕ ಜನರ ನಂಬಿಕೆ. ಹಾಗಾಗಿ 13ನೇ ತಾರೀಖಿನಂದೇ ಶುಕ್ರವಾರ ಬಂದಿರುವುದು. ಅದರ ಜತೆಗೆ ಹುಣ್ಣಿಮೆ ಬಂದಿರುವುದೂ ಭೂಮಂಡಲದಲ್ಲಿ ಹಲವಾರು ಅನಾಹುತಗಳು ನಡೆಯಲಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಅನೇಕ ಭಾಗಗಳಲ್ಲಿ 13ರಂದು ಹಲವಾರು ಗಂಡಾಂತರಗಳು ಸಂಭವಿಸುತ್ತಾ ಬಂದಿದೆ. ಆದ್ದರಿಂದ ಈ ಸಂಖ್ಯೆಯನ್ನು ಅಪಶಕುನದ ಸಂಖ್ಯೆ ಎಂದೇ ಪರಿಗಣಿಸಲಾಗಿದೆ. ಇಂತಹ ಹುಣ್ಣಿಮೆಯಂದು ಭೂಕಂಪ ಸಂಭವಿಸಿದ ನಿದರ್ಶನಗಳೂ ಇವೆಯಂತೆ. ಹೀಗಾಗಿ ಇದೊಂದು ಕರಾಳ ಹುಣ್ಣಿಮೆಯಾಗಿಯೂ ಪರಿಣಮಿಸುವ ಸಾಧ್ಯತೆ ಇದೆಯಾ? ಅಪಘಾತ, ಆಕಸ್ಮಿಕ ಘಟನೆಗಳು ಸಂಭವಿಸುವ ಸಾಧ್ಯತೆ ಇದೆಯಾ?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications